Home / ಕವನ / ಕವಿತೆ / ತಾರನೆ ಶ್ರೀರಾಮ

ತಾರನೆ ಶ್ರೀರಾಮ

ತಾರನೆ ಶ್ರೀರಾಮ
ಸೀತೆಯು ಬಯಸಿದ ಮಾಯಾಮೃಗವ
ತಂದೀಯನೆ ಆ ರಾಮ

ಪರ್‍ಣಕುಟಿಯ ಸುತ್ತಲು ಕುಣಿಯುವುದಿದು
ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು
ಬಂಗಾರದ ಜಿಂಕೆಯಿದು
ಕಿನ್ನರ ಲೋಕದ ಜಿಂಕೆಯಿದು
ಇಂದ್ರ ಲೋಕದ ಜಿಂಕೆಯಿದು
ಸೂರ್ಯ ಚಂದ್ರರೆ ಮೋಹಿಸುವ ಜಿಂಕೆಯಿದು
ಬೇಕೇಬೇಕಿದು ತನಗೆನುವಳು ಸೀತೆ
ಪರಿಪರಿಯಲಿ ಪತಿಯ ಬೇಡುವಳು
ಕಾಡಿ ಹಟ ಮಾಡುವಳು

ಬೇಡವೀ ಮೃಗದ ಗೊಡವೆಯೆಂದರೂ ಶ್ರೀರಾಮ
ಇದು ಮಾಯಾ ಜಿಂಕೆ ನೋಡು
ನೆಲ ಮುಟ್ಟದೆ ನೆಗೆವುದು ನೋಡು
ಬಿಸಿಲಲ್ಲೂ ನೆರಳಿಲ್ಲದ ಮೈ ನೋಡು
ಕಂಡೂ ಕಾಣಿಸದೆ ಕೆಣಕುವುದು ನೋಡು
ಈ ಇಂಥ ಜಿಂಕೆ ನಿಜವಲ್ಲ ನೋಡು
ನೋಡೆಂದನು ಶ್ರೀರಾಮ

ಬೇಕೇಬೇಕಿದು ತನಗೆನುವಳು ಸೀತೆ
ಪರಿಪರಿಯಲಿ ಪತಿಯ ಬೇಡುವಳು
ಕಾಡಿ ಹಟ ಮಾಡುವಳು

ಅಲ್ಲಿಂದಲೆ ರಾಮಾಯಣ
ಅಲ್ಲಿಂದಲೆ ಇನ್ನೆಂದೂ ಮುಗಿಯದ ಯಾನ
ಅಲ್ಲಿಂದಲೆ ಲಂಕಾದಹನ
ಅಲ್ಲಿಂದಲೆ ಎಲ್ಲ ಕಥೆಗಳ ಜನನ

ಹಾ ಲಕ್ಷ್ಮಣ! ಹಾ ಸೀತೆ!
ಕಂಡಿದ್ದಳೆ ಆ ಮಹಾಮಾತೆ
ತನ್ನ ಮುಂದಿನ ಕಥೆಯ
ದಿವ್ಯ ದೃಷ್ಟಿಯೊಳಗೆ
ಪಾತ್ರವಾಗದೆ ಇರುವುದು ಹೇಗೆ
ಮಾನವ ಜನ್ಮ ತಳೆದ ಮೇಲೆ!

ಹೇ ಭೂಮಿ ತಾಯೆ
ನೀ ಕರೆಯುವ ವರೆಗೆ!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...