Home / ಲೇಖನ / ವಿಜ್ಞಾನ / ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಬೀದಿ ಬೀದಿಯಲ್ಲಿ ವಾಹನಗಳ ಸಂಚಾರದಿಂದಾಗಿ ಮಲಿನ ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರಮಾಲಿನ್ಯದಿಂದಾಗಿ ಜನ ನಿಧಾನವಿಷದಿಂದ ತತ್ತರಿಸುತ್ತಿರುವುದು ಸರ್‍ವಸಾಮಾನ್ಯ. ಅದರಲ್ಲೂ ಪೆಟ್ರೋಲ್‌ ಬಳಸುವುದೆಂದರೆ ದುಬಾರಿ ಬೆಲೆ ಬೇರೆ. ಇಂಥದನ್ನೆಲ್ಲ ಹೋಗಲಾಡಿಸಲೆಂದು ವಿದ್ಯುತ್ ಚಾಲಿತ ತಂತ್ರಗಳನ್ನು ತಯಾರಿಸಿದರೆ ವಿದ್ಯುತ್‌ಗೂ ಬರ. ಪದೆಪದೆ ಕೈಕೊಡುವ ವಿದ್ಯುತ್‌ನಿಂದಾಗಿ ಈ ವಿದ್ಯುತ್‌ಚಾಲಿತ ಯಂತ್ರಗಳು ಯಶಸ್ವಿಯಾಗುತ್ತಿಲ್ಲ. ಆದರೀಗ ವಿದ್ಯುತ್ ಇಲ್ಲದ ದುಬಾರಿ ಬೆಲೆಯೂ ಇಲ್ಲದ ಕೇವಲ ಸೂರ್ಯನ ಕಿರಣದಿಂದಲೇ ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುವ ಸೌರಶಕ್ತಿಯ ಸ್ಕೂಟರ್‌ಗಳು ಮುಂದೆ ಭಾರತೀಯರಿಗೆ ವರದಾನವಾಗಲಿವೆ.

ಲಂಡನ್ನಿನ ಸೌತ್‌ಬ್ಯಾಂಕ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿ ಪಾಲ್‌ಶಾಪಲ್ ಅವರು ಸೌರಶಕ್ತಿಯಿಂದ ಓಡುವ ಸ್ಕೂಟರನ್ನು ತಯಾರಿಸಿದ್ದಾರೆ. ಇಟಲಿಯ ‘ಪಿಯಾಜಿಯೊ’ ಕಂಪನಿಯ ಸಹಯೋಗದಿಂದ ಈ ಸ್ಕೂಟರ್ ತಯಾರಿಸಿರುವ ಶಾಪಲ್ ೧೯೯೬ ನೇ ಸಾಲಿನ “ಪ್ರುಡೆನ್ಸಿಯಲ್ ಬಿಸಿನೆಸ್ ಇನ್ ಪ್ರಾಕ್ಟೀಸ್” ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ಕೈಗಾರಿಕೆಗಳು ಹಾಗೂ ವಿನ್ಯಾಸಕಾರರ ಸಲಹಾ ಕೇಂದ್ರದಲ್ಲಿ ಉದ್ಯೋಗ ಬಯಸಿ ಬರುವ ಪಧವೀಧರರಾಗಿ ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಎಂಜನಿಯರಿಂಗ್ ಪ್ರಾಡಕ್ಟ್-ಡಿಜೈನ್ ಶೋ ನಲ್ಲಿ ಈ ಸೌರಶಕ್ತಿಯ ಸ್ಕೂಟರನ್ನು ಪ್ರದರ್ಶನಕ್ಕಿಡಲಾಗಿತ್ತು.

ಇದಕ್ಕೂ ಮೊದಲು ಶಾಪಲ್ ಸೌರಶಕ್ತಿಯ ಕುಕ್ಕರ್ ಅನ್ನು ವಿನ್ಯಾಸಗೊಳಿಸಿದ್ದರು. ಸ್ಪೇನ್ ಕಂಪನಿಯೊಂದರಲ್ಲಿ ಒಂದು ವರ್ಷಗಳ ಕಾಲ ಈ ಸ್ಕೂಟರ್ ನಿರ್ಮಾಣದ ಕುರಿತು (ಯೋಜನೆ) ಪೂರ್ವಸಿದ್ಧತೆ ಮತ್ತು ಪೂರ್ವ ಕೆಲಸಗಳನ್ನು ಮಾಡುತ್ತಿದ್ದರು. ಸ್ಕೂಟರ್‌ನಲ್ಲಿ ೧೨ ವೊಲ್ಟೇಜ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಸೂರ್ಯನ ಕಿರಣಗಳಿಂದ ಈ ಬ್ಯಾಟರಿಯ ಶಾಖವನ್ನು ಸಂಗ್ರಹಿಸಿ ಸ್ಕೂಟರ್ ಚಾಲು ಮಾಡಿದಾಗ ಬೇಕಿದ್ದಷ್ಟು ಬಿಡುಗಡೆ ಮಾಡುತ್ತ ಹೋಗುತ್ತದೆ ಮತ್ತು ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ವಾಹನಗಳಿಂದ ಹೊರಬರುವ ಮಲೀನ ಹೊಗೆ ಪರಿಸರವನ್ನು ನಾಶಮಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರವಾದಿಗಳಿಗೆ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿದ ಮಧ್ಯಮ ವರ್ಗದ ಜನಕ್ಕೆ ಇದೊಂದು ವಿಶೇಷವಾದ ಸಂತಸ ತರುವ ಸುದ್ದಿಯಾಗಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...