Home / ಕವನ / ಕವಿತೆ / ಮಳೆ-ಡಗೆ

ಮಳೆ-ಡಗೆ

ಎಂದು ಬರುವುದೋ ನಿನ್ನ ಕರುಣೆ ಮಳೆಯಾಗಿ ಧರೆಗೆ ಇಳಿದು
ಎಂದಿನಂತೆ ಸುರಿದಿಹುದು ಬಿಸಿಲು ಎದೆಯ ಒಣಗಿಸಿಹುದು || ೧ ||

ಮಳೆಯು ಬಂದರೂ ಒಂದು ಹನಿ ನಿಲ್ಲದೇ ಹರಿಯುತ್ತಿತ್ತು
ಇಳಿಯಲೊಲ್ಲದೋ ಕಾವು, ಸುಡುತಲಿದೆ ಒಳಗಿನಿಂದ ಸತ್ತು || ೨ ||

ಬಂದಾಯ್ತು ಮಳೆಯು ಎಷ್ಟೆಷ್ಟೊ ಬಾರಿ ನಂದಿಲ್ಲ ಇದರ ಡಗೆಯು
ಮಣ್ಣಾಗಲೆಂದು ಈ ಬಂಡೆಯೊಂದು ಕೂಗುತಿದೆ ಕೆರಳಿ ಬಗೆಯು || ೩ ||

ಅಂದಿಗಂದಿಗೇ ಸುಡುವ ಹಂಚಿನಲಿ ನೀರು ಬಿದ್ದ ಹಾಗೆ
ಆವಿಯಾಗಿ ಹೋಗಿತ್ತು ತಿಳಿವು ಉಳಿದಿತ್ತು ಬರಿಯ ಬೇಗೆ || ೪ ||

ಅಷ್ಟಾದರೂ ತಂಪು ಒದಗಲೀ ಎಂದು ನೆಲ ಮಳೆಗೆ ಕಾಯ್ದು
ಮತ್ತೆ ಕಾಯುವುದು ಬಾಯಿ ತೆರೆದು ಹಲುಮೊರೆದು ಬೆಂದು ಸುಯ್ದು || ೫ ||

ಎಷ್ಟು ಬಂದರೂ ಇಷ್ಟೆ ಏನೊ ತಿಳಿ ಜಲವು ತಿಳಿಯಲಿಲ್ಲ
ನಿಷ್ಠೆಯಿಂದಲೇ ಕೂಗುತ್ತಿದ್ದರೂ ದೋಷವಳಿಯಲಿಲ್ಲ || ೬ ||

ಬೇಡುವುದು ಬೇರೆ ಬಯಸುವುದು ಬೇರೆ ಉಣ್ಣದಂಥ ಪರಿಯು
ಎಷ್ಟು ತೊಯ್ಸಿದರು ತೊಯ್ಯದಂಥ ಕಾಠಿಣ್ಯ ಕಲ್ಲು ದರಿಯು || ೭ ||

ಎಲ್ಲರೊಳು ಕೂಡಿ ಚೆಲುವಾದ ಬೆಲೆಯ ಪಡೆವಂಥ ಭಾಗ್ಯವಿಲ್ಲ
ಮಣ್ಣಿನೊಳು ಬೆರೆತು ಎಲ್ಲವನು ಮರೆತು ಸಾರ್ಥಕ್ಯ ಪಡೆಯಲಿಲ್ಲ|| ೮ ||

ನೀನು ಮುಟ್ಟಿದರೆ ಕೊರಡು ಕೊನರುವುದು ಕಲ್ಲು ಕರಗುವುದು ಎಂದು
ಕೇಳಿ ತಿಳಿದಿರುವೆ ಆದರೇನು ನೀನೂಲಿಯಬೇಕು ಎಂದು? || ೯ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...