Home / ಲೇಖನ / ವಿಜ್ಞಾನ / ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಮನುಷ್ಯ ಅಂದ ಮೇಲೆ ಕೈಕಾಲು ನೋವು, ಹೊಟ್ಟೆನೋವು, ಹೃದಯದ ಬೇನೆ, ಪಾರ್ಶ್ಯುವಾಯು ಕಣ್ಣಿನ ದೋಶ, ರಕ್ತದ ಹೆಚ್ಟು ಒತ್ತಡ ಹೀಗೆ ಏನೇನೋ ಕಾಯಿಲೆಗಳು ಬರುತ್ತವೆ. ಇವೆಲ್ಲವುಗಳಿಗೂ ಬೇರೆ ಬೇರೆ ಔಷಧಿ ಪಡೆದು ಸೇವಿಸುವುದು ಕಷ್ಟ. ಜತೆಗೆ ಇವೆಲ್ಲಕ್ಕೂ ಹಣವ್ಯಯವೂ ಹೆಚ್ಚು. ಅದರಲ್ಲೂ ಬಡವರಿಗೆ ಇಂಥಹ ರೋಗಗಳು ಕಾಣಿಸಿಕೊಂಡರೆ ಇನ್ನು ಕಷ್ಟ. ಆದರೆ ಇವೆಲ್ಲವುಗಳನ್ನು ಗುಣಪಡಿಸುವ ಏಕೈಕ ಮಾತ್ರೆ ಒಂದು ಇದೆ ಎಂದರೆ ನಂಬುವಿರಾ? ಅಂಥಹ ಔಷಧಿಯೇ ಆಸ್ಟರಿನ್. ಇದನ್ನು ಸೇವಿಸಿದರೆ ಹೃದಯಾಘಾತವಾಗುವುದನ್ನು ಕಡಿಮೆ ಮಾಡುತ್ತದೆ ಪಾರ್‍ಶ್ವವಾಯುರೋಗ ನಿವಾರಣೆಯಾಗುತ್ತದೆ. ಗರ್ಭಪಾತವನ್ನು ತಡೆಗಟ್ಟುತ್ತದೆ. ಕಣ್ಣಿಗೆ ಪರೆ ಬರುವುದನ್ನು ನಿಲ್ಲಿಸುತ್ತದೆ. ರಕ್ತದ ಒತ್ತಡವನ್ನು ಸಮಗೊಳಿಸುತ್ತದೆ. ಜ್ವರ, ನೆಗಡಿ, ನೋವುಗಳನ್ನು ಉಪಶಮನ ಮಾಡುತ್ತದೆ! ಇದು ಬಹುರೋಗಿ ನಿವಾರಣಾ ರಾಮಬಾಣವಾಗಿದೆ. ಈ ಸಿದ್ಧೌಷಧವು ೧೮೦೦ ಅಂತ್ಯದಲ್ಲಿ ಕಂಡು ಹಿಡಿಯಲ್ಪಟ್ಟಿತು. 325 M.G.ಯ ಇದರ ಮಾತ್ರೆಯನ್ನು ದಿನಂಪ್ರತಿ ಜಗತ್ತಿನಾದ್ಯಂತ ಲಕ್ಷಾಂತರ ಜನಸೇವಿಸುತ್ತಾರೆ. ಮಾನವ ಶರೀರದಲ್ಲಿ ತಯಾರಾಗುವ ಇಂಟರ್‌ಲ್ಯೂಕೆನ್-2, ಮತ್ತು ಇಂಟರ್‌ಪೆರಾನ್, ಎಂಬ ರೋಗ ನಿರೋಧಕಗಳನ್ನು ಶರೀರ ತೀವ್ರವಾಗಿ ಉತ್ಪತ್ತಿ ಮಾಡುವುದಕ್ಕೆ ಆಸ್ಟಿರಿನ್ ಸರಿಪಡಿಸುತ್ತದೆ ಎಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಆದರೆ ಕೆಲವರಿಗೆ ಆಸ್ಟಿರಿನ್ ತೆಗೆದುಕೊಂಡಾಗ ವಾಂತಿ, ಅಲರ್ಜಿ, ಎದೆ‌ಉರಿ ಉಂಟಾಗುತ್ತದೆ ಇದರಿಂದ ಅಂತರಿಕ ರಕ್ತಶ್ರಾವ ಮೂತ್ರಜನಾಂಗಕ್ಕೆ ಹಾನಿ ಉಂಟಾಗಬಹುದು. ಅಸ್ತಮಾ ಇರುವವರಿಗೆ ಇದರಿಂದ ತೊಂದರೆಯಾಗಬಹುದು. ಆದ್ದರಿಂದ ಈ ನೋವು ನಿವಾರಕ ಸಿದೌಷಧಿಯನ್ನು ವೈದ್ಯರನ್ನು ಕೇಳಿಯೇ ತೆಗೆದುಕೊಳ್ಳಬೇಕು.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...