Home / ಕವನ / ಕವಿತೆ / ಹಬ್ಬ

ಹಬ್ಬ

ಹುಟ್ಟೂರು
ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ
ಹೊಟ್ಟೆ ತುಂಬಿದಂತಾಗುತ್ತೆ
ಹಿಟ್ಟು ಕಾರವನ್ನೇ ತಿಂದರೂ
ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ
ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು
ಬಿಟ್ಟ ಮೇಲೆ

ದಿಣ್ಣೆ, ದೀಪಾಂತರ ತುಂಬಾ
ಆಸೆಯೆ ಆಕಾರ ತಳೆದಂತೆ ಬೆಳೆದ
ಹೂಪೀಸು, ವಡೆತಲೆಯ ಫಲ ಪೈರು
ಗಾಳಿಗೆ ತೊನೆದಾಡುತ್ತಿರುವಾಗ
ಬಯಲಾದ ಬಯಲೆಲ್ಲಾ ಸಂಗೀತ ನೃತ್ಯದಲ್ಲಿ ತೇಲುವುದು,

ದೊಡ್ಡವಳು ತಾಯಿ ಗಂಗಮ್ಮ ಕೃಪೆಮಾಡಿ ಬಂದು
ನೆರೆ ತೊರೆ ಹಳ್ಳ ಕೊಳ್ಳಗಳಲ್ಲಿ ಅತ್ತಿತ್ತ ಆಡ್ಡಾಡುವ
ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುವ
ಬೆಟ್ಟ ಗುಡ್ಡಗಳ ನೆತ್ತಿಯನ್ನು ಜಾರುಬಂಡಿ ಮಾಡಿಕೊಂಡು
ಆಟವಾಡುವ ದೃಶ್ಯ
ಕಣ್ಣಿಗೆ ಬೀಳಲು ಪುಣ್ಯ ಮಾಡಿರಬೇಕು.
ಸರ್ತಿ ಸರ್ತಿಗೆ ಬರುವ ಈ ಹಿರಿಯರ ಹಬ್ಬಕ್ಕೆ ಕರೆಯದಿದ್ದರೂ
ನಿಲ್ಲಲಾರೆ

ಗಂಡ ಮಕ್ಕಳ ಕೂಡಿಕೊಂಡು
ಪುಟ್ಟ ಮೆರವಣಿಗೆಯಲ್ಲಿ ಸಾಗಿ ಬರುವೆ
ಜೀವನಾ ದ್ರವ್ಯವನು ಕೂಡಿಸಿ ಕೊಳ್ಳುವೆನು
ದೂರದಲ್ಲಿರುವಾಗಲೇ ಕೂನು ಹಿಡಿದ ಚಿಕ್ಕವರು
ಓಡೋಡಿ ಬಂದು
ಅತ್ತೆ, ಮಾವ ಬಂದರೆಂದು ಡಂಗುರ ಸಾರುವುದು
ಹಿರಿಯರು, ಎಲ್ಲರೂ ಬಾಗಿಲಿಗೆ ಬಂದು
ಉಲ್ಲಾಸದ ನಗೆಯಲ್ಲಿ ಸ್ವಾಗತದ ಸೆಳೇವು ನೀಡುವುದು
ಜೀವನದಿ ಮರೆಯಲಾಗದ ಸುಖಾನುಭವವ ತರುವುದು.

ಊಟ ಉಪಚಾರ ಮುಗಿದು
ಎರಡೂ ಕಡೆಯ ಮಕ್ಕಳ ಪ್ರತಿಭಾ ಪಾಠಗಳ ವರದಿಯ ಜೊತೆಜೊತೆಗೆ
ಪರಸ್ಪರ ಸುಖ ಸಂಕಥಾ, ಆಮೋದ ಪ್ರಮೋದದ ನೆರಿಕೆಯಲ್ಲಿ
ಇಣುಕುವಾಗ

ಮಾತಿಗೆ ನೂರು ಮುಖವಾಗಿ
ಸರಿಹೊತ್ತಾದರೂ ಕೊಡುಹ ಮುಗಿಯುವುದಿಲ್ಲ
ಒಬ್ಬೊಬ್ಬರೆ ನೆಂಟರು ಬಂದು ಸೇರಿದ ಹಾಗೆ ಉದ್ದುದ್ದ ಬೆಳೆವುದು
ಹಬ್ಬವೇ ಮುಗಿದು ಊರಿಗೆ ಹೊರಟು ಅರ್ಧ ದಾರಿಗೆ ಬಂದರೂ
ಮುಗಿಯುವ ಲಕ್ಷಣ ಕಣುವುದಿಲ್ಲ.

ಬಿಡುವಾಗಿ ಊರು, ಹೊಲಗಳ ಸುತ್ತ
ಒಂದು ಸುತ್ತು ಹಾಕಿ ಬರುವಾಗ
ಬಾಲ್ಯವು ಮರುಕಳಿಸುವುದು
ಎಲ್ಲಾ ಮುಗಿದು ಹೊರಟು ನಿಂತಾಗ
ಕ್ಷಣ ಕಾಲ
ಎಂದಿನಂತೆ ಕಣ್ಣು ಮಂಜಾಗುವವು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...