Home / ಲೇಖನ / ಇತರೆ / ಬೆಳಗದಿರುವುದೇ

ಬೆಳಗದಿರುವುದೇ

ಪ್ರಿಯ ಸಖಿ,
ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್. ವಿ. ಪರಮೇಶ್ವರಭಟ್ಟರು ತಮ್ಮ ಕವನವೊಂದರಲ್ಲಿ ಹೀಗೆ ಹೇಳಿದ್ದಾರೆ.
ವಿಶ್ವವ್ಯಾಪಿ ತಮದ
ಮುಂದೆ ತನ್ನ ದೀಪವೆ?
ತನ್ನ ದಿಟ್ಪವೊಂದರಿಂದೆ
ಕತ್ತಲಳಿವದೇ?
ಎನುವ ಶಂಕೆ ಚುಕ್ಕಿಗೇಕೆ?
ಏಕೆ ಹೆದರಿಕೆ?
ಬೆಳಗಲೆಂದು ಹುಟ್ಟಿದಂದು
ಬೆಳಗದಿರುವುದೇ?
ಎಷ್ಟೊಂದು ಸ್ಫೂರ್ತಿದಾಯಕ ಕವನದ ಸಾಲುಗಳಲ್ಲವೇ ಸಖಿ? ದೊಡ್ಡ ಆಕಾಶದಲ್ಲಿ ಪುಟ್ಟ ತಾರೆಯೊಂದು ಇಷ್ಟೊಂದು ಕತ್ತಲಿನಲ್ಲಿ ತನ್ನ ಬೆಳಕು ಯಾವ ಮೂಲೆಗೆ? ತನ್ನ ದೀಪವೊಂದರಿಂದಲೇ ಕತ್ತಲು ಅಳಿಯುವುದೇ? ಎಂದು ಹೆದರುತ್ತದೆ. ಆದರೆ ಕತ್ತಲು ಎಷ್ಟೇ ಇರಲಿ ಬೆಳಗಲೆಂದೇ ಅದು ಹುಟ್ಟಿರುವದು.

ಹಾಗೇ ಮನುಷ್ಯನೂ ಕೂಡ ಪ್ರತಿಯೊಬ್ಬನಿಗೂ ಅವನವನದೇ ಆದ ವಿಶಿಷ್ಟತೆ, ಬೆಳಕು ಇದ್ದೇ ಇರುತ್ತದೆ. ಅದನ್ನವನು ಕಂಡುಕೊಂಡು ಬಾಳಬೇಕು. ಬೆಳಕು ನೀಡಬೇಕು. ಪ್ರತಿಯೊಬ್ಬ ಜೀವಿಯೂ ಇಲ್ಲಿ ಜನ್ಮ ತಳೆದು ಬಂದ ಮೇಲೆ ಅವನವನ ಕರ್ತವ್ಯವನ್ನು ಅವನು ನಿಭಾಯಿಸಲೇಬೇಕು. ಕಷ್ಟವೆಂದು ಸುಮ್ಮನೆ ಕೂರುವಂತಿಲ್ಲ. ‘ತನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ನಿರಭಿಮಾನವೂ ಬೇಡ. ಹಾಗೇ ‘ತನ್ನಿಂದಲೇ ಪ್ರಪಂಚವೆಲ್ಲಾ ಎಂಬ ದುರಭಿಮಾನವೂ ಬೇಡ. ತನ್ನಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ವ್ಯಕ್ತಿ ಮನಸ್ಸು ಮಾಡಿದನೆಂದರೆ ಅರ್ಧ ಕೆಲಸ ಆದಂತೆಯೇ ಎನ್ನುತ್ತಾರೆ ಹಿರಿಯರು. ಅದಕ್ಕೆಂದೇ
ಕವಿ ಶೇಕ್ಸ್‍ಪಿಯರ್ ಹೀಗೆ ಹೇಳುತ್ತಾನೆ. ‘Where there is will there is a way’ ಎಲ್ಲಿ ಗುರಿ ಇದೆಯೋ ಅಲ್ಲಿ ದಾರಿಯೂ ಇದ್ದೇ ಇದೆ ಎಂದು.

ಪ್ರಿಯ ಸಖಿ, ಸೂರ್ಯನಂತೆ ಜಗವನ್ನೇ ಬೆಳಗಬಲ್ಲೆನೆಂಬ ಹುಂಬತನವಿಲ್ಲದಿದ್ದರೂ ಚುಕ್ಕಿಯಾಗಿಯೇ ಬೆಳಗಿ ನನ್ನ ಸುತ್ತಮುತ್ತಲಾದರೂ ಸರಿ ಬೆಳಕು ನೀಡುವೆನೆಂಬ ಆತ್ಮವಿಶ್ವಾಸ, ಆಶಾವಾದ, ನಂಬಿಕೆ ನಮ್ಮದಾದರೆ ಅಷ್ಟೇ ಸಾಕು. ದಾರಿ ಹೇಗೋ ತಾನೇ ತೆರೆದುಕೊಳ್ಳುತ್ತಾ ಸಾಗುತ್ತದೆ ! ನೀನೇನೆನ್ನುತ್ತೀ ಸಖಿ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...