Home / ಕವನ / ಕವಿತೆ / ಗೂಢಗುಂಜನ

ಗೂಢಗುಂಜನ

(ಒಂದು ಅಣಕ)


ಬಾ, ಬಾರ ಸಾಂತಿ, ಈ ಊರ ಸಂತಿ ಯಾ-
ವಾರವೇನೊ….ಆಂತಿ !
ಯಾ ವಾರವೇನು ? ಮುಳ್ಳಾಗ ಜೇನು ತಲಿ-
ಯಾಗ ಹೇನು ಚಿಂತಿ !
ಬಡಿದೀತು ಭ್ರಾಂತಿ, ತಡಿದೀತು ತಂತಿ ಈ
ಪೊಡವಿ ಗುಂತಗುಂತಿ !
ಆಡುವದು ಸಾಕ, ಹಾಡೊಂದ ಬೇಕ, ಮಿಡಿ-
ಮಿಡಿಯ ಕರಳ ತಂತಿ !


ಹಾಸ್ಯಾವ ಕುಂಬಳದ ಬಳ್ಳಿ, ನಿಂದು ಬಲು ತಳ್ಳಿ
ಹಚ್ಚ ಬ್ಯಾಡ ಕೊಳ್ಳಿ –
ಕುಂಬಳದ ಕಾಯಿ ಹುಂಬರಿಗು ತಾಯಿ ಹಂ-
ಬಲಿಸಬ್ಯಾಡ ಮಳ್ಳೀ !
ನೀ ಮಳ್ಳಿ ತಿಂತಿದಿಯ ಹುಳ್ಳಿ ಹಸಿಯ ಈ-
ರುಳ್ಳಿ ಊರು ಹಳೆಹಳ್ಳಿ-
ನಿನ ಹಳ್ಳಿ ಸುತ್ತು ಬರಿ ಎಮ್ಮಿ-ಎತ್ತು, ಬೆಳ-
ದಽದ ಸಾಲುಗಳ್ಳಿ !


ಸಂದಿ ಸಂದಿ ತಿರಗತಾವ ಹಂದಿ, ಎಲ್ಲ ತುರ-
ಮಂದಿ ನಾಡಿನ್ಯಾಗ-
ತುರಮಂದಿಯೊಳಗ ತಾಯ್-ತಂದಿ ಹುಡಿಕಿದರ
ಸಿಗುವ ಬಗೀ ಹ್ಯಾಂಗ ?
ಅಂಗಡಿಯ ಮುಂದ ಗೊಂಗಡಿಯನೊಂದ ಜಂ-
ಗಮಗ ನೀಡಿ ನಿಲ್ಲಽ-
ಎಲ್ಲಾರ ಕಿವಿಗೆ ಕೇಳಿಸಲಿ ಕವಿಗೆ ಆ-
ಗಸದ ರವಿಗೆ ಸೊಲ್ಲಽ!


ಬಿದ್ದದ್ದು ಬೀಳು ಎದ್ದದ್ದು ಏಳು, ಮಿ-
ಕ್ಕಿದ್ದು ಬಾಳು ಕೇಳು !
ಬಾಳನ್ನ ಸೀಳು, ಗೋಳನ್ನ ತಾಳು; ಕಾ-
ಳನ್ನ ತೂರಲೇಳು !
ನಿನ್ನೊಡಲ ಸಿಡಿಲು ಸಿಡಿದಾತು ಕಡಲು ಕಡೆ-
ಯೆಲ್ಲಿ ಅದಕ ಹೇಳು!
ಕಡೆಯಿರದ ಕಡಲು ಸುಡಸುಡನೆ ಸುಡಲು ಮ್ಯಾಲ್
ಮೂಡಿತೊಂದು ಚೇಳು !


ಆಡಾಽಕ ನಿಂತಿ ನೀ ಪಗಡಿ ಎಲ್ಲ ತಾರಾ ತಿಗಡಿ
ಮೂಗ್ಗೆ ಬಂತು ನೆಗಡಿ-
ಮೊದಲಽನ ಇದ್ದೀದಿಯ ಸೊಗಡಿ, ಹಲ್ಲು ಬಿದ್ದ
ಬಗಡಿ ಹಾಂಗ ನಿನ್ನ ಬುಗಡಿ !
ಸವಿಯೆನಿಸಬೇಕು ಹ್ಯಾಂಗ ಕೂಳು, ತಿಂಬುದೆಲ್ಲ ಹಾಳು
ಇಲ್ಲದಕ ಸ್ವಾದಾ!
ಅಸ್ವಾದದೊಳಗ ಸುಸ್ವಾದ ಕಾಣಬೇಕಽ
ನಾದ ಕೇಳು ಪಡಿಸಾದಾ !


ಹುಲಿ ಕರಡಿ ತುಂಬಿರುವ ಮರಡಿ ನೋಡ ನೀ
ಕುರಡಿ ಕಂಗಳಿದ್ದು-
ಮರಡ್ಯಾಗ ಸಂತಿ ಸೇರೇದ ಹಂತಿ, ತಿಂ-
ದೀಯ ಪೆಟ್ಟು ಬಿದ್ದು !
ಗೋಕಾಂವಿ ಬೇಕೊ, ಬಾದಾಂವಿ ಬೇಕೊ, ಬೆಳ-
ಗಾಂವಿ ಸಂತಿ ಬೇಕೋ ?
ಗೋಕಾಂವಿ ಬೆಲ್ಲ, ಬಾದಾಂವಿ ಆಲ್ಲ, ಬೆಳ-
ಗಾಂವಿ ಬೆಳಕೆ ಬೆಳಕೋ !
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...