Home / ಕವನ / ಕವಿತೆ / ಅವಲಂಬನ

ಅವಲಂಬನ

ನೋಡಿ ಕೊಂಡು ಬರಲಿ
ಯಾರಿಗಾದರು ಸಹಜವಲ್ಲವೆ
ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ.
ಹೊತ್ತು ತರಲಿ ನೆನಪಿನ ಬುತ್ತಿಯನು
ನೆನಪು ಉತ್ತೇಜನಕಾರಿಯಲ್ಲವೆ!

ನಾವಾದರೆ
ಎಲ್ಲೆಲ್ಲೋ ತಿರುಗಿ ಬರುವೆವು
ಅವಳಿನ್ನೆಲ್ಲಿಗೆ ಹೋಗಿ ಬರಬೇಕು
ಎಲ್ಲರಿಗೂ ಸುಸ್ತು-ಸಾಕು ಇರುವುದೇ ತಾನೆ!

ನಿಜ,
ನಾನು ಬೇಡವೆಂದರೆ ಹೋಗಲಾರಳು
ಸುಮ್ಮನಾಗುವಳು
ಹಾಗೆಯೆ… ಆಮೇಲಿನದ ಕೂಡ ನಾನು ಸ್ವಲ್ಪ ವಿಚಾರ
ಮಾಡಬೇಕು-

ಕಳಿಸದಿದ್ದರೆ…
ಮೌನ ಮನೆಯನಾಳತೊಡಗುವುದು
ಮಾತು ಕತೆಯೆ ನಿಂತು ಹೋಗಬಹುದು
ಒಟ್ಟಾರೆ ಮನೆಯ ಲಕ್ಷಣವೇ ಕೆಟ್ಟು ಹೋಗಿ
ಸೂತಕವು ಮನೆಯಲ್ಲಿ ಬೀಡು ಬಿಡ ಬಹುದು
ನಿರ್ಜೀವ ಪಾತ್ರೆಗಳಿಗೂ ಜೀವ ಬರಬಹುದು.
ಮಾತು, ಗೊಣಗು, ಗುಸ್ಸದ ರೂಪತಾಳಿ
ಇರುಸು-ಮುರುಸು ಸರ್ವೇ ಸಾಮಾನ್ಯವಾಗ ಬಹುದು.
ಹೋಗಿ ಬರಲಿ
ಎಷ್ಟ ದಿನಗಳು ಮಹಾ!
ಅತ್ತಲೇ ಏನು ಹೋಗುವುದಿಲ್ಲವಲ್ಲ
ಅವಳ್ಹೋದರೇನು ಊರು, ಮನೆಯನ್ನು ಜೊತೆಯಲ್ಲಿ
ಒಯ್ಯುವಳೇನು?

ಸಮಸ್ಯೆ
ಊಟ ತಿಂಡಿಯದು ತಾನೆ!
ಅಲ್ಲೋ, ಇಲ್ಲೋ, ಎಲ್ಲೋ ಒಂದು ಕಡೆ ತಿಂದರಾಯಿತು
ಅವಳಿಲ್ಲದಿದ್ದರೇನು
ನನ್ನಷ್ಟಕ್ಕೆ ನಾನು ಬದುಕಲಾರೆನೇನು?
ಇವಳೇ ಇದ್ದಳೇನು
ನನಗೆ ತಡಾಯ ಮೊದಲು?
ಹಾಯಾಗಿ ಒಂದೆರಡುದಿನ
ಸುಖವಾದ ಬ್ರಹ್ಮಚಾರಿ ಜೀವನವ ನೆನೆಪಿಸಿ ಕೊಳ್ಳಬಹುದೆಂದು
ಉಢಾಫೆ ವಿಚಾರದಲ್ಲಿ ಉದಾರನಾಗಿ
‘ಹೋಗಿ ಬಾ’ ಎಂದೆ
ಪೇಚಿಗೆ ಸಿಕ್ಕಿಕೊಂಡೆ.

ಸಣ್ಣದು, ಪುಟ್ಟದು, ನನ್ನದೆಲ್ಲಕ್ಕು ಅವಳ ಕಡೆ ನೋಡಿ
ಅಭ್ಯಾಸವಾಗಿದ್ದ ನನಗೆ
ಅದು ಬೇಕು!
ಇದು ಬೇಡ! ವೆನಿಸಿಬಿಟ್ಟಿತು ಬೇಗ.

ಎಲ್ಲಾ ಇದ್ದು, ಏನೂ ಇಲ್ಲದಂತಾಗಿ
ಒಂಟಿ, ಒಂಟಿಯೆನಿಸಿ
ಅವಳಿಲ್ಲದ ಕೊರತೆ ದೊಡ್ಡದಾಗಿ ಬೆಳೆದು
ಬದುಕು, ಅನುಕ್ಷಣವು ದುಸ್ಸಹನೀಯ ವೆನಿಸಿ ಬಿಟ್ಟೋಯ್ತು
ಇದು ಹೀಗೆ ಮುಂದುವರಿದರೆ
ಹತ್ತಿರದಿ ನನಗೆ ಹುಚ್ಚು ಹಿಡಿಯುವುದು ಖಾತರಿ
ಯೆಂಬ ಭಯವಾವರಿಸ ತೊಡಗಿತು.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...