Home / ಕವನ / ಕವಿತೆ / ಅವಲಂಬನ

ಅವಲಂಬನ

ನೋಡಿ ಕೊಂಡು ಬರಲಿ
ಯಾರಿಗಾದರು ಸಹಜವಲ್ಲವೆ
ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ.
ಹೊತ್ತು ತರಲಿ ನೆನಪಿನ ಬುತ್ತಿಯನು
ನೆನಪು ಉತ್ತೇಜನಕಾರಿಯಲ್ಲವೆ!

ನಾವಾದರೆ
ಎಲ್ಲೆಲ್ಲೋ ತಿರುಗಿ ಬರುವೆವು
ಅವಳಿನ್ನೆಲ್ಲಿಗೆ ಹೋಗಿ ಬರಬೇಕು
ಎಲ್ಲರಿಗೂ ಸುಸ್ತು-ಸಾಕು ಇರುವುದೇ ತಾನೆ!

ನಿಜ,
ನಾನು ಬೇಡವೆಂದರೆ ಹೋಗಲಾರಳು
ಸುಮ್ಮನಾಗುವಳು
ಹಾಗೆಯೆ… ಆಮೇಲಿನದ ಕೂಡ ನಾನು ಸ್ವಲ್ಪ ವಿಚಾರ
ಮಾಡಬೇಕು-

ಕಳಿಸದಿದ್ದರೆ…
ಮೌನ ಮನೆಯನಾಳತೊಡಗುವುದು
ಮಾತು ಕತೆಯೆ ನಿಂತು ಹೋಗಬಹುದು
ಒಟ್ಟಾರೆ ಮನೆಯ ಲಕ್ಷಣವೇ ಕೆಟ್ಟು ಹೋಗಿ
ಸೂತಕವು ಮನೆಯಲ್ಲಿ ಬೀಡು ಬಿಡ ಬಹುದು
ನಿರ್ಜೀವ ಪಾತ್ರೆಗಳಿಗೂ ಜೀವ ಬರಬಹುದು.
ಮಾತು, ಗೊಣಗು, ಗುಸ್ಸದ ರೂಪತಾಳಿ
ಇರುಸು-ಮುರುಸು ಸರ್ವೇ ಸಾಮಾನ್ಯವಾಗ ಬಹುದು.
ಹೋಗಿ ಬರಲಿ
ಎಷ್ಟ ದಿನಗಳು ಮಹಾ!
ಅತ್ತಲೇ ಏನು ಹೋಗುವುದಿಲ್ಲವಲ್ಲ
ಅವಳ್ಹೋದರೇನು ಊರು, ಮನೆಯನ್ನು ಜೊತೆಯಲ್ಲಿ
ಒಯ್ಯುವಳೇನು?

ಸಮಸ್ಯೆ
ಊಟ ತಿಂಡಿಯದು ತಾನೆ!
ಅಲ್ಲೋ, ಇಲ್ಲೋ, ಎಲ್ಲೋ ಒಂದು ಕಡೆ ತಿಂದರಾಯಿತು
ಅವಳಿಲ್ಲದಿದ್ದರೇನು
ನನ್ನಷ್ಟಕ್ಕೆ ನಾನು ಬದುಕಲಾರೆನೇನು?
ಇವಳೇ ಇದ್ದಳೇನು
ನನಗೆ ತಡಾಯ ಮೊದಲು?
ಹಾಯಾಗಿ ಒಂದೆರಡುದಿನ
ಸುಖವಾದ ಬ್ರಹ್ಮಚಾರಿ ಜೀವನವ ನೆನೆಪಿಸಿ ಕೊಳ್ಳಬಹುದೆಂದು
ಉಢಾಫೆ ವಿಚಾರದಲ್ಲಿ ಉದಾರನಾಗಿ
‘ಹೋಗಿ ಬಾ’ ಎಂದೆ
ಪೇಚಿಗೆ ಸಿಕ್ಕಿಕೊಂಡೆ.

ಸಣ್ಣದು, ಪುಟ್ಟದು, ನನ್ನದೆಲ್ಲಕ್ಕು ಅವಳ ಕಡೆ ನೋಡಿ
ಅಭ್ಯಾಸವಾಗಿದ್ದ ನನಗೆ
ಅದು ಬೇಕು!
ಇದು ಬೇಡ! ವೆನಿಸಿಬಿಟ್ಟಿತು ಬೇಗ.

ಎಲ್ಲಾ ಇದ್ದು, ಏನೂ ಇಲ್ಲದಂತಾಗಿ
ಒಂಟಿ, ಒಂಟಿಯೆನಿಸಿ
ಅವಳಿಲ್ಲದ ಕೊರತೆ ದೊಡ್ಡದಾಗಿ ಬೆಳೆದು
ಬದುಕು, ಅನುಕ್ಷಣವು ದುಸ್ಸಹನೀಯ ವೆನಿಸಿ ಬಿಟ್ಟೋಯ್ತು
ಇದು ಹೀಗೆ ಮುಂದುವರಿದರೆ
ಹತ್ತಿರದಿ ನನಗೆ ಹುಚ್ಚು ಹಿಡಿಯುವುದು ಖಾತರಿ
ಯೆಂಬ ಭಯವಾವರಿಸ ತೊಡಗಿತು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...