Home / ಕಥೆ / ಸಣ್ಣ ಕಥೆ / ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ರಾಜ ಒಡೆಯರು ಆನೆಯನ್ನು ಬಿಟ್ಟಿದ್ದು

ಕಾರುಗಹಳ್ಳಿಯ ಪಾಳಯಗಾರರು ಮೈಸೂರಿನಿಂದ ಓಡಿಸಿದಮೇಲೆ ಬೆಟ್ಟದ ಒಡೆಯರು ಕತ್ತಿಯನ್ನು ಹಿಡಿದು ರಾಜ ಒಡೆಯರಿಗಾಗಿ ಅನೇಕ ಜಯಗಳನ್ನು ಪಡೆದರು. ರಾಜ ಒಡೆಯರ ಪ್ರಾಬಲ್ಯವನ್ನು ಶ್ರೀರಂಗಪಟ್ಟಣದ ಅಧಿಕಾರಿಯು ಸಹಿಸಲಿಲ್ಲ; ಅದನ್ನು ತಗ್ಗಿಸುವ ಯೋಚನೆಯಿಂದ ಮೈಸೂರಿನ ಬಳಿ ಇದ್ದ ಕೆಸರೆಯೆಂಬ ಕೋಟೆಯನ್ನು ಹಿಡಿಯಲು ಸೈನ್ಯವನ್ನು ಕಳುಹಿಸಿದನು. ಆ ಅಧಿರಾಜನ ಸೈನ್ಯವನ್ನು ಬೆಟ್ಟದ ಒಡೆಯರೇ ಎದುರಿಸಿ ಸೋಲಿಸಿದರು. ಕೆಸರೆಯ ಕೋಟೆಯನ್ನು ಕೊಳ್ಳೆ ಹೊಡೆದರು. ಕೊಳ್ಳೆಯಲ್ಲಿ ಉತ್ತಮವಾದ ಒಂದಾನೆಯು ಸಿಕ್ಕಿತು. ಆ ಆನೆಯನ್ನು ತಂದು ಬೆಟ್ಟದ ಒಡೆಯರು ರಾಜ ಒಡೆಯರಿಗೆ ಒಪ್ಪಿಸಿದರು.

ರಾಜ ಒಡೆಯರು ಆನೆಯನ್ನು ಸಾಕಿಕೊಳ್ಳುವುದು ಕಷ್ಟವಾಗಿತ್ತು. ಇಟ್ಟುಕೊಂಡರೆ ವೃಥಾ ವೆಚ್ಚವಾಗುವುದೆಂದು ಯೋಚಿಸುತ್ತ ” ಈ ಆನೆಗಾಗಿ ವೆಚ್ಚ ಮಾಡತಕ್ಕ ಹಣದಿಂದ ಮೂವತ್ತು ಸೈನಿಕರ ಸಂಬಳಗಳನ್ನು ಕೊಡಬಹುದು ಆದ್ದರಿಂದ ಮೂವತ್ತು ಸೈನಿಕರನ್ನು ಸೇನೆಯಲ್ಲಿ ಹೆಚ್ಚಿಸೋಣ. ಆನೆಯನ್ನು ಕರೆದು ಕೊಂಡುಹೋಗಿ ಶ್ರೀರಂಗಪಟ್ಟಣದ ರಾಯರಿಗೆ ಕೊಟ್ಟುಬಿಡೋಣ” ಎಂದರು. ಈ ರೀತಿಯಲ್ಲಿ ಎದುರುಬಿದ್ದ ತಪ್ಪನ್ನು ತೊಡೆದುಹಾಕಲು, ರಾಜ ಒಡೆಯರು ಸಂಧಾನಮಾಡಿ ತಮ್ಮ ಹಣವನ್ನು ವ್ಯರ್ಥವ್ಯಯಕ್ಕೆ ಕೊಡದೆ ಇದ್ದರು. ಶ್ರೀರಂಗಪಟ್ಟಣದ ರಾಯನು ಅನೆಯನ್ನು ಸ್ವೀಕರಿಸಿ ಸಮಾಧಾನಪಟ್ಟು, ರಾಜ ಒಡೆಯರನ್ನು ಮನ್ನಿಸಿದನು. ತರುವಾಯ, ತಮ್ಮ ಭೂಮಿಗಳಲ್ಲಿ ಇತರರ ತೊಂದರೆ ಹೆಚ್ಚಿತೆಂದು ಜಾಣತನದಿಂದ ಹೇಳಿ ರಾಜ ಒಡೆಯರು ಕೊಡುತ್ತಿದ್ದ ಪೊಗದಿಯನ್ನು ನಿಲ್ಲಿಸಿದರು. ಮತ್ತು ಹೊಸದಾಗಿ ಒಂದೆರಡು ಹಳ್ಳಿಗಳನ್ನು ರಾಜನಿಂದ ಪಡೆದರು.
*****
[ವಿಲ್ಕ್ಸ್, ಸಂ.೧; ಪುಟ ೨೪]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...