Home / ಕವನ / ಕವಿತೆ / ಇದು ಬರಿ ನಾಡಲ್ಲೋ…

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ
ಇದು ಬರಿ ನಾಡಲ್ಲೋ…||

ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು
ಹಲವು ಪ್ರಥಮಗಳ ವೈಭವದ ನಾಡು
ಕ್ರಾಂತಿಕಾರಕ ರೈತ ಚಳುವಳಿಗಳ ನಾಡು
ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು||

ಕುವೆಂಪು ಹಾಮಾನಾ ಮೂರ್ತಿ ತೇಜಸ್ವಿ ಜಿ‌ಎಸ್ಸೆಸ್‌
ಲಂಕೇಶ್‌ ಸುಬ್ಬಣ್ಣ ಶಾಂತವೇರಿ ಶಾಂತಲೆಯನಿತ್ತ ನಾಡು
ಪರಮದೇವ ದೇವತಾರಾಮಯ್ಯ ಲಿಂಗಣ್ಣ
ಕವಿ ವರೇಣ್ಯರು ಜನಿಸಿದ ನಾಡು ||

ಸ್ನೇಹ ಹಸ್ತವ ಚಾಚಿದ ವೀರಾಗ್ರಣಿ
ಕೆಳದಿ ಚೆನ್ನಮ್ಮನಾಳಿದ ನಾಡು
‘ಸಿಸ್ತು’ ತಂದ ಶಿಸ್ತಿನ ಶಿವಪ್ಪನಾಯಕನಾಳಿದ ನಾಡು
ಕೋಟೆ ಕೊತ್ತಲಗಳ ಶಿಲಾಶಾಸನಗಳ ಬೀಡು ||

ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು
ಈ ಮಲೆನಾಡ ಚಪ್ಪರದಲಿ ಬಿಟ್ಟ ಕಾಯ್ಗಳನೇಕ
ನಾಲ್ವರು ಮುಖ್ಯಮಂತ್ರಿಗಳನ್ನಿತ್ತ ಹೆಮ್ಮೆಯ ನಾಡು
ಕರುನಾಡಿನಲಿ ಶಿಖರದಂತೆ ಮೆರೆತಿಹುದು ಈ ನಾಡು ||

ತುಂಗ ಭದ್ರೆ ಶರಾವತಿ
ಕುಮದ್ವತಿ ವರದೆ ಹರಿದಿಹ ನಾಡು
ಅಡಿಕೆ ತೆಂಗು ಜಾಗರವಾಡುವ ನಾಡು
ಸಿರಿ ಗಂಧದ ಕಂಪ ಸೂಸುವ ಬೀಡು ||

ರಾಜಾ ರಾಣಿ ರೋರರ್ ರಾಕೆಟ್
ನಾಲ್ಕು ಟಿಸಿಲಿನ ಘರ್ಜನೆಯ ರೋಮಾಂಚನ
ಚಲುವಿನ ಸಿರಿ ಜೋಗದ ಬೀಡು
ಈ ಜಗಕೆ ಬೆಳಕ ನೀಡಿದ ನಾಡು ||

ಸರ್‍ವಧರ್‍ಮಗಳ ಸಮನ್ವಯದ ಪ್ರತೀಕ ಈ ನಾಡು
ಕೈಗಾರಿಕೋದ್ಯಮ ಕಲರವದ ಬೀಡು
ಶಿಕ್ಷಣ ತಂತ್ರಜ್ಞಾನದಿ ನಲಿದಿಹ ನಾಡು
ಸಾಹಿತ್ಯ ಕಲೆ ಸಂಸ್ಕೃತಿ ಶಿಲ್ಪಕಲೆಗಳ ತವರೂರು ||

ಸಹ್ಯಾದ್ರಿ ಕೊಡಚಾದ್ರಿಯ ಸೆರಗಿನಲಿ
ಸಸ್ಯಶ್ಯಾಮಲೆಯಲ್ಲರಳಿದ ಈ ನಾಡು
ಪಕ್ಷಿ ಸಂಕುಲ ಸಿಂಹದಾಮ ಗುಡ್ಡಬೆಟ್ಟಗಳ ಸಾಲೇ ಸಾಲು
ಎತ್ತರೆತ್ತರ ಮರಗಿಡ ಬಳ್ಳಿ ಕೈಬೀಸಿ ಕರೆತಿಹವು ||
*****
೮-೧-೨೦೧೦ರಲ್ಲಿ ಶಿವಮೊಗ್ಗಾದ ಕ್ರಾಂತಿದೀಪ ಪತ್ರಿಕೆಯಲ್ಲಿ ಪ್ರಕಟ.
೯-೧-೨೦೧೦ರ ಸೃಷ್ಠಿರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...