Home / ಕವನ / ಕವಿತೆ / ಹಡಗು

ಹಡಗು

ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ
ದೂರದಿಂದ ನೋಡಿ
ಅದರ ಸೌಂದರ್ಯ,
ತಿಳಿಯದೆ ಅಂತರ್ಯ,
ಸ್ಥಳ ಗಿಟ್ಟಿಸಲು ಹೋದವರು,
ಹೋಗಲು ಹಂಬಲಿಸಿದವರು
ಇದ್ದಾರು ಅಸಂಖ್ಯ ಜನರು.
ಒಳ ಹೊಕ್ಕು ಕುಳಿತವರಿಗೇ ಗೊತ್ತು
ಅಲ್ಲಿನ ವಿಶಿಷ್ಟ ಜಗತ್ತು
ನಿಂತ ನೆಲವೇ ಭದ್ರವಿಲ್ಲ
ಸದಾ ಕುಲುಕು ನಡಿಗೆ
ಹೊರಟಾಗಿದೆ. ಹಿಂತಿರುಗುವಂತಿಲ್ಲ,
ಮಧ್ಯೆ ಇಳಿಯುವ ಮಾತೇ ಇಲ್ಲ!
ತೇಲುತ್ತಿರುವ ಜಲವೇ ಉಕ್ಕಿ
ತನ್ನ ಒಡಲಲ್ಲಿ ಸೇರಿಸಿ
ಹೆಸರಿಲ್ಲದಂತೆ ಮಾಡೀತು.
ಅನಿರೀಕ್ಷಿತ ಬಂದ ತಿಮಿಂಗಿಲ
ಬುಡಮೇಲು ಮಾಡೀತು
ಕಡಲಗಳ್ಳರ ಕಾಟ ಒಂದೆಡೆ,
ಬಿರುಗಾಳಿಯ ಭೀತಿ ಮತ್ತೊಂದೆಡೆ.
ಶೇಖರಿಸಿರುವ ಊಟ, ನೀರು
ಮುಗಿಯುವ ಮುನ್ನ ಒಂದೂರು
ಸೇರುವ ನೆಲೆಸುವ ಆಸೆ ನೂರು
ಸೇರಿದರೆ ಸೇರೇವು,
ಕರೆ ಬಂದರೆ ಮತ್ತೆ ಹೊರಟೆವು
ದೀರ್ಘ ಪಯಣ ತಂದ ನಂಟು
ತಿಳಿಯದೆ ಹಾಕಿಕೊಂಡ ಗಂಟು
ತಂದೀತು ಅನಿಶ್ಚಿತತೆಯಲ್ಲೆ
ನಿಶ್ಚಿತ ಬಾಳಿನ ಲಂಗರು.
ನಮ್ಮಹಡಗು ಬ್ಯಾಂಕು
ಬಾಳು ದೀರ್ಘ ಪಯಣ
ಕೊನೆ ಮೊದಲಿಲ್ಲದ ವರ್ಗಗಳು
ಆಂತರಿಕ ಬಾಹ್ಯ ಒತ್ತಡಗಳು
ರಾಜಕೀಯ ವಶೀಲಿಗಳು
ದಿನ ನಿತ್ಯದ ನೂರೆಂಟು ಸಮಸ್ಯೆಗಳು
ಹುಟ್ಟೂರು ಬಿಟ್ಟು, ಕಳೆದು ದಶಕಗಳು
ಊರಿಂದೂರಿಗೆ ವಲಸೆ ಹೋದಲ್ಲಿ –
ಎಲ್ಲಿಯೋ ಮದುವೆಯಾಗಿ
ಬೇರೆಲ್ಲಿಯೋ ಮನೆ ಕಟ್ಟಿ
ದೇವರ ದಯೆಯಿಂದ,
ದೊಡ್ಡವರ ಆಶೀರ್ವಾದದಿಂದ
ಮರ್ಯಾದೆಯಾಗಿ ರಿಟೈರಾದರೆ
ಏಳೇಳು ಜನ್ಮಗಳ ಪುಣ್ಯ.
ನಿಜಕ್ಕೂ..ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ.
*****
೧೧-೦೬-೧೯೯೨

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...