Home / ಲೇಖನ / ಇತರೆ / ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ
ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ
ಮನಸುಳ್ಳವರು ನೀವು ಪುಣ್ಯಗೈದಿರವ್ವಾ
ಮಹಾಲಿಂಗ ಗಜೇಶ್ವರನನಗಲಿದಡೆ
ನಿದ್ರೆಯೆಮಗಿಲ್ಲ
ಕನಸಿನ್ನೆಲ್ಲಿ ಬಹುದವ್ವಾ

[ದಿಟವಾದಡೆ-ನಿಜವಾದರೆ]

ಉರಿಲಿಂಗದೇವನ ವಚನ. ತನ್ನನ್ನು ಹೆಣ್ಣು ಎಂದು ಭಾವಿಸಿಕೊಂಡು ಹೇಳಿರುವ ವಚನ.

ನೀವು ಪುಣ್ಯವಂತರು. ನಲ್ಲ ಅಗಲಿದರೆ ಅವನ ಕನಸು ಕಂಡು ಸುಖಿಯಾಗುತ್ತೀರಿ. ಕನಸು ದಿಟವಾದರೆ ಮಾತ್ರ ನನ್ನ ನಲ್ಲ ನಿಜ. ನೀವು ಪುಣ್ಯವಂತರು. ಯಾಕೆಂದರೆ ನಿಮ್ಮ ಮನಸ್ಸು ನಿಮ್ಮ ಬಳಿ ಇದೆ, ಇಲ್ಲದ ನಲ್ಲನ ಕನಸು ತೋರುತ್ತದೆ. ಮನಸ್ಸನ್ನು ಮಹಾಲಿಂಗ ಗಜೇಶ್ವರನಿಗೆ ಕೊಟ್ಟಿರುವುದರಿಂದ ನನಗೆ ಮನಸ್ಸೂ ಇಲ್ಲ, ಆದ್ದರಿಂದಲೇ ಕನಸೂ ಇಲ್ಲ.

ಮನಸ್ಸು ಕೊಟ್ಟೆ. ಅವನು ಸಿಗಲಿಲ್ಲ. ಅವನೊಡನೆಯೇ ನನ್ನ ಮನಸೂ ಕನಸೂ ಹೋಗಿಬಿಟ್ಟಿವೆ ಎಂಬುದು ಕೇವಲ ಚೆಲುವಾದ ಮಾತುಗಳು ಮಾತ್ರವಲ್ಲ. ಅನುಭವದ ಬಗ್ಗೆ ಮಾತನಾಡಿಕೊಳ್ಳುವುದರ ಸುಳ್ಳುತನವನ್ನು ಕುರಿತದ್ದು. ಮತ್ತೂ ಮನಸು, ಕನಸು ಎರಡೂ ಇಲ್ಲವಾದ ತಹತಹ, ತಳಮಳವನ್ನು ಕುರಿತದ್ದು.

ಕೇವಲ ಅಕ್ಕ ಮಾತ್ರವಲ್ಲ, ಅನೇಕ ವಚನಕಾರರು ತಮ್ಮನ್ನು ಹೆಣ್ಣು ಎಂದು ಭಾವಿಸಿ ತಮ್ಮ ಮತ್ತು ದೇವರ ಸಂಬಂಧ ಕುರಿತು ಹೇಳಿಕೊಂಡಿದ್ದಾರೆ. ಭಕ್ತಿಯ ಹೆಣ್ಣು ಮುಖ ಅರಿಯಲು ಹೆಣ್ಣೆ ಯಾಕಾಗಬೇಕು, ಹೆಣ್ಣು ಮನಸು ಸಾಕು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...