Home / ಲೇಖನ / ಇತರೆ / ಜೀವನ ಬೇವು-ಬೆಲ್ಲ

ಜೀವನ ಬೇವು-ಬೆಲ್ಲ

ಪ್ರಿಯ ಸಖಿ,
ಅರ್ಥಪೂರ್ಣವಾದ ಹಳೆಯ ಚಿತ್ರಗೀತೆಯೊಂದು ತೇಲಿಬರುತ್ತಿದೆ.
ಈ ಜೀವನ ಬೇವುಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ನಿನಗುಂಟು ಜಯ ?
ನಿಜಕ್ಕೂ ಈ ಬದುಕು ಬೇವು ಬೆಲ್ಲಗಳ ಸಮಪಾಕವೇ ಅಲ್ಲವೇ ಸಖಿ. ಬದುಕಿನ ನಾಣ್ಯದ ಒಂದು ಮಗ್ಗುಲಿಗೆ ಸುಖ ಇನ್ನೊಂದು ಮಗ್ಗುಲಿಗೆ ದುಃಖ ಸುಖ ಅಥವಾ ದುಃಖ ಒಂದೇ ಸದಾ ಇಲ್ಲಿ ಸ್ಥಿರವಾಗಿರುವುದಿಲ್ಲ. ಈ ನಿಜವನ್ನು ಅರಿತವನು ತನಗೆ ಸದಾ ನೋವೇ ಎಂದು ವೃಥಾ ಚಿಂತಿಸಿ ಕೊರಗುವುದಿಲ್ಲ. ತನ್ನ ನೋವನ್ನೂ ದಿಟ್ಟತನದಿಂದ ನಲಿವನ್ನಾಗಿಸಿಕೊಳ್ಳಬಲ್ಲ ಕಲೆ ಅರಿತ ವ್ಯಕ್ತಿಗೆ ಸದಾ ಗೆಲುವು ಕಟ್ಟಿಟ್ಟ ಬುತ್ತಿ.

ಬರಿಯ ಸುಖವನ್ನೇ ಕಂಡ ಮನುಷ್ಯನಾಗಲೀ ಬರೀ ದುಃಖವನ್ನೇ ಕಂಡ ಮನುಷ್ಯನಾಗಲೀ ಎಂದಿಗೂ ಪರಿಪೂರ್ಣನಲ್ಲ. ಅವನ ಭಾವಗಳು ಪಕ್ವಗೊಳ್ಳಲು ದುಃಖ ಎರಡರ ಅನುಭವವೂ ವ್ಯಕ್ತಿಗೆ ಬೇಕು. ಹೀಗೆಂದೇ ಯುಗಾದಿಯಂದು ಸಾಂಕೇತಿಕವಾಗಿ, ನಾವು ಬೇವು ಬೆಲ್ಲವನ್ನು ಒಟ್ಟಾಗಿ ಸೇವಿಸಿ ವರ್ಷವಿಡೀ ಬದುಕು ಕಷ್ಪ ಸುಖಗಳ ಸಮನ್ವಯವಾಗಲೆಂದು ಆಶಿಸುತ್ತೇವೆ.

ಡಾ. ರೆಹೀನ್‍ಹೋಲ್ಡ್ ಅವರು,
God, grant me the sensibility
to accept the things I cannot change,
The courage to change the things I can,
And the wisdom to know the difference!

ದೇವರೇ, ನನ್ನಿಂದ ಬದಲಿಸಲಾಗದ ಸಂಗತಿಗಳನ್ನು ಒಪ್ಪಿಕೊಳ್ಳುವಂತಾ ತಿಳಿವು ನೀಡು. ನನ್ನಿಂದ ಬದಲಿಸಲಾಗುವ ಸಂಗತಿಗಳನ್ನು ಬದಲಿಸಲು ಧೈರ್ಯ ನೀಡು ಮತ್ತು ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಬುದ್ಧಿಶಕ್ತಿ ನೀಡು ಎಂದು ಪ್ರಾರ್ಥಿಸುತ್ತಾರೆ. ಇಂತಹ ಮೌಲಿಕ ನುಡಿಗಳನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲೂ ಅಳಿವಡಿಸಿಕೊಂಡು, ಸುಖ-ದುಃಖ ಎರಡನ್ನೂ ಒಂದೇ ರೀತಿ ನೋಡುವ ಸ್ಥಿತ ಪ್ರಜ್ಞೆಯನ್ನು ನಾವೂ ಬೆಳೆಸಿಕೊಳ್ಳಲು ಸಾಧ್ಯವಾದರೆ, ಅದೇ ಈ ಹೊಸವರ್ಷಕ್ಕೆ, ಸಂವತ್ಸರಕ್ಕೆ ನಮಗೆ ನಾವು ಕೊಟ್ಟುಕೊಳ್ಳುವ ಕೊಡುಗೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...