Home / ಕವನ / ಕವಿತೆ / ಕಾಡಿನ ದಾವೇದಾರ

ಕಾಡಿನ ದಾವೇದಾರ

ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು
ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ
ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು
ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು.

ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ
ಜಿನುಗುವ ನೀರ ಒರತೆಯಾಗಿ
ಹುಟ್ಟು ಸಾವುಗಳ ಜಾಡು ಹಿಡಿದವನು
ಕಾಡಿನ ಏಕಾಂತದಲ್ಲಿ ಹಕ್ಕಿಗಳ ಹುಡುಕಾಡಿದವನು.

ಬೊಚ್ಚು ಬಾಯಿಯಲ್ಲಿ ಹಲ್ಲುಗಳು ಹುಟ್ಟಲು
ಗಿಡಮೂಲಿಕೆಗಳ ಶೋಧಿಸಿದವನು.
ಆಗಸದಲ್ಲಿ ಫೈಯಿಂಗ್ ಸಾಸರ್ಸ್ ಹಾರಿಸಿ,
ಮಾಯಾ ಲೋಕದಲ್ಲಿ ಚಂದ್ರನ ಚೂರು ಕಂಡವನು.

ಕಾಡಿನ ಸಂತನ ಪಯಣ ಹುಲಿಯೂರಿನಿಂದ
ಆರಂಭ, ಜುಗಾರಿ ಕ್ರಾಸ್‌ನಲ್ಲಿ ನಿಂತು ನಿರೀಕ್ಷಣೆ,
ಚಿದಂಬರ ರಹಸ್ಯ ಭೇದಿಸುವ ತವಕದಲ್ಲಿ
ಅಬಚೂರಿನ ಪೋಸ್ಟಾಫೀಸಿನ ನಿರ್ಣಾಯಕ ಘಟ್ಟದಲ್ಲಿ.

ಮನುಷ್ಯ ನಿರ್ಮಿತ ನಾಗರೀಕ ಗೋಡೆಗಳಾಚೆ
ತಬರನಿಗಾಗಿ ತುಡಿದು ಚಿಟ್ಟೆ ಏರೋಪ್ಲೇನ್ ಹತ್ತಿದವನು.
ಕಾರ್ವಾಲೋದಿಂದ ಕಿರಗೂರಿನ ಗಯ್ಯಾಳಿಯ ಬಳಿಗೆ
ಭಾವಲೋಕದಲ್ಲಿ ಬ್ರಹ್ಮಾಂಡ ಮೇಳ.

ದೇವರು ದರ್ಮಗಳಿಲ್ಲದ ಲೋಕದಲಿ ವಿಹಾರ,
ಚೀಂಕ್ರನಿಂದ ಅರಿಸ್ಟಾಟಲ್‌ನವರೆಗೆ
ಮನುಷ್ಯರ ಮಿಸ್ಸಿಂಗ್ ಲಿಂಕ್ಸ್ ಜೋಡಿಸುತ್ತ
ವಿಜ್ಞಾನಿ, ಋಷಿಗಳ ಮುಖಾಮುಖಿ ಮಾಡುತ್ತ
ಬದುಕು ಸವೆಸಿದ ನೀನು ಪ್ರವಾದಿಯಲ್ಲ,
ಸಂತನಲ್ಲದ ಸಂತ ಕಾಡಿನ ದಾವೇದಾರ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...