Home / ಲೇಖನ / ವ್ಯಕ್ತಿ / ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್ ಬಹದ್ದೂರ್ ಶಾಸ್ತ್ರಿ

ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು… ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು ಯುದ್ಧ ಮಾಡಲು ಶುರುವಾಯಿತು….!

ಅನಿವಾರ್‍ಯವಾಗಿ ಯುದ್ಧ ಮಾಡಲು ಭಾರತ ಮುಂದಾಯಿತು. ಹೊಸದಾಗಿ ಅಧಿಕಾರ ಸ್ವೀಕರಿಸಿದ ಶಾಸ್ತ್ರೀಜಿಯವರು ಇಡೀ ಸೈನ್ಯವೇನು ಇಡೀ ದೇಶವನ್ನೇ ಹುರಿದುಂಬಿಸಿದರು.

ಇದೇ ಸಮಯದಲ್ಲಿ- ಸುದ್ದಿ ಮಾಧ್ಯಮದವರು ಗಣ್ಯರು ಪ್ರಮುಖರು ಎಲ್ಲರೂ ಪ್ರಧಾನಿಯವರನ್ನು ಮುತ್ತಿ “ನಿಮ್ಮ ಮುಂದಿನ ಸವಾಲ್ ಯಾವುದು?” ಎಂದು ಎಲ್ಲರೂ ಕೇಳಿದರು.

ಲಾಲ್‌ಬಹದ್ದೂರ್ ಶಾಸ್ತ್ರಿಯವರು ಕ್ಷಣ ಹೊತ್ತು ಗಂಭೀರವಾಗಿ ಚಿಂತಿಸಿದರು. ಅವರೇ ಮಾತಿಗೆ ತೊಡಗಿದರು…

“ನನ್ನ ಮುಂದಿರುವ ಸವಾಲು ಎಂದರೆ… ನಮ್ಮ ದೇಶವನ್ನು ಬಲಿಷ್ಠವನ್ನಾಗಿಸುವುದು” ಎಂದರು.

ಅಲ್ಲಿದ್ದವರೆಲ್ಲ ಅವಕ್ಕಾಗಿ ಕುಳಿತರು.

ತುಸು ಹೊತ್ತು ಗಂಭೀರತೆಯಿಂದ ಚಿಂತಿಸಿದ ಸುದ್ದಿ ಮಾಧ್ಯಮದವರೆಲ್ಲ “ಸಾರ್, ಒಂದೋ ಎರಡೋ ಮೂರೋ ಸಮಸ್ಯೆಗಳಿದ್ದರೆ ನೀವು ಎದುರಿಸುವಿರೆಂದು ಭಾವಿಸಬಹುದಾಗಿತ್ತು! ಆದರೆ…. ಬಲಿಷ್ಠ ಶತ್ರು ರಾಷ್ಟ್ರ ಚೀನಾ ಆಕ್ರಮಣದ ಜೊತೆಗೆ ದೇಶ, ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆಯಲ್ಲಾ? ಹೇಗೆ ಮುನ್ನಡೆಸುವಿರಿ?” ಎಂದು ಮತ್ತೊಂದು ಪ್ರಶ್ನೆ ಎಸೆದರು.

ಆಗ ಯೋಚಿಸುವ ಮೌನ ವಹಿಸುವ ಗೋಜಿಗೇ ಹೋಗದೆ ಥಟ್ಟನೆ- “ನಾನು ನನ್ನ ಜನರನ್ನು ನಂಬಿದ್ದೇನೆ. ಅವರ ಬಲವನ್ನು ಅರಿತಿದ್ದೇನೆ. ಜೈಜವಾನ್, ಜೈಕಿಸಾನ್ ಎಂದು ರೈತಣ್ಣವನ್ನು ಬಡಿದೆಬ್ಬಿಸುತ್ತೇನೆ. ಇಡೀ ದೇಶವಾಸಿಯು ಪ್ರತಿ ಸೋಮವಾರ ರಾತ್ರಿ ಒಂದು ಊಟ ದೇಶಕ್ಕಾಗಿ ಬಿಡಲು ವಿನಂತಿಸುತ್ತೇನೆ. ಭಾರತೀಯ ಸೇನೆಯಲ್ಲಿ ಒಂದು ರಾಷ್ಟ್ರೀಯತೆ ಐಕ್ಯಮಂತ್ರ ರಾಷ್ಟ್ರ ಪ್ರೇಮ ದೇಶಭಕ್ತಿ ಮೆರೆಯಲು ಕರೆ ಕೊಡುವೆ… ದೇಶದ ಅತ್ಯುನ್ನತ ಸೇವಕನಾಗಿ ನಾನೂ ರಾತ್ರಿ ಊಟ ತ್ಯಜಿಸಿರುವೆ. ಅದನ್ನು ಅಭ್ಯಾಸ ಮಾಡಿ ಎಲ್ಲರಿಗೆ ವಿನಂತಿಸಿರುವೆ. ನನ್ನ ಜನ ನನ್ನ ಮಾತುಗಳನ್ನು ದೇಶವನ್ನು ಮರೆಯಲಾಗದು… ವಿಜಯಪಥ, ಜಯಪಥ, ಪ್ರಗತಿಪಥ ನಮ್ಮದು. ಬರೀ ಒಂದು ಚೀನಾವಲ್ಲ ಅಂಥಾ ನೂರು ಚೀನಾ ದೇಶಗಳು ದಾಳಿ ಮಾಡಿದರೂ ನಮ್ಮ ಸೈನ್ಯ ಬಲವನ್ನು ಎದುರಿಸಲಾರವು” ಎಂದು ಶಾಸ್ತ್ರೀಜಿಯವರು ಅಂದರು.

ಅಲ್ಲಿದ್ದವರೆಲ್ಲ ದಂಗುಬಡಿದು ಹೋದರು. “ಸಾರ್….. ನಿಮ್ಮ ಮಾತು ಕೃತಿ ಆದರ್ಶ ಸರಳ ಸಜ್ಜನಿಕೆ ಖಂಡಿತ ದೇಶವನ್ನು ಮುನ್ನಡೆಸುವವು.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ನಿಮ್ಮ ಜೊತೆಗೆ ನಾವೊಂದೇ ಇಲ್ಲ! ಇಡೀ ದೇಶದ ಜನತೆಯೇ ಇದೆ…” ಎಂದು ಹೃದಯ ತುಂಬಿ ಅಂದರಲ್ಲದೆ, ನಮಸ್ಕರಿಸಿ, ಹರ್ಷದಿ ಹೊರಟುಹೋದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...