Home / ಕವನ / ಕವಿತೆ / ಇದು ಬರಿ ನಾಡಲ್ಲೋ…

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ
ಇದು ಬರಿ ನಾಡಲ್ಲೋ…||

ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು
ಹಲವು ಪ್ರಥಮಗಳ ವೈಭವದ ನಾಡು
ಕ್ರಾಂತಿಕಾರಕ ರೈತ ಚಳುವಳಿಗಳ ನಾಡು
ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು||

ಕುವೆಂಪು ಹಾಮಾನಾ ಮೂರ್ತಿ ತೇಜಸ್ವಿ ಜಿ‌ಎಸ್ಸೆಸ್‌
ಲಂಕೇಶ್‌ ಸುಬ್ಬಣ್ಣ ಶಾಂತವೇರಿ ಶಾಂತಲೆಯನಿತ್ತ ನಾಡು
ಪರಮದೇವ ದೇವತಾರಾಮಯ್ಯ ಲಿಂಗಣ್ಣ
ಕವಿ ವರೇಣ್ಯರು ಜನಿಸಿದ ನಾಡು ||

ಸ್ನೇಹ ಹಸ್ತವ ಚಾಚಿದ ವೀರಾಗ್ರಣಿ
ಕೆಳದಿ ಚೆನ್ನಮ್ಮನಾಳಿದ ನಾಡು
‘ಸಿಸ್ತು’ ತಂದ ಶಿಸ್ತಿನ ಶಿವಪ್ಪನಾಯಕನಾಳಿದ ನಾಡು
ಕೋಟೆ ಕೊತ್ತಲಗಳ ಶಿಲಾಶಾಸನಗಳ ಬೀಡು ||

ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು
ಈ ಮಲೆನಾಡ ಚಪ್ಪರದಲಿ ಬಿಟ್ಟ ಕಾಯ್ಗಳನೇಕ
ನಾಲ್ವರು ಮುಖ್ಯಮಂತ್ರಿಗಳನ್ನಿತ್ತ ಹೆಮ್ಮೆಯ ನಾಡು
ಕರುನಾಡಿನಲಿ ಶಿಖರದಂತೆ ಮೆರೆತಿಹುದು ಈ ನಾಡು ||

ತುಂಗ ಭದ್ರೆ ಶರಾವತಿ
ಕುಮದ್ವತಿ ವರದೆ ಹರಿದಿಹ ನಾಡು
ಅಡಿಕೆ ತೆಂಗು ಜಾಗರವಾಡುವ ನಾಡು
ಸಿರಿ ಗಂಧದ ಕಂಪ ಸೂಸುವ ಬೀಡು ||

ರಾಜಾ ರಾಣಿ ರೋರರ್ ರಾಕೆಟ್
ನಾಲ್ಕು ಟಿಸಿಲಿನ ಘರ್ಜನೆಯ ರೋಮಾಂಚನ
ಚಲುವಿನ ಸಿರಿ ಜೋಗದ ಬೀಡು
ಈ ಜಗಕೆ ಬೆಳಕ ನೀಡಿದ ನಾಡು ||

ಸರ್‍ವಧರ್‍ಮಗಳ ಸಮನ್ವಯದ ಪ್ರತೀಕ ಈ ನಾಡು
ಕೈಗಾರಿಕೋದ್ಯಮ ಕಲರವದ ಬೀಡು
ಶಿಕ್ಷಣ ತಂತ್ರಜ್ಞಾನದಿ ನಲಿದಿಹ ನಾಡು
ಸಾಹಿತ್ಯ ಕಲೆ ಸಂಸ್ಕೃತಿ ಶಿಲ್ಪಕಲೆಗಳ ತವರೂರು ||

ಸಹ್ಯಾದ್ರಿ ಕೊಡಚಾದ್ರಿಯ ಸೆರಗಿನಲಿ
ಸಸ್ಯಶ್ಯಾಮಲೆಯಲ್ಲರಳಿದ ಈ ನಾಡು
ಪಕ್ಷಿ ಸಂಕುಲ ಸಿಂಹದಾಮ ಗುಡ್ಡಬೆಟ್ಟಗಳ ಸಾಲೇ ಸಾಲು
ಎತ್ತರೆತ್ತರ ಮರಗಿಡ ಬಳ್ಳಿ ಕೈಬೀಸಿ ಕರೆತಿಹವು ||
*****
೮-೧-೨೦೧೦ರಲ್ಲಿ ಶಿವಮೊಗ್ಗಾದ ಕ್ರಾಂತಿದೀಪ ಪತ್ರಿಕೆಯಲ್ಲಿ ಪ್ರಕಟ.
೯-೧-೨೦೧೦ರ ಸೃಷ್ಠಿರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...