Home / ಲೇಖನ / ವಿಜ್ಞಾನ / ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಬೀದಿ ಬೀದಿಯಲ್ಲಿ ವಾಹನಗಳ ಸಂಚಾರದಿಂದಾಗಿ ಮಲಿನ ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರಮಾಲಿನ್ಯದಿಂದಾಗಿ ಜನ ನಿಧಾನವಿಷದಿಂದ ತತ್ತರಿಸುತ್ತಿರುವುದು ಸರ್‍ವಸಾಮಾನ್ಯ. ಅದರಲ್ಲೂ ಪೆಟ್ರೋಲ್‌ ಬಳಸುವುದೆಂದರೆ ದುಬಾರಿ ಬೆಲೆ ಬೇರೆ. ಇಂಥದನ್ನೆಲ್ಲ ಹೋಗಲಾಡಿಸಲೆಂದು ವಿದ್ಯುತ್ ಚಾಲಿತ ತಂತ್ರಗಳನ್ನು ತಯಾರಿಸಿದರೆ ವಿದ್ಯುತ್‌ಗೂ ಬರ. ಪದೆಪದೆ ಕೈಕೊಡುವ ವಿದ್ಯುತ್‌ನಿಂದಾಗಿ ಈ ವಿದ್ಯುತ್‌ಚಾಲಿತ ಯಂತ್ರಗಳು ಯಶಸ್ವಿಯಾಗುತ್ತಿಲ್ಲ. ಆದರೀಗ ವಿದ್ಯುತ್ ಇಲ್ಲದ ದುಬಾರಿ ಬೆಲೆಯೂ ಇಲ್ಲದ ಕೇವಲ ಸೂರ್ಯನ ಕಿರಣದಿಂದಲೇ ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುವ ಸೌರಶಕ್ತಿಯ ಸ್ಕೂಟರ್‌ಗಳು ಮುಂದೆ ಭಾರತೀಯರಿಗೆ ವರದಾನವಾಗಲಿವೆ.

ಲಂಡನ್ನಿನ ಸೌತ್‌ಬ್ಯಾಂಕ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿ ಪಾಲ್‌ಶಾಪಲ್ ಅವರು ಸೌರಶಕ್ತಿಯಿಂದ ಓಡುವ ಸ್ಕೂಟರನ್ನು ತಯಾರಿಸಿದ್ದಾರೆ. ಇಟಲಿಯ ‘ಪಿಯಾಜಿಯೊ’ ಕಂಪನಿಯ ಸಹಯೋಗದಿಂದ ಈ ಸ್ಕೂಟರ್ ತಯಾರಿಸಿರುವ ಶಾಪಲ್ ೧೯೯೬ ನೇ ಸಾಲಿನ “ಪ್ರುಡೆನ್ಸಿಯಲ್ ಬಿಸಿನೆಸ್ ಇನ್ ಪ್ರಾಕ್ಟೀಸ್” ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ಕೈಗಾರಿಕೆಗಳು ಹಾಗೂ ವಿನ್ಯಾಸಕಾರರ ಸಲಹಾ ಕೇಂದ್ರದಲ್ಲಿ ಉದ್ಯೋಗ ಬಯಸಿ ಬರುವ ಪಧವೀಧರರಾಗಿ ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಎಂಜನಿಯರಿಂಗ್ ಪ್ರಾಡಕ್ಟ್-ಡಿಜೈನ್ ಶೋ ನಲ್ಲಿ ಈ ಸೌರಶಕ್ತಿಯ ಸ್ಕೂಟರನ್ನು ಪ್ರದರ್ಶನಕ್ಕಿಡಲಾಗಿತ್ತು.

ಇದಕ್ಕೂ ಮೊದಲು ಶಾಪಲ್ ಸೌರಶಕ್ತಿಯ ಕುಕ್ಕರ್ ಅನ್ನು ವಿನ್ಯಾಸಗೊಳಿಸಿದ್ದರು. ಸ್ಪೇನ್ ಕಂಪನಿಯೊಂದರಲ್ಲಿ ಒಂದು ವರ್ಷಗಳ ಕಾಲ ಈ ಸ್ಕೂಟರ್ ನಿರ್ಮಾಣದ ಕುರಿತು (ಯೋಜನೆ) ಪೂರ್ವಸಿದ್ಧತೆ ಮತ್ತು ಪೂರ್ವ ಕೆಲಸಗಳನ್ನು ಮಾಡುತ್ತಿದ್ದರು. ಸ್ಕೂಟರ್‌ನಲ್ಲಿ ೧೨ ವೊಲ್ಟೇಜ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಸೂರ್ಯನ ಕಿರಣಗಳಿಂದ ಈ ಬ್ಯಾಟರಿಯ ಶಾಖವನ್ನು ಸಂಗ್ರಹಿಸಿ ಸ್ಕೂಟರ್ ಚಾಲು ಮಾಡಿದಾಗ ಬೇಕಿದ್ದಷ್ಟು ಬಿಡುಗಡೆ ಮಾಡುತ್ತ ಹೋಗುತ್ತದೆ ಮತ್ತು ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ವಾಹನಗಳಿಂದ ಹೊರಬರುವ ಮಲೀನ ಹೊಗೆ ಪರಿಸರವನ್ನು ನಾಶಮಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರವಾದಿಗಳಿಗೆ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿದ ಮಧ್ಯಮ ವರ್ಗದ ಜನಕ್ಕೆ ಇದೊಂದು ವಿಶೇಷವಾದ ಸಂತಸ ತರುವ ಸುದ್ದಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...