ಏಣಿ

ಮೇಲೇರಬೇಕು
ಮೇಲೆ ಬರಲೇ ಬೇಕು
ಮೇಲೇರಿ ಬರುವುದು
ಯಾರೊಬ್ಬನ ಸ್ವತ್ತಲ್ಲ
ಎಲ್ಲರ ಜನ್ಮಸಿದ್ಧ ಹಕ್ಕು.
ಇರುವುದೊಂದೇ ಏಣಿ
ಹತ್ತುವವರೋ ಅಸಂಖ್ಯ
ಗುಂಪು ಗುಂಪು ಮಂದಿ
ಅನೇಕರಿಗೆ ಏಣಿಯ
ಹತ್ತಿರವೂ ಹೋಗಲಾಗುತ್ತಿಲ್ಲ.
ತಾಕತ್ತಿದ್ದವ ನುಗ್ಗಿದ
ಅವನೊಂದಿಗೆ ನೂರಾರು ಜನ
ನುಗ್ಗಿಯೇ ನುಗ್ಗಿದರು.
ಕಾಲ್ಹಿಡಿದು ಜಗ್ಗಿದರು
ಮುಂದೆ ಹೋದವನ ಹಿಂದಕ್ಕೆ
ತಳುತ್ತಾ ಮೇಲೇರೇ ಏರಿದರು.
ಹಿಂದಿದ್ದವರಾರೋ ಮುಂದಿದ್ದವರಾರೋ?
ಸಿಕ್ಕಿದವರಿಗೆ ಸೀರುಂಡೆ.
ಮೇಲೇರಿದಂತೆಲ್ಲಾ ಗುಂಪೇ ಇಲ್ಲ!
ದಾರಿ ಸುಗಮ. ಆದರೆ
ತೀರಾ ಮೇಲೇರಿದಾಗ ತಿಳಿಯಿತು
ಏಣಿಗೆ ಆಧಾರವೇ ಇಲ್ಲ!
ಅದು ನಿಂತಿರುವುದು ಕೆಳಗೆ
ನಿಂತವರ ತಲೆಯ ಮೇಲೆ!
ಮೇಲೇರಿದವ ಇಳಿಯುವಂತಿಲ್ಲ.
ಮತ್ತೆ‌ಏಳಲು ಸ್ಥಳವೇ ಇಲ್ಲ.
ಏರಿದ್ದಂತು ಆಯತು… ಆದರೆ
ಸಾಧಿಸಿದ್ದಾದರೂ ಏನು?
ಏರದಿದ್ದರೆ ಏನೂ
ಮುಳುಗಿ ಹೋಗುತ್ತಿರಲಿಲ್ಲ.
ಏರಿದಷ್ಟೇ ಬಂತು. ಕೆಳಗೆ?
ಗುಂಪು ಗುಂಪು ಜನ
ಮೇಲೇರಲು ತವಕಿಸುತ್ತಿರುವ
ಏರುವವನ ಕಾಲೆಳೆವ
ಏರಲಾರದೆ ಒದ್ದಾಡುತ್ತಿರುವ
ಜನ… ಜನ… ಜನ…
*****
೦೬-೦೭-೧೯೮೮

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...