Home / ಲೇಖನ / ವಿಜ್ಞಾನ / ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ನೀರು ಮತ್ತು ನೆಲದ ಮೇಲೂ ಓಡುವ ‘ಆಕ್ವಡಾ’ ಕಾರು!!

ಕೆಲವು ಯಂತ್ರಗಳು ನೀರಿನಲ್ಲಿ ಚಲಿಸಿದರೆ, ಕೆಲವು ನೆಲದ ಮೇಲೆ ಮಾತ್ರ ಚಲಿಸುತ್ತವೆ. ನೀರಿನ ಒಳಗೂ ಚಲಿಸುವ ಸಬ್ಮೆರಿನ್‌ಗಳು ಸಹ ಇವೆ. ಆಕಾಶದಲ್ಲಿ ಅತ್ಯಂತ ವೇಗದಲಿ ಚಲಿಸುವ ಜೆಟ್‌ಗಳು ಇವೆ. ಇವು ಇಂದಿನ ಯುಗದಲ್ಲಿ ಮಾಮೂಲಿ ವಾಹನಗಳೆಂದು ಜನಹೇಳುತ್ತಾರೆ. ಆದರೆ ನೀರಿನಲ್ಲಿಯೂ ವೇಗವಾಗಿ ನೆಲದ ಮೇಲೂ ಓಡಬಲ್ಲ ಕಾರುಗಳನು ಇತ್ತೀಚೆಗೆ ನ್ಯೂಜಿಲೆಂಡ್ ಮೂಲದ “ಆಲನ್‌ಗಿಬ್ಸ್’, ಎಂಬ ವಿಜ್ಞಾನಿ ಕಂಡುಹಿಡಿದಿದ್ದಾರೆ. ಈತ ತನ್ನ ಶ್ರೀಮಂತಿಕೆಯ ಸ್ವಸಾಮರ್ಥ್ಯದಿಂದ ಈ ಸಾಧನೆ ಮಾಡಿದರು. ಇವರು ಕಂಡು ಹಿಡಿದ ಕಾರು ನೆಲದ ಮೇಲೆ ೧೬೦ ಕಿ.ಮೀ. ಚಲಿಸಿದರೆ ನೀರಿನ ಮೇಲೂ ಗಂಟೆಗೆ ೪೮ ಕಿ.ಮೀ. ಓಡುತ್ತದೆ. ೧೭೫ ಅಶ್ವಶಕ್ತಿಯ ೨.೫ ಲೀಟರ್ ವಿ೬ ಇಂಜನ್ ಈ ಕಾರಿನೊಳಗಿದೆ. ನೆಲದ ಮೇಲೆ ಸಾಮಾನ್ಯ ವಿಧಾನದಲ್ಲಿ ಓಡುವ ಇದಕ್ಕೆ ಜೆಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ವ್ಯವಸ್ಥೆಯಿಂದ ನೀರನ್ನು ಒಳಕ್ಕೆ ಎಳೆದುಕೊಂಡು ಸು. ಒಂದು ಟನ್ನಷ್ಟು ಒತ್ತಡದಲ್ಲಿ ಹಿಂದಕ್ಕೆ ಹೊರಹಾಕಲಾಗುತ್ತದೆ ಈ ಒತ್ತಡವು ವೇಗದ ಚಲನೆಗೆ ಅನುಕೂಲಮಾಡಿಕೊಡುತ್ತದೆ.

ಈ ಕಾರಿನ ನಿರ್ಮಾತೃ ಗಿಬ್ಸ್ ವಾಸಿಸುತ್ತಿದ್ದ ಸಮುದ್ರದ ಬದಿಯಲ್ಲಿರುವ ತನ್ನ ಬಂಗ್ಲೆಯಲ್ಲಿದ್ದಾಗ ಅಲ್ಲಿ ಬಳಸಲೆಂದೇ ಇಂಥಹ ಲಾಭಯದಾಯಕ ವಾಹನವೊಂದನ್ನು ರೂಪಿಸಿದ. ನಂತರ ಬ್ರಿಟನ್ನಲ್ಲೊಂದು ಕಾರ್ಖಾನೆಯನ್ನು ಸ್ಥಾಪಿಸಿದ. ಜಾಗ್ವರ್, ರೋಲ್ಸ್‌ರಾಯ್ ನಂತಹ ಸಂಸ್ಥೆಗಳಲ್ಲಿದ್ದ ಇಂಜನೀಯರ್ ನೀಲ್ ಜೆಂಕಿನ್ಸರನ್ನು ಜೊತೆಗೂಡಿಸಿಕೊಂಡ. ಸತತ ಪರಿಶ್ರಮದೊಂದಿಗೆ ಈ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದ.

‘ಅಕ್ವಡಾ’ ವನ್ನು ತಯಾರಿಸಿದ. ನಮ್ಮಲ್ಲಿರುವ ಲಕ್ಷಲಕ್ಷಗಳಿಗೆ ಸೀಮಿತಗೊಳ್ಳದ ಈ ಕಾರಿನ ಬೆಲೆ ಶ್ರೀಮಂತರಿಗೂ ಎಟುಕದಂತಾಗಿದೆ. ಅಂದ ಹಾಗೆ ಇದರ ಬೆಲೆ ೨,೩೦,೦೦೦ ಡಾಲರ್! ಅಂದರೆ ಭಾರತೀಯ ಬೆಲೆ ೧,೦೫,೮೦,೦೦೦ ಮಾತ್ರ. ಹಾಗೆ ನೋಡಿದರೆ ಈ ಕಾರಿನ ಬೆಲೆ ಕಡಿಮೆಯೆ. ಜರ್ಮನಿ ಮೂಲದ ಡೈಮ್ಲರ್ ಕ್ರೈಸ್ಲರ್ ಕಾರು ತಯಾರಿಕಾ ಕಂಪನಿಯು ಸಿದಪಡಿಸಿದ ‘ಮೇ ಬ್ಯಾಚ್,’ ಎಂಬ ಕಾರಿನ ಬೆಲೆ ೫ ಕೋಟಿಗಳಂತೆ! ಸದ್ಯಕ್ಕೆ ಈ ಭೂಮಂಡಲದ ಮೇಲಿರುವ ಐಶಾರಾಮಿ ಕಾರು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...