Home / ಲೇಖನ / ವಿಜ್ಞಾನ / ತಂಬಾಕಿನ ‘ನಿಕೋಟಿನ್’ನಿಂದ ಸಸ್ಯಗಳ ರೋಗ ನಿವಾರಕ ಔಷಧಿ

ತಂಬಾಕಿನ ‘ನಿಕೋಟಿನ್’ನಿಂದ ಸಸ್ಯಗಳ ರೋಗ ನಿವಾರಕ ಔಷಧಿ

‘ತಂಬಾಕು’ ಭಾರತದ ವಾಣಿಜ್ಯ ಬೆಳೆಯಾಗಿದ್ದು, “ನಿಕೋಟಿಯಾನ್ ಟಿಬ್ಯಾತಮ್” ಎಂಬ ಸಸ್ಯವರ್ಗಕ್ಕೆ ಸೇರಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದರ ಸೇವನೆ ಆರೋಗ್ಯಕ್ಕೆ ಹಾನಿಕರ, ಎಂದು ವೈದ್ಯಕೀಯವಾಗಿ ದೃಧೀಕರಿಸಿದೆಯಾದರೂ ಈ ವ್ಯಾಮೋಹದಿಂದ ಬಹಳಜನ ಹೊರಬರಲಾಗಿಲ್ಲ.

ತಂಬಾಕಿನಲ್ಲಿರುವ ‘ನಿಕೋಟಿನ್’ ಅಪಾಯಕಾರಿ ವಿಷವಾಗಿದ್ದು ಇದರ ಅರ್ಧ ಹನಿಯನ್ನು ಸೇವಿಸಿದರೆ ಮನುಷ್ಯನ ಪ್ರಾಣವೇ ಹೋಗಬಹುದು. ಈ ನಿಕೋಟಿನ್ ಜತೆಗೆ ಪರ್ಘರಾತ್, ಪೈರಿಡಿನ್, ಅವೋನಿಯಾ, ಆಲ್ಡಿಹೈಡ್, ಎಂಬ ವಿಷಕಾರಕ ವಸ್ತುಗಳು ಈ ತಂಬಾಕಿನಲ್ಲಿವೆ. ಇಂಥಹ ಅಪಾಯಕಾರಕ ತಂಬಾಕನ್ನು ನಮ್ಮ ವಿಜ್ಞಾನಿಗಳು ರೈತನಿಗೆ ಉಪಯುಕ್ತವಾಗುವಂತೆ ೧೯೮೨ರಲ್ಲಿ ಸಂಶೋಧಿಸಿದ್ದಾರೆ. ರೈತನು ಬೆಳೆಯುವ ಈ ಸೊಪ್ಪು, ರೈತನ ಬೆಳೆಗಳನ್ನು ಹಾಳುಗೆಡುವ ಕೀಟಗಳನಾಶಕ್ಕೆ ಬಳಸಲಾಗುತ್ತದೆ. ಮತ್ತು ಇದು ಜನಪ್ರಿಯ ಕೀಟನಾಶಕವೂ ಕೂಡ ಆಗಿದೆ. ಈ ಕೀಟನಾಶಕವು ಬಿಳಿ ನೊಣ, ಸಸ್ಯ ಹೇನು, ಥ್ರಿಪ್ಸ್ ಮತು ನುಸಿಪೀಡೆಗಳ ನಿಯಂತ್ರಣಕ್ಕೆ ಹಾಗೂ ಅವುಗಳ ನಾಶಕ್ಕೆ ತುಂಬ ಉಪಕಾರಿಯಾಗಿದೆ. ತಂಬಾಕಿನಲ್ಲಿರುವ ‘ನಿಕೋಟಿನ್’ ಕೀಟನಾಶಕವು ಕೀಟಗಳ ಶ್ವಾಸನಳಿಕೆ, ತ್ವಚೆ ಮತ್ತು ಆಹಾರದ ಮೂಲಕ ದೇಹವನ್ನು ಒಳಸೇರಿ ಅವುಗಳ ನರಮಂಡಲದ ಕಾರ್ಯಚಟುವಟಿಕೆಯಲಿ ಏರುಪೇರುಂಟಾಗಿ ಅವು ಸಾಯುವಂತೆ ಮಾಡುತ್ತದೆ.

ಕೀಟನಾಶಕವನ್ನು ತಯಾರಿಸುವ ವಿಧಾನ : ಈ ಕ್ರಿಮಿನಾಶಕವನ್ನು ರೈತರು ಮನೆಯಲ್ಲಿಯೇ ತಯಾರಿಸಬಹುದಾಗಿದೆ. ಮೊದಲು ೧೦ ಲೀಟರ್ ನೀರು, ಒಂದು ಕೆ.ಜಿ. ಯಷ್ಟಾದ ತಾಜಾ ತಂಬಾಕಿನ ಎಲೆಗಳನ್ನು ತೆಗೆದುಕೊಳ್ಳಬೇಕು. ಈ ತಂಬಾಕಿನ ಎಲೆಗಳನ್ನು ಹತ್ತು ಲೀಟರ್ ನೀರನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿನಲ್ಲಿ ಕುದಿಸಿ ಹದಗೊಂಡ ಎಲೆಗಳನ್ನು ಹಿಂಡಿ ಕಷಾಯ ತಯಾರಿಸಬೇಕು ಈ ಕಷಾಯಕ್ಕೆ ಪುನಹ ೧೦ ಲೀಟರ್ ನೀರನ್ನು ಸೇರಿಸಿ ಚನ್ನಾಗಿ ಕಲಕಬೇಕು. ಈ ಕಷಾಯವು ಚನ್ನಾಗಿ ಕೆಲಸ ಮಾಡಲು ಹಾಗೂ ಬೆಳಗಳ ಮೇಲೆ ಸರಿಯಾಗಿ ಹರಡಲು ಸಿಂಪಡಿಸುವ ಮುನ್ನ ಕಷಾಯಕ್ಕೆ ೧೦೦ ಗ್ರಾಂ ಸಾಬೂನಿನ (ಸೋಪಿನ ಪುಡಿ) ಪುಡಿಯನ್ನು ಸೇರಿಸಬೇಕು. ಇದು ಮಾರುಕಟ್ಟೆಯಲ್ಲಿ ಪುಡಿರೂಪದಲ್ಲಿ ಹಾಗೂ ದ್ರವ ರೂಪದಲಿ ದೊರೆಯುತ್ತದೆ. ‘ನಿಕೋಟಿನ್’ ಪುಡಿಯನ್ನು ಸಸ್ಯಗಳ ಮೇಲೆ ಸಿಂಪಡಿಸಿದಾಗ ಅದು ವಾತಾವರಣದಲ್ಲಿರುವ ತೇವಾಂಶದೊಡನೆ ಬೆರೆತು ‘ನಿಕೋಟಿನ್’ ಎಂಬ ವಿಷ ವಸ್ತುವನ್ನು ಬಿಡುಗಡೆ ಮಾಡಿ ಕೀಟಗಳು ನಾಶವಾಗುತ್ತವೆ. ದ್ರವರೂಪದ ತಂಬಾಕನ್ನು ಸಿಂಪಡಿಸುವಾಗ ಸುಣ್ಣ ಅಥವಾ ಸಾಬೂನಿನ ಪುಡಿಯನ್ನು ಮಿಶ್ರಮಾಡಿ ಚನ್ನಾಗಿ ಕಲಿಸಿ ಸಿಂಪಡಿಸಬೇಕು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...