Home / ಕಥೆ / ಸಣ್ಣ ಕಥೆ / ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ಕಾರುಗಹಳ್ಳಿಯ ಪಾಳಯಗಾರರು ಮೈಸೂರಿನಿಂದ ಓಡಿಸಿದಮೇಲೆ ಬೆಟ್ಟದ ಒಡೆಯರು ಕತ್ತಿಯನ್ನು ಹಿಡಿದು ರಾಜ ಒಡೆಯರಿಗಾಗಿ ಅನೇಕ ಜಯಗಳನ್ನು ಪಡೆದರು. ರಾಜ ಒಡೆಯರ ಪ್ರಾಬಲ್ಯವನ್ನು ಶ್ರೀರಂಗಪಟ್ಟಣದ ಅಧಿಕಾರಿಯು ಸಹಿಸಲಿಲ್ಲ; ಅದನ್ನು ತಗ್ಗಿಸುವ ಯೋಚನೆಯಿಂದ ಮೈಸೂರಿನ ಬಳಿ ಇದ್ದ ಕೆಸರೆಯೆಂಬ ಕೋಟೆಯನ್ನು ಹಿಡಿಯಲು ಸೈನ್ಯವನ್ನು ಕಳುಹಿಸಿದನು. ಆ ಅಧಿರಾಜನ ಸೈನ್ಯವನ್ನು ಬೆಟ್ಟದ ಒಡೆಯರೇ ಎದುರಿಸಿ ಸೋಲಿಸಿದರು. ಕೆಸರೆಯ ಕೋಟೆಯನ್ನು ಕೊಳ್ಳೆ ಹೊಡೆದರು. ಕೊಳ್ಳೆಯಲ್ಲಿ ಉತ್ತಮವಾದ ಒಂದಾನೆಯು ಸಿಕ್ಕಿತು. ಆ ಆನೆಯನ್ನು ತಂದು ಬೆಟ್ಟದ ಒಡೆಯರು ರಾಜ ಒಡೆಯರಿಗೆ ಒಪ್ಪಿಸಿದರು.

ರಾಜ ಒಡೆಯರು ಆನೆಯನ್ನು ಸಾಕಿಕೊಳ್ಳುವುದು ಕಷ್ಟವಾಗಿತ್ತು. ಇಟ್ಟುಕೊಂಡರೆ ವೃಥಾ ವೆಚ್ಚವಾಗುವುದೆಂದು ಯೋಚಿಸುತ್ತ ” ಈ ಆನೆಗಾಗಿ ವೆಚ್ಚ ಮಾಡತಕ್ಕ ಹಣದಿಂದ ಮೂವತ್ತು ಸೈನಿಕರ ಸಂಬಳಗಳನ್ನು ಕೊಡಬಹುದು ಆದ್ದರಿಂದ ಮೂವತ್ತು ಸೈನಿಕರನ್ನು ಸೇನೆಯಲ್ಲಿ ಹೆಚ್ಚಿಸೋಣ. ಆನೆಯನ್ನು ಕರೆದು ಕೊಂಡುಹೋಗಿ ಶ್ರೀರಂಗಪಟ್ಟಣದ ರಾಯರಿಗೆ ಕೊಟ್ಟುಬಿಡೋಣ” ಎಂದರು. ಈ ರೀತಿಯಲ್ಲಿ ಎದುರುಬಿದ್ದ ತಪ್ಪನ್ನು ತೊಡೆದುಹಾಕಲು, ರಾಜ ಒಡೆಯರು ಸಂಧಾನಮಾಡಿ ತಮ್ಮ ಹಣವನ್ನು ವ್ಯರ್ಥವ್ಯಯಕ್ಕೆ ಕೊಡದೆ ಇದ್ದರು. ಶ್ರೀರಂಗಪಟ್ಟಣದ ರಾಯನು ಅನೆಯನ್ನು ಸ್ವೀಕರಿಸಿ ಸಮಾಧಾನಪಟ್ಟು, ರಾಜ ಒಡೆಯರನ್ನು ಮನ್ನಿಸಿದನು. ತರುವಾಯ, ತಮ್ಮ ಭೂಮಿಗಳಲ್ಲಿ ಇತರರ ತೊಂದರೆ ಹೆಚ್ಚಿತೆಂದು ಜಾಣತನದಿಂದ ಹೇಳಿ ರಾಜ ಒಡೆಯರು ಕೊಡುತ್ತಿದ್ದ ಪೊಗದಿಯನ್ನು ನಿಲ್ಲಿಸಿದರು. ಮತ್ತು ಹೊಸದಾಗಿ ಒಂದೆರಡು ಹಳ್ಳಿಗಳನ್ನು ರಾಜನಿಂದ ಪಡೆದರು.
*****
[ವಿಲ್ಕ್ಸ್, ಸಂ.೧; ಪುಟ ೨೪]

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...