Home / ಲೇಖನ / ವಿಜ್ಞಾನ / ೫೦ ವರ್ಷ ಬಳೆಸಬಹುದಾದ ಬ್ಯಾಟರಿ

೫೦ ವರ್ಷ ಬಳೆಸಬಹುದಾದ ಬ್ಯಾಟರಿ

ನಾವು ಬ್ಯಾಟರಿಗಳನ್ನು ಕೆಲವೇ ಕಾಲದವರೆಗೆ ಬಳಸಿ ಎಸೆದು ಬಿತುತ್ತೇವೆ. ಆದರೆ ೫೦ ವರ್ಷಗಳ ವರೆಗೆ ಬಾಳಿಕೆ ಬರಬಲ್ಲ ಬ್ಯಾಟರಿಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಂಶೋಧನೆಯನ್ನು ಮಾಡಿದ್ದಾರೆ. ಈ ವಿದ್ಯುತ್‌ಕೋಶ (cell) ಗಳನ್ನು ಬಳೆಸುವಲ್ಲಿ ಸಂಶೋಧನೆಯ ವಿವರ ಈ ರೀತಿ ಇದೆ. ರೇಡಿಯೋ ಆಕ್ಟಿವ್ (ವಿಕಿರಣ ಶೀಲ) ವಸ್ತುಗಳನ್ನು ಬಳಸಿ ತಯಾರಿಸಲಾಗುವ ಇಂತಹ ಬ್ಯಾಟರಿಯ ಬಳಕೆಯಿಂದ ದೀರ್ಘ ಅವಧಿಯವರೆಗೆ ಕಡಿಮೆ ಶಕ್ತಿಯನ್ನು ಬಳೆಸುವ ಗಡಿಯಾರದಂತಹ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಶಕ್ತಿಯನ್ನು ಪೂರೈಸಬಹುದೆಂದು ಹೇಳಲಾಗಿದೆ. ಅತ್ಯಂತ ಕಡಿಮೆ ಮಟ್ಟದ ವಿಕಿರಣವನ್ನು ಹೊರ ಸೂಸುವ ನಿಕೆಲ್-63 (Nickel-93) ರಂತಹ ಐಸೋಟೋಪ್ (ಐಸೋಟೋಪ್ ಪರಮಾಣು ತೂಕಬೇರೆಯಾಗಿರುವ ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಒಂದೇ ಧಾತುವಿನ ಎರಡು ಅಥವಾ ಹೆಚ್ಚು ರೂಪಗಳು) ಬಳಸುವುದರಿಂದ ವಿಕಿರಣ ಶೀಲತೆ ದುಷ್ಟರಿಣಾಮಗಳನ್ನು ತಡೆಯಬಹುದೆಂಬ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ತಾಮ್ರದ ಹಾಗೂ ನಿಕೆಲ್‍ನ ಪದರವೊಂದನ್ನು ಹೊಂದಿರುವ ಈ ಬ್ಯಾಟರಿಗಳಲ್ಲಿ ನಿಕಲ್ ಐಸೋಟೋಪ್ ಹೊರಸೂಸುವ ವಿಕಿರಣದಿಂದ ಶಕ್ತಿಯ ಉತ್ಪಾದನೆಯಾಗುತ್ತದೆ. ಅತ್ಯಂತ ಚಿಕ್ಕಗಾತ್ರದಲ್ಲಿಯೂ ಕೂಡ ನಿರ್ಮಿತವಾಗಬಲ್ಲ ಇಂತಹ ಬ್ಯಾಟರಿಗಳು ನಿಕೆಲ್ ಐಸೋಟೋಪದ ಅರ್ಧಾಯುಷ್ಯ ಅವಧಿಯಾದ ನೂರು ವರ್ಷಗಳವರೆಗೂ ಕಾರ್ಯನಿರ್ವಹಿಸಬಲ್ಲವು. ಅದರ ನಿಗದಿತ ಪ್ರಮಾಣಶಕ್ತಿ ಕನಿಷ್ಟವೆಂದರೂ ಐವತ್ತು ವರ್ಷಗಳವರೆಗೂ ಯಾವ ತೊಂದರೆಯೂ ಇಲ್ಲದಂತೆ ಕಾರ್ಯನಿರ್ವಹಿಸುತ್ತದೆ.

ಆದರೆ ಇಂತಹ ಟ್ಯಾಟರಿಯು ಹೊರಸೂಸುವ ವಿಕಿರಣ ಮಾನವನ ಮೇಲೆ ಉಂಟು ಮಾಡಬಲ್ಲ ದುಷ್ಪರಿಣಾಮ ಎಷ್ಟರಮಟ್ಟದ್ದು ಎಂಬ ಬಗೆಗೆ ಇನ್ನು ಚರ್ಚೆ ನಡೆಯುತ್ತವೆ. ಇವು ಹೊರಸೂಸುವ ಅತ್ಯಲ್ಪ ಮಟ್ಟದ ವಿಕಿರಣದಿಂದ ಕೆಟ್ಟ ಪರಿಣಾಮವೇನು ಉಂಟಾಗಲಾರದೆಂದು ಈ ಬ್ಯಾಟರಿಯನ್ನು ಕಂಡು ಹಿಡಿದ ವಿಜ್ಞಾನಿಗಳು ಹೇಳಿದರೆ ಇನ್ನು ಕೆಲ ವಿಜ್ಞಾನಿಗಳು ವಿಕಿರಣ ಎಷ್ಟೇ ಕಡಿಮೆಯಾದರೂ ಅದರಿಂದ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಖಂಡಿತವಾಗಿಯೂ ಉಂಟಾಗಲಿದೆ ಎನ್ನುತ್ತಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...