ಏಣಿ

ಮೇಲೇರಬೇಕು
ಮೇಲೆ ಬರಲೇ ಬೇಕು
ಮೇಲೇರಿ ಬರುವುದು
ಯಾರೊಬ್ಬನ ಸ್ವತ್ತಲ್ಲ
ಎಲ್ಲರ ಜನ್ಮಸಿದ್ಧ ಹಕ್ಕು.
ಇರುವುದೊಂದೇ ಏಣಿ
ಹತ್ತುವವರೋ ಅಸಂಖ್ಯ
ಗುಂಪು ಗುಂಪು ಮಂದಿ
ಅನೇಕರಿಗೆ ಏಣಿಯ
ಹತ್ತಿರವೂ ಹೋಗಲಾಗುತ್ತಿಲ್ಲ.
ತಾಕತ್ತಿದ್ದವ ನುಗ್ಗಿದ
ಅವನೊಂದಿಗೆ ನೂರಾರು ಜನ
ನುಗ್ಗಿಯೇ ನುಗ್ಗಿದರು.
ಕಾಲ್ಹಿಡಿದು ಜಗ್ಗಿದರು
ಮುಂದೆ ಹೋದವನ ಹಿಂದಕ್ಕೆ
ತಳುತ್ತಾ ಮೇಲೇರೇ ಏರಿದರು.
ಹಿಂದಿದ್ದವರಾರೋ ಮುಂದಿದ್ದವರಾರೋ?
ಸಿಕ್ಕಿದವರಿಗೆ ಸೀರುಂಡೆ.
ಮೇಲೇರಿದಂತೆಲ್ಲಾ ಗುಂಪೇ ಇಲ್ಲ!
ದಾರಿ ಸುಗಮ. ಆದರೆ
ತೀರಾ ಮೇಲೇರಿದಾಗ ತಿಳಿಯಿತು
ಏಣಿಗೆ ಆಧಾರವೇ ಇಲ್ಲ!
ಅದು ನಿಂತಿರುವುದು ಕೆಳಗೆ
ನಿಂತವರ ತಲೆಯ ಮೇಲೆ!
ಮೇಲೇರಿದವ ಇಳಿಯುವಂತಿಲ್ಲ.
ಮತ್ತೆ‌ಏಳಲು ಸ್ಥಳವೇ ಇಲ್ಲ.
ಏರಿದ್ದಂತು ಆಯತು… ಆದರೆ
ಸಾಧಿಸಿದ್ದಾದರೂ ಏನು?
ಏರದಿದ್ದರೆ ಏನೂ
ಮುಳುಗಿ ಹೋಗುತ್ತಿರಲಿಲ್ಲ.
ಏರಿದಷ್ಟೇ ಬಂತು. ಕೆಳಗೆ?
ಗುಂಪು ಗುಂಪು ಜನ
ಮೇಲೇರಲು ತವಕಿಸುತ್ತಿರುವ
ಏರುವವನ ಕಾಲೆಳೆವ
ಏರಲಾರದೆ ಒದ್ದಾಡುತ್ತಿರುವ
ಜನ… ಜನ… ಜನ…
*****
೦೬-೦೭-೧೯೮೮

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...