Home / ಕವನ / ಕವಿತೆ / ಕಾಡಿನ ದಾವೇದಾರ

ಕಾಡಿನ ದಾವೇದಾರ

ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು
ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ
ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು
ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು.

ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ
ಜಿನುಗುವ ನೀರ ಒರತೆಯಾಗಿ
ಹುಟ್ಟು ಸಾವುಗಳ ಜಾಡು ಹಿಡಿದವನು
ಕಾಡಿನ ಏಕಾಂತದಲ್ಲಿ ಹಕ್ಕಿಗಳ ಹುಡುಕಾಡಿದವನು.

ಬೊಚ್ಚು ಬಾಯಿಯಲ್ಲಿ ಹಲ್ಲುಗಳು ಹುಟ್ಟಲು
ಗಿಡಮೂಲಿಕೆಗಳ ಶೋಧಿಸಿದವನು.
ಆಗಸದಲ್ಲಿ ಫೈಯಿಂಗ್ ಸಾಸರ್ಸ್ ಹಾರಿಸಿ,
ಮಾಯಾ ಲೋಕದಲ್ಲಿ ಚಂದ್ರನ ಚೂರು ಕಂಡವನು.

ಕಾಡಿನ ಸಂತನ ಪಯಣ ಹುಲಿಯೂರಿನಿಂದ
ಆರಂಭ, ಜುಗಾರಿ ಕ್ರಾಸ್‌ನಲ್ಲಿ ನಿಂತು ನಿರೀಕ್ಷಣೆ,
ಚಿದಂಬರ ರಹಸ್ಯ ಭೇದಿಸುವ ತವಕದಲ್ಲಿ
ಅಬಚೂರಿನ ಪೋಸ್ಟಾಫೀಸಿನ ನಿರ್ಣಾಯಕ ಘಟ್ಟದಲ್ಲಿ.

ಮನುಷ್ಯ ನಿರ್ಮಿತ ನಾಗರೀಕ ಗೋಡೆಗಳಾಚೆ
ತಬರನಿಗಾಗಿ ತುಡಿದು ಚಿಟ್ಟೆ ಏರೋಪ್ಲೇನ್ ಹತ್ತಿದವನು.
ಕಾರ್ವಾಲೋದಿಂದ ಕಿರಗೂರಿನ ಗಯ್ಯಾಳಿಯ ಬಳಿಗೆ
ಭಾವಲೋಕದಲ್ಲಿ ಬ್ರಹ್ಮಾಂಡ ಮೇಳ.

ದೇವರು ದರ್ಮಗಳಿಲ್ಲದ ಲೋಕದಲಿ ವಿಹಾರ,
ಚೀಂಕ್ರನಿಂದ ಅರಿಸ್ಟಾಟಲ್‌ನವರೆಗೆ
ಮನುಷ್ಯರ ಮಿಸ್ಸಿಂಗ್ ಲಿಂಕ್ಸ್ ಜೋಡಿಸುತ್ತ
ವಿಜ್ಞಾನಿ, ಋಷಿಗಳ ಮುಖಾಮುಖಿ ಮಾಡುತ್ತ
ಬದುಕು ಸವೆಸಿದ ನೀನು ಪ್ರವಾದಿಯಲ್ಲ,
ಸಂತನಲ್ಲದ ಸಂತ ಕಾಡಿನ ದಾವೇದಾರ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...