Home / ಕವನ / ಕವಿತೆ / ಮುಖವಾಡಗಳು

ಮುಖವಾಡಗಳು

ಜನ್ಮ ಜನ್ಮಾಂತರದ ಶಾಪ ನಿಮಗಂಟಿದೆ
ಬೇಡವೆ ನಿಮಗೆ ಪರಿಹಾರ?
ನೋಡಿಲ್ಲಿ ನೋಡಲ್ಲಿ ಮೃತ್ಯುವಿನ ದೂತ
ಕಾಯುತಿರುವ ನಿಮ್ಮ ಮನೆಯ
ಮುಂಬಾಗಿಲು ಹಿಂಬಾಗಿಲು-

ಶಕುನ ಜಾತಕ ಜ್ಯೋತಿಷಿಗಳು
ಕಾಲಜ್ಞಾನಿ ಸಂಖ್ಯಾಶಾಸ್ತ್ರ ವಾಸ್ತುದವರು
ದಿನ ಬೆಳಗಾದರೆ ಗಂಟಲು ಕಿರುಚಿ ಹೇಳಿ ಹೇಳಿ
ಹೆದರಿಸಿ ಎದೆಯೊಡೆಸಿ ಸಾಯಿಸುತಿಹರು ಮುಗ್ಧರ-

ಮತ್ತೆ ಪರಿಹಾರಕೆ ಅವರೇ ದಾಳಗಳನೆಸೆದು
ಕತ್ತಲೆಕೋಣೆಗೆ ಹೊಗೆಹಾಕಿ ದೇವರೆ ಬಂದಿಹನಿಲ್ಲಿ
ಮಾತನಾಡುವನು ನಿಮ್ಮೊಂದಿಗೆ ಭಯ ಬೀಳದಿರಿ
ನೋಡಿ ನೋಡಿ ಕೇಳಿ ಭಕ್ತರೆ ಭಕ್ತಿ ಇರಲಿ…
ಮುಖವಾಡ ಸ್ವಾಮಿಗಳ
ಒಳಗೊಳಗೇ ನಗು ಹಣದ ಚೀಲ ಝಣಝಣ.

ಮಾಟಮಂತ್ರ ವಶೀಕರಣ ನರಬಲಿ ಪ್ರಾಣಿಬಲಿ
ಹರಕೆ ಮಡೆಸ್ನಾನ ಪಂಕ್ತಿಭೇದ ದೇವದಾಸಿ
ಬೆತ್ತಲಸೇವೆ ಪಾದಪೂಜೆ ಅಡ್ಡಪಲ್ಲಕ್ಕಿ
ಆಹಾ! ಒಂದೇಽ ಎರಡೇಽ ಇವರ
ನಂಬಿಕೆ ಬಿಂಬಿಸುವ ಹುನ್ನಾರ.

ಅಯ್ಯೋ ದುರ್‍ಭಾಗ್ಯ ದೇಶವೆ
ಎಷ್ಟೊಂದು ನರಳುವಿಕೆ ಅಂಧಕಾರ
ಹುಣ್ಣಿಮೆಯ ಬೆಳಕಿನಲ್ಲೂ ಅಮವಾಸ್ಯೆ ಕತ್ತಲೆಯೆನುತ
ಭೂತಪ್ರೇತಗಳೆಂದು ಅರಿಷಿಣ ಕುಂಕುಮ ಎರಚುವವರು-
ರಾಜಕೀಯ ಖುರ್ಚಿಗೂ ಬಲಿ; ಉರುಳಿಸಲೂ ಬಲಿ
ಕುರಿ ಕೋಳಿ ಹಸು ಕಾಡೆಮ್ಮೆ ಸಾಕಿಲ್ಲ ಇವಕೆ
ಹಸುಗೂಸು ಕಂದಮ್ಮಗಳು ಬೇಕಿವಕೆ
ತಪ್ಪಿದರೆ ಕಂಠಕೆ ಬೆಚ್ಚಿಬೀಳಿಸುವ ಹುನ್ನಾರ.

ಗೂಬೆ ಗೂಗೂ ಅಂದರೊಂದು ಕಾಗೆ ಕಾಕಾ ಅಂದರೊಂದು
ಹಲ್ಲಿ ಲೊಚಗುಟ್ಟಿದರೊಂದು ಬೆಕ್ಕು ದಾಟಿದರೊಂದು
ಅಪಶಕುನದ ಮಾತೆತ್ತಿ ಸಾಯಿಸುವ ಪಾತಕಿಗಳು.

ಬಣ್ಣದ ವೇಷಗಳ ಭಯಂಕರ ಮುಖವಾಡಗಳು
ಕಳಚಿ ಬೀಳಲಿ ಮಾನವೀಯತೆ ಮೆರೆಯಲಿ…
ಚಿಂತನ ಮಂಥನಗಳಿಗೆ ಹೆದ್ದಾರಿಯಾಗಲಿ…
ಮನುಜರಾಗಲಿ ವಿಶ್ವಾಸಬೆಳೆಸಲಿ.
*****
೧. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದ ವಿಷಯ: ಇದರ ಬಗೆಗೆಯೇ ಒಂದು ಕರಡು ರಚನಾ ಸಮಿತಿ ಮಾಡಬೇಕೆನ್ನುವ ಒತ್ತಾಯ-೨೫ ನವೆಂಬರ್ ೨೦೧೩
೨. ಮೂಢನಂಬಿಕೆಯವರು ವಿಚಾರವಾದಿಗಳಾದ ಮಹಾರಾಷ್ಟ್ರದ ನರೇಂದ್ರ ದಾಬೋಲಕರ್, ಗುಲ್ಬರ್ಗದ ಲಿಂಗಣ್ಣ ಸತ್ಯಂಪೇಟೆ, ಧಾರವಾಡದ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಕೊಂದರು.
೩ ಸರಕಾರಕ್ಕೆ ಮಾಡಬೇಕಾದಂತಹ ಅನೇಕ ಕೆಲಸಗಳಿವೆ: ಕೃಷಿಸಮಸ್ಯೆ, ನೆಲ, ಜಲ, ಮಹಿಳೆ, ಮಕ್ಕಳು, ಶಿಕ್ಷಣ, ಯುವಕರಿಗೆ ಉದ್ಯೋಗ, ವೃದ್ಧರ ಸಮಸ್ಯೆ ಮುಂತಾದವುಗಳು. ಸುಮ್ಮನೆ ಎಲ್ಲರ ಸಮಯ ಹಾಳು + ದುಡ್ಡುದಂಡ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...