Home / ಕವನ / ಕವಿತೆ / ಜೋಗದ ಜೋಗಿ ನೀನು

ಜೋಗದ ಜೋಗಿ ನೀನು

ಜೋಗದ ಜೋಗಿ ನೀನು
ಏಕೆ ಕಾಡುವೆ ನನ್ನನ್ನು
ನೀನು ನೀನಾಗಿರಲು ಜೋಗಿ
ನನಗಿಲ್ಲ ಚಿಂತೆ ಏನು

ಹೋಗು ಹೋಗೆಲೋ ಜೋಗಿ ಮುಂದಕೆ
ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ
ಏನೆಂದು ಹೇಳಲೋ ಜೋಗಿ
ಏನನ್ನು ಕೊಡಲೋ ಜೋಗಿ

ಜೋಗಿ- ಜೀವನ ನಿನ್ನದ ಅವ್ವ
ಭಾವನ ನಿನ್ನದು
ಹೋಗೆನ್ನಬೇಡ ಅವ್ವ
ಕಟ್ಟೆಯೇ ಆಸರೆಯಾಗಿರಲೇಕೋ
ಪಟ್ಟ ಪಡಲೇಕೋ ಕಷ್ಟ
ಹಸಿರ ನೆಲದ ಅನಂತೆ ನೀನು
ಉಷೆಯಾಗಿಹೇ ನೀನವ್ವ
ಸಸಿಯೊಂದ ನೀಡಲೇ ಅವ್ವ
ಜೀವನ ಇಹುದು ಮುಂದಕೆ

ಒಡತಿ – ಹಸಿರ ಬಾಳಿನ ಹಂದರದೆ
ಹಸಿಯಾಗಿ ಹುದುಗಿದೆ ಮನವು
ಉಷೆ ನಾನಾಗಿರಲೇನು
ಶಶಿಯು ಇಲ್ಲದೆ ಜೋಗಿ
ಬೆತ್ತಲಾಗಿದೆ ಬಯಲು

ಜೋಗಿ – ಹಸಿರ ಬಾಳಿನ ಹಂದರದ
ನಿಮ್ಮ ಮಕ್ಕಳ ಬಾಳು ಬೆಳಗಲಿ
ಪಡದಿರು ಚಿಂತೆ ಅವ್ವ
ಉಷೆ ನೀನು ಕಿರಣವಾಗಿರು ಬಾಳಿಗೆ

ಒಡತಿ – ಹೊರೆ ಹೊತ್ತಿರುವೆ ಸಂಸಾರ
ಗಗನಕ್ಕೇರುವ ಮಾಳಿಗೆ ಸವತಿ
ತಿಳಿವಿಲ್ಲದೆ ಅರಿವಿಲ್ಲದೆ
ಬೆತ್ತಲಾಗಿದೆ ಬಾಳು
ಬತ್ತಿ ಹೋದವೋ ಕಂಗಳು
ಎದೆಯಾಳದ ನೋವ ಅರಸುತ್ತಾ
ಏನೆಂದು ಹೇಳಲೋ ಜೋಗಿ
ಉಷೆ ನಾನಾದರೇನು ಶಶಿ ಇಲ್ಲದ ಮೇಲೆ

ಜೋಗಿ – ಬಾಳ ಪಯಣದ ಬಾಗಿಲು ತೆರೆದು
ಭಾಗ್ಯಲಕ್ಷಿಯಾಗಿದೆ ಏಕೆ ಕೊರಗುವೆ?
ನೀ ಅವ್ವ…
ತುಂಗೆಯು ನೀನು ಗಂಗೆಯು ನೀನು
ಸತಿಯೆ ನಿನಗೇಕೆ ದಾಹ
ಅರಿವಿಲ್ಲದ ಪರಿವೆ ಏಕೆ ತಿಳಿಯೇ
ನೀನು ನೀನಾಗಲೇನು ಚೆಂದ
ಜೀವನ ಇಹುದು ಮುಂದಕೆ ಅವ್ವ

ಒಡತಿ – ಹೊಗಳಲೇಕೊ ಜೋಗಿ
ನನ್ನದೆನ್ನುವದೇನಿದೆಯೋ
ಭೂಮಿಯು ಬರಡಾಗಿದೆ
ಎನ್ನ ಮನವು ಮಸಕಾಗಿದೆ
ಅಕ್ಷಯ ಪಾತ್ರೆಯ ಹುಡುಕುತಿದೆ
ನಿಶೆಯಲ್ಲಿ ನಾನಾಗಿರಬೇಕು
ಶಶಿಯು ಇಲ್ಲದ ಮೇಲೆ ಜೋಗಿ

ಜೋಗಿ – ನಿನ್ನ ಅಂಗಳದಲ್ಲಿಹುದೆ ಪಾತ್ರೆ
ನಿನ್ನದೇನಿದೆಯೊ ಮಾಯೆ
ಒಂದು ಅಗಳು ಸಾಕೆನಗೆ
ನಾಳೆಗಾಗಿ ಕಾಯುವೆ ಮತ್ತೆ
ತುಂಬಲಿ ಮನೆಯು ಹರಸುವೆ ನಿನ್ನ
ಜೀವನ ಇಹುದೆ ಮುಂದಕೆ ಅವ್ವ

ಒಡತಿ – ನಿನ್ನ ನುಡಿಯಲಿಹುದೆ ಆಶಾಕಿರಣ
ನನ್ನ ಬಾಳಿಗೆ ನೀಡಲಿ ಕಿರಣ
ಚಾತಕ ಪಕ್ಷಿಯಂತೆ ಕಾಯುವೆ
ಹಿಡಿಯು ಹಿಡಿಯಲೇಕೂ ಜೋಗಿ
ನನ್ನ ಅಂಗಳವು ಹಸಿರಾಗಲಿ
ಹಿಡಿಯು ಅಕ್ಷಯವಾಗಲಿ
ಉಸಿರಾಗಲಿ ಸಸಿಗಳು
ನೀ ಬರುವ ತನಕ
ಹೋಗಿ ಬಾರೆಲೋ ಜೋಗಿ
ನಾಳೆಗಿನ ನೆನಪಿಗೆ
ನೀ ಹೋಗಿ ಬಾರಲೋ ಜೋಗಿ
ಉಷನಾಗಿದೆನೋ ಶಶಿಗಾಗಿ ಕಾಯುತಿರುವೆ
ನಿನ್ನ ಮಾತೇ ದೀವಿಗೆ
ನಡೆದು ಬಾ ಮತ್ತೆ
ಶಿಶಿರ ಬಂದ ಮೇಲೆ ಜೋಗಿ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...