Home / ಕವನ / ಕವಿತೆ / ಹೋರಾಡುತ್ತೇನೆ ಶಬ್ದಗಳಿಂದ

ಹೋರಾಡುತ್ತೇನೆ ಶಬ್ದಗಳಿಂದ

ವ್ಯವಸ್ಥೆಯ ಒಳಗಿನಿಂದ
ಒಂದೊಂದೇ ಪ್ರಶ್ನೆಗಳೇಳುತ್ತವೆ
ರಾಜಕೀಯದ ಬಣ್ಣ ಬಯಲಾಗುತ್ತದೆ
ಶಸ್ತ್ರಾಸ್ತ್ರ ಕೆಳಗಿಟ್ಟ ಅವರು
ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು!

ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ
ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ?
ಶಾಂತಿ ಒಪ್ಪಂದ ಆಗಿದೆ ಅವರೊಂದಿಗೆ
ಶಸ್ತ್ರಾಸ್ತ್ರ ಕೆಳಗಿಟ್ಟು ಶಾಂತವಾಗಿದ್ದಾರೆ
ಹಗ್ಗದ ಮೇಲಿನ ನಡಿಗೆ ನಡೆಯುತ್ತಿದ್ದಾರೆ ನೋಡು!

ಪೋಲೀಸು ರಾಜ್ಯದಲ್ಲಿ ಸೈನ್ಯದ ಸಮಾವೇಶ
ಸಂಸ್ಕೃತಿಯ ಹೆಸರಿನಲಿ ಸಭೆ ಸಮಾರಂಭಗಳು
ಘೋಷಣೆಗಳು ಮೊಳಗುತ್ತಿವೆ ನೋಡು!
ಧರ್ಮ, ಜನಾಂಗಗಳ ಪ್ರಶ್ನೆ, ಓಟಿನ ಲೆಕ್ಕಾಚಾರ
ರೈತ, ಕಾರ್ಮಿಕರ ಸವಾಲು ನೆಲಕಚ್ಚಿವೆ ನೋಡು!

ಚಿವುಟಿ ಹಾಕಿದ ಕನಸುಗಳ ಸಮಾಧಿ
ಸಮತೆಯ ಮಣ್ಣಲ್ಲಿ ಚಿಗುರೊಡೆದು
ಮತ್ತೆ ಮತ್ತೆ ಪ್ರಶ್ನಿಸುತ್ತಿವೆ ನೋಡು!
ರೈತರ ಆತ್ಮ ಹತ್ಯೆಗಳಿಗೆ ಕೊನೆಯೆಂದು?
ಕಾರ್ಮಿಕರ ತುತ್ತಿಗೆ ಲಾಕೌಟ್ ನಿಲ್ಲುವದೆಂದು?
ದುಡಿಯುವ ಕೈಗಳು ನೇಣಿಗೆ ಶರಣಾಗಿ
ಊರ ಹೊರಗಿನ ಮರಗಳಿಗೆ ಹೆಣಗಳು
ಕೇಳುವವರಿಲ್ಲದೆ ನೇತಾಡುತ್ತಿವೆ ನೋಡು!

ಹೊತ್ತು ನಿಂತಿದ್ದಾಳೆ ಧರಿತ್ರಿ
ಹೆಗಲ ಮೇಲೆ ಹೆಣಭಾರದ ಹೊರೆ ನೋಡು
ಅಸಹಾಯಕ ಮಕ್ಕಳ, ಮುದುಕರ
ಜವಾಬ್ದಾರಿ, ಖಾಲಿ ತುತ್ತಿನ ಚೀಲ ತುಂಬಲು
ಅಗ್ಗದ ಕೂಲಿಯಾಗಿದ್ದಕ್ಕೆ ಯಾರು ಹೊಣೆ ಹೇಳು?
ಸಹನೆ ಮೀರುವ ಹೊತ್ತಲ್ಲೂ ಹೇಳುತ್ತಿದ್ದಾಳೆ
ಬಂದೂಕು ಬೇಡ ಹೋರಾಡಲು ಶಬ್ದಗಳಿವೆಯಲ್ಲ!
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...