Home / ಲೇಖನ / ಇತರೆ / ವಚನ ವಿಚಾರ – ಮನಸ್ಸು ಕೋತಿ

ವಚನ ವಿಚಾರ – ಮನಸ್ಸು ಕೋತಿ

ಇನ್ನೇವೆನಿನ್ನೇವೆನಯ್ಯಾ
ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು
ಎನ್ನ ನಿಂದಲ್ಲಿ ನಿಲಲೀಯದು
ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ
ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ
ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ
ಕೂಡಲಸಂಗಮದೇವಾ

ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ ಎಂದು ನಿಮ್ಮೊಡಗೂಡುವೆನಯ್ಯಾ

[ಇನ್ನೇವೆನಿನ್ನೇವೆ – ಐದುತ್ತಿದೆ – ಹೊಂದುತ್ತಿದೆ]

ಬಸವಣ್ಣನ ವಚನ. ಮನಸ್ಸು ಕೋತಿ. ನನ್ನ ಮನಸ್ಸು ನನ್ನ ಮೇಲೆ ಮಾಡುವ ದಾಳಿ ಘನವಾದದ್ದು. ಏನು ಮಾಡಲೆಂದು ಹೊಳೆಯುತ್ತಿಲ್ಲ. ಈ ಕ್ಷಣದಲ್ಲಿ ಆಕಾಶಕ್ಕೆ ಮರುಕ್ಷಣಕ್ಕೆ ಪಾತಾಳ, ಕ್ಷಣದಲ್ಲಿ ದಿಕ್ಕುದಿಕ್ಕಿಗೆ ನಿಂದಲ್ಲಿ ನಿಲಲು ಆಗದಿದ್ದರೆ ಕೂಡಲಸಂಗಮನೊಡನೆ ಕೂಡುವುದು ಹೇಗೆ? ಕೋತಿ ಮನಸ್ಸಿನ ದಾಳಿ ಎಂದು ನಿಲ್ಲುತ್ತದೆ. ಈ ಪ್ರಶ್ನೆ ಬಹುಶಃ ನಮ್ಮೆಲ್ಲರದೂ ಹೌದು. ಮನಸ್ಸು ಕೋತಿಯಂತೆ ಅಲ್ಲ, ಮನಸ್ಸೇ ಕೋತಿ. ಹಾಗಿದ್ದ ಮೇಲೆ ಚಪಲತೆಯೇ ಅದರ ಗುಣ. ಅದನ್ನು ಒಂದೆಡೆಯಲ್ಲಿ ಸುಮ್ಮನೆ ಇರುವಂತೆ ಮಾಡುವುದು ಅಸಾಧ್ಯ ಮತ್ತು ಅಸಹಜ.

ಆದ್ದರಿಂದಲೇ ಮನಸ್ಸನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳೂ ಸಾಧನೆಗಳೂ ವ್ಯರ್ಥ. ಕೋತಿತನದ ಬಗ್ಗೆ “ಅರಿವು” ಇಟ್ಟುಕೊಳ್ಳುವುದೊಂದೇ ನಾವು ಮಾಡಬಹುದಾದ ಕೆಲಸ. ಇಲ್ಲಿ ಇನ್ನೊಂದು ಸೂಕ್ಷ್ಮವನ್ನೂ ಗಮನಿಸಿ, ನಾನು ಬೇರೆ ನನ್ನ ಮನಸ್ಸು ಬೇರೆ, ಏನು ಮಾಡಲಿ ಎಂಬ ತಹತಹ ಇಲ್ಲಿದೆ. ಹಾಗೆ ನೋಡಿದರೆ ನಾನು ಎಂಬುದು ನನ್ನ ಮನಸ್ಸಿಗಿಂತ ಭಿನ್ನ ಅಲ್ಲವೇ ಅಲ್ಲ. “ಮನಸ್ಸಿನಲ್ಲಿ ಯೋಚನೆಗಳು ಮೂಡುತ್ತವೆ” ಎನ್ನುವುದು ತಪ್ಪು, ಯೋಚನೆಗಳ ಮೊತ್ತವೇ ಮನಸ್ಸು ಎಂಬುದು ಸರಿ. ನಾನು ಆಕಾಶದೆತ್ತರ, ನಾನು ಚದರಿ ದಿಕ್ಕಾಪಾಲು ಎಂಬ ಯೋಚನೆಗಳೇ ನನ್ನ ಮನಸ್ಸು. ನಾನು ಮತ್ತು ಮನಸ್ಸು ಬೇರೆ ಬೇರೆ ಎಂದುಕೊಂಡದ್ದರಿಂದಲೇ ಮನಸ್ಸು ನನ್ನ ಮೇಲೆ ದಾಳಿ ಮಾಡುತ್ತಿದೆ ಅನ್ನಿಸುತ್ತದೆ.

ನಾನು ಬೇರೆಯಲ್ಲ, ನನ್ನ ಮನಸ್ಸು ಬೇರೆಯಲ್ಲ ಎಂದು ತಿಳಿದಾಗ ಕೋತಿ ಮನಸ್ಸಿನ ದಾಳಿ ನಿಲ್ಲುತ್ತದೆ, ಅದು ಯಾವಾಗ ಎಂಬುದೇ ಪ್ರಶ್ನೆ. ಆದ್ದರಿಂದಲೇ “ದಾಳಿಯ ನಂದಿಗೆ ನೀಗಿ” ಎಂಬ ಮಾತು ಬಂದಿದೆ. ಮನಸ್ಸಿನ ಸ್ವರೂಪದ ಬಗ್ಗೆ ಅರಿವು ಮೂಡಿದ ಕ್ಷಣವೇ ಮನಸ್ಸಿನ ಕೋತಿತನ ಮಾಯವಾಗುತ್ತದೆ, ಕೂಡಲಸಂಗಮ ದೊರೆಯುತ್ತಾನೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...