Home / ಬಾಲ ಚಿಲುಮೆ / ಕವಿತೆ / ತಕ್ಕ ಶಾಸ್ತಿ

ತಕ್ಕ ಶಾಸ್ತಿ

ಸುಳ್ಳ ನರಿಯು
ಕಳ್ಳ ವೇಷ
ಹಾಕ ಬಯಸಿತು

ಮೋಸ ಮಾಡಿ
ಹೊಸ ಬೇಟೆ
ಹಿಡಿಯ ಹೊರಟಿತು

ಬಿಳಿಯ ಕೋಟ
ನ್ನೊಂದು ತಾನು
ಧರಿಸಿ ಬಂದಿತು

ಸ್ಟೆತಾ ಸ್ಕೋಪು
ಕೈಲಿ ಹಿಡಿದು
ನಲಿಯತೊಡಗಿತು

ನಾನು ವೈದ್ಯನಾದೆ
ಎಂದು ಹೇಳಿ
ಕೊಂಡಿತು

ಒಂಟಿ ಕುದುರೆ
ಗಂಟಲಲ್ಲಿ
ನೋವು ಎಂದಿತು

ಭಾರಿ ಗಂಟು
ಕೊಡುವೆ ಎಂದು
ಆಸೆ ತೋರಿತು

ಪುಟ್ಟ ಮೊಲವು
ಜ್ವರದ ತಾಪದಿಂದ
ಬಂದಿತು

ಪರೀಕ್ಷೆಗೆಂದು
ಒಳಗೆ ಕರೆದು
ಗುಳುಂ ಮಾಡಿತು

ದಷ್ಟಪುಷ್ಟ
ಜಿಂಕೆಯೊಂದು
ಭೇಟಿ ನೀಡಿತು

ಸ್ಟೆತಾಸ್ಕೋಪಿನಿಂದ
ಅದರ ಮೆಟ್ರೆ
ಹಿಸುಕಿತು

ಭಾರಿ ವೈದ್ಯನಂತೆ
ತಾನು ಪೋಸು
ಕೊಟ್ಟಿತು

ನರಿಯು ವೈದ್ಯನಾದ
ಸುದ್ದಿ ಹುಲಿಗೆ
ತಿಳಿಯಿತು

ಬಾಯಿ ಹುಣ್ಣು
ಹುಲಿಗೆ ಒಂದು
ನೆಪವದಾಯಿತು

ಹುಲಿಯ ಕಂಡು
ನರಿಯ ಎದೆಯು
ನಡುಗ ಹತ್ತಿತು

ನಡುಗುತ್ತಿದ್ದ
ನರಿಗೆ ಹುಲಿಯು
ಅಭಯ ನೀಡಿತು

ಬಾಯಿ ಒಳಗೆ
ತಲೆಯನಿಟ್ಟು
ನೋಡು ಎಂದಿತು

ಕಳ್ಳ ನರಿಯ
ಸಾವು ಹುಲಿಯ
ಬಾಯೊಳಿದ್ದಿತು

ರುಂಡವಿರದ
ನರಿಯ ದೇಹ
ಹೊರಗೆ ಬಂದಿತು

ಮೋಸಗಾರ
ನರಿಗೆ ತಕ್ಕ
ಪಾಠ ಕಲಿಸಿತು

ಜಗದಲಿರುವ
ನರಿಗಳೆಲ್ಲ
ವೇಷ ತೊರೆಯಲಿ

ಕಪಟ ವೇಷ
ಸುಳ್ಳು ಮೋಸ
ಅಳಿದು ಹೋಗಲಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...