ಹೌದು,
ಇದು ಮಕ್ಕಳ ವರ್ಷ
ಮಕ್ಕಳಿಗಾಗಿಯೇ
ಹಲವಾರು ಕಾರ್ಯಕ್ರಮ
ಹಾಕಿಕೊಂಡಿದ್ದೇವೆ.
ಆಗಾಗ ಭಾಷಾ ಸ್ಪರ್ಧೆ
ಆಟದ ಸ್ಪರ್ಧೆ ಏರ್ಪಡಿಸುತ್ತೇವೆ
ಮಕ್ಕಳ ವರ್ಷದಾಗೇ
ನಮ್ಮದೂ ಛಾನ್ಸ್ ಅಲ್ವಾ?
ಅದಕ್ಕೆಂತಲೆ ಬಿಸ್ಕತ್
ಚಾಕಲೇಟ, ಹಾಲು, ಪೌಡರಗಳ
ಬೆಲೆ ಗಗನಕ್ಕೇರಿಸಿದ್ದೇವೆ
ಅದಕ್ಕಾಗಿಯೇ ಅವು ಈಗ
ಮುಗಿಲ ಚುಕ್ಕಿಯಂತೆ
ಮೇಲೆ ಬೆಳಗುತ್ತಿವೆ.
ಏನು?
ನಿನ್ನ ಮಗೂಗೇ
ಮೆತ್ತನ್ನ ಅನ್ನ ಕೂಡ ಸಿಗಲ್ವೆ?
ಅದಕ್ಕೆ ನಾವೇನು ಮಾಡಬೇಕು?
ಎಲ್ಲಾ ಅವರವರ ಕರ್ಮ –
ಆದರೆ….
ನಮ್ಮದು ಸಮಾಜವಾದೀ ರಾಷ್ಟ್ರ
ಅಂತ ಖಾದಿಗಳು ಹೇಳುತ್ತಿವೇ
ಕೇಳಿಲ್ಲವೇ ನೀನು.
*****
Related Post
ಸಣ್ಣ ಕತೆ
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
-
ಕಲ್ಪನಾ
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…