Home / ಲೇಖನ / ಇತರೆ / ಜೀವನ ಬೇವು-ಬೆಲ್ಲ

ಜೀವನ ಬೇವು-ಬೆಲ್ಲ

ಪ್ರಿಯ ಸಖಿ,
ಅರ್ಥಪೂರ್ಣವಾದ ಹಳೆಯ ಚಿತ್ರಗೀತೆಯೊಂದು ತೇಲಿಬರುತ್ತಿದೆ.
ಈ ಜೀವನ ಬೇವುಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ನಿನಗುಂಟು ಜಯ ?
ನಿಜಕ್ಕೂ ಈ ಬದುಕು ಬೇವು ಬೆಲ್ಲಗಳ ಸಮಪಾಕವೇ ಅಲ್ಲವೇ ಸಖಿ. ಬದುಕಿನ ನಾಣ್ಯದ ಒಂದು ಮಗ್ಗುಲಿಗೆ ಸುಖ ಇನ್ನೊಂದು ಮಗ್ಗುಲಿಗೆ ದುಃಖ ಸುಖ ಅಥವಾ ದುಃಖ ಒಂದೇ ಸದಾ ಇಲ್ಲಿ ಸ್ಥಿರವಾಗಿರುವುದಿಲ್ಲ. ಈ ನಿಜವನ್ನು ಅರಿತವನು ತನಗೆ ಸದಾ ನೋವೇ ಎಂದು ವೃಥಾ ಚಿಂತಿಸಿ ಕೊರಗುವುದಿಲ್ಲ. ತನ್ನ ನೋವನ್ನೂ ದಿಟ್ಟತನದಿಂದ ನಲಿವನ್ನಾಗಿಸಿಕೊಳ್ಳಬಲ್ಲ ಕಲೆ ಅರಿತ ವ್ಯಕ್ತಿಗೆ ಸದಾ ಗೆಲುವು ಕಟ್ಟಿಟ್ಟ ಬುತ್ತಿ.

ಬರಿಯ ಸುಖವನ್ನೇ ಕಂಡ ಮನುಷ್ಯನಾಗಲೀ ಬರೀ ದುಃಖವನ್ನೇ ಕಂಡ ಮನುಷ್ಯನಾಗಲೀ ಎಂದಿಗೂ ಪರಿಪೂರ್ಣನಲ್ಲ. ಅವನ ಭಾವಗಳು ಪಕ್ವಗೊಳ್ಳಲು ದುಃಖ ಎರಡರ ಅನುಭವವೂ ವ್ಯಕ್ತಿಗೆ ಬೇಕು. ಹೀಗೆಂದೇ ಯುಗಾದಿಯಂದು ಸಾಂಕೇತಿಕವಾಗಿ, ನಾವು ಬೇವು ಬೆಲ್ಲವನ್ನು ಒಟ್ಟಾಗಿ ಸೇವಿಸಿ ವರ್ಷವಿಡೀ ಬದುಕು ಕಷ್ಪ ಸುಖಗಳ ಸಮನ್ವಯವಾಗಲೆಂದು ಆಶಿಸುತ್ತೇವೆ.

ಡಾ. ರೆಹೀನ್‍ಹೋಲ್ಡ್ ಅವರು,
God, grant me the sensibility
to accept the things I cannot change,
The courage to change the things I can,
And the wisdom to know the difference!

ದೇವರೇ, ನನ್ನಿಂದ ಬದಲಿಸಲಾಗದ ಸಂಗತಿಗಳನ್ನು ಒಪ್ಪಿಕೊಳ್ಳುವಂತಾ ತಿಳಿವು ನೀಡು. ನನ್ನಿಂದ ಬದಲಿಸಲಾಗುವ ಸಂಗತಿಗಳನ್ನು ಬದಲಿಸಲು ಧೈರ್ಯ ನೀಡು ಮತ್ತು ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಬುದ್ಧಿಶಕ್ತಿ ನೀಡು ಎಂದು ಪ್ರಾರ್ಥಿಸುತ್ತಾರೆ. ಇಂತಹ ಮೌಲಿಕ ನುಡಿಗಳನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲೂ ಅಳಿವಡಿಸಿಕೊಂಡು, ಸುಖ-ದುಃಖ ಎರಡನ್ನೂ ಒಂದೇ ರೀತಿ ನೋಡುವ ಸ್ಥಿತ ಪ್ರಜ್ಞೆಯನ್ನು ನಾವೂ ಬೆಳೆಸಿಕೊಳ್ಳಲು ಸಾಧ್ಯವಾದರೆ, ಅದೇ ಈ ಹೊಸವರ್ಷಕ್ಕೆ, ಸಂವತ್ಸರಕ್ಕೆ ನಮಗೆ ನಾವು ಕೊಟ್ಟುಕೊಳ್ಳುವ ಕೊಡುಗೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...