ಮೋಡ

ಜಗದ ಜೀವವನುಂಡು ಹಲವು ಬಗಗಳ ಕಂಡು
ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ
ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ
ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ.

ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು
ಹಸಿತ ವದನದಿ ತೋರಿ ಕುಣಿಕುಣಿದು ನಲಿದಾಡಿ
ನಸುಮುನಿಸ ಬೀರುತ್ತ ಉದ್ದವೋ ಗಿಡ್ಡವೋ
ಉಸಿರೆಳೆದು ಭಯರೂಪು ತಾಳುತ್ತ ನಡೆಯುತಿಹೆ.

ನೆಲಕಿಂತ ಆಗಸವೆ ನಲಿಯಲ್ಕೆ ಚೆಲುವೆಂದು
ಅಲೆದಲೆದು ತಿರೆ ನೋಡಿ ನಗುತಿರುವೆ ಹಾಸ್ಯದಿಂ
ಮೇಲಿಂದ ಧರೆಯೊಲವ ನೋಡುವುದೆ ಸೂಗಮೆಂದು
ಹಾಲಿನಂತೆಸೆಯುತಿಹೆ ನಭಮಾಡದಲಿ ನಿಂದು.

ಬಿತ್ತರದ ಗಗನದಲಿ ತಡೆಯುವವರಾರಿಲ್ಲ
ಚಿತ್ತಾರಮಂ ಬರೆದು ಮುಖಗೊಂಡು ಸಿಂಗರದಿ
ಚಿತ್ರತರ ಜಲಧಿಗನ್ನಡಿಯಲ್ಲಿ ಮೊಗ ನೋಡಿ
ಮುತ್ತುದುರಿಸುತ್ತಿರುವೆ ಜಲದೇವಿಯಾಗೆಸೆವೆ.

ಬಾನ ಬೇಸಿಗಯುಂಡು ನಕ್ಷತ್ರದೊಡಲಲ್ಲಿ
ನೀನು ಮೆರೆಯುತ್ತಿರಲು ಮಚ್ಚರಿಸಿ ನೀರೆಲ್ಲ
ಕಾಣಿಸದೆ ಮೈಮರೆಸಿ ಗಗನವೇರುತ್ತಿರಲು
ಮೌನವೇ ತುಂಬಿತ್ತು ಬಲು ಬಿಸಿಲ ಘಾಸಿಯಲಿ.

ಇಲ್ಲ ನೆರೆ-ಇಲ್ಲ ಕರೆ ನಿನ್ನ ಸುಳಿವಿನ್ನಿಲ್ಲ
ಬಲ್ಲಿದರು ಬಡವರುಂ ಮೂಕಜಂತುಗಳೆಲ್ಲ
ಅಲ್ಲಲ್ಲಿ ತೊಳಲುತ್ತಲರಸಿದರು ಬೇಸತ್ತು
ಮಲ್ಲಿಗೆಯ ನಗುವೆಲ್ಲ ಮಂಕಾಯ್ತು ನೀನಿರದೆ.

ನಿನಗೆ ತಿಳುಹುವರಾರು ನಿನ್ನ ಕರೆವವರಾರು?
ನಿನಗೆ ಕಷ್ಟವನೊರದು ಬಾಯೆನುವರಾರೆಂದು
ಕಣುಗಳುಂ ಬತ್ತುತಿರೆ ರಾಯಭಾರಿಯು ವಾಯು
ಜನದುರಿಗೆ ದಯೆಗೊಂಡು ನಿನ್ನೆಡೆಗೆ ಹಾರಿದನು.

ಅಂದಾ ಭಗೀರಥನು ಭಾಗೀರಥಿಯ ತಂದ
ಇಂದೆಮಗೆ ಗಗನದಿಂ ವಾಯುತಹ ನಿನ್ನನ್ನು
ಚೆಂದದಿಂದಿಳಿದಿಳಿದು ಬಾ ತಾಯಿ ಮೈದಳೆದು
ಬಂದೆಮ್ಮ ಒಳಹೂರಗೆ ಜೀವದುಂಬಿಸು ದೇವಿ.

ಮಳೆಯ ರೂಪವ ತಳೆದು ಹನಿಯ ಕೈಗಳ ಪೊಂದಿ
ಇಳೆಗಿಳಿದು ಬಾ ನಮ್ಮ ಚೆಲುವ ಬನ ತೋಟಗಳ
ನಲಿಸಿ ನಗಿಸುತಲೊಮ್ಮೆ ತವರೂರ ಸಂಚರಿಸು
ಜಲದೊಡಲಿನಿಂ ಬಂದ ವಾಹಿನಿಯರಂ ನೋಡು.

ಬರುವ ರಭಸಕೆ ಕಪ್ಪು ಮುಪ್ಪಾಗಿ ಮುರಿಯುತಿದೆ.
ಹೊರಟಳೆಂದಾ ಗಗನ ಕತ್ತಲೆಯ ಕಾರುತಿದೆ
ಮರೆಯಾದ ನೇಸರಂ, ನೀನಲ್ಲಿ ನಡೆದಿರಲು
ಕರಗಿದೆದೆಯಿಂ ಬಂದೆ ಬಾ ತಾಯಿ ಬಾಗುವವು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...