Home / ಲೇಖನ / ವಿಜ್ಞಾನ / ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶಯುಕ್ತಗಾಳಿ ಇದ್ದರೆ ಅದು ಬೀಸುತ್ತ ಖಂಡಾಂತರಗೊಂಡು ಬೇರೆ ರಾಷ್ಟ್ರ, ರಾಜ್ಯದ ಜೀವರಾಶಿಗಳಿಗೂ ಆಪತ್ತು ತರಬಲ್ಲದು.

ಸಾಮಾನ್ಯವಾಗಿ ಉಷ್ಣವಲಯದ ನಾಡುಗಳಲ್ಲಿ ಭಾರತವು ಸೇರಿ ಬಳಸುವ ಭಾರಿ ಮಟ್ಟದ ಕೀಟನಾಶಕಗಳು ಗಾಳಿಯೊಡನೆ ಲೀನವಾಗಿ, ಗಾಳಿಯನ್ನು ವಿಷಗೊಳಿಸಿ ಉತ್ತರ ಧೃವ ಪ್ರದೇಶವನ್ನು ಸೇರಿ ನೀರಿನಲ್ಲಿ ಬೆರೆಯುತ್ತವೆ. ಇಂಥಹ ಪರಿಸರದಲ್ಲಿರುವ ಜೀವಿಗಳು ನೀರು, ಮತ್ತು ಗಾಳಿಯ ಸೇವನೆಯಿಂದ ವೇದನೆಯನ್ನು ಪಡಬೇಕಿದೆ. ಕೆನಡಾದ ಉತ್ತರ ಬದಿಯ ಯುಕೋನೀಯ ಲೇಬರ್ಸ್ ಸರೋವರದಲ್ಲಿ ಕೀಟನಾಶಕ ಮತ್ತು ವಿಷದ ಅಂಶ ಸೇರಿ ಕಳವಳಕಾರಿ ಮಟ್ಟವನ್ನು ತಲುಪಿದೆ, ಎಂದು ಇತ್ತೀಚೆಗೆ ಪತ್ತೆಮಾಡಲಾಗಿದೆ. ಈ ಪ್ರದೇಶದಲ್ಲಿ ಕೀಟನಾಶಕ ಅಂಶವನ್ನು ಹಾಕದಿದ್ದರೂ ಆಫ್ರಿಕಾ, ಭಾರತದಂತಹ ದೇಶಗಳ ಕಡೆಯಿಂದ ಉತ್ತರ ಧೃವದತ್ತ ಬೀಸಿದ ಗಾಳಿಯೊಂದಿಗೆ ಸೇರಿಕೊಂಡು ಇಲ್ಲಿ ತನ್ನ ಪರಿಣಾಮವನ್ನು ಬೀರುತ್ತಲಿದೆ.

ಕೆನಡಾದ ಸಂಶೋಧಕರು ಉತ್ತರ ಧೃವ ಪ್ರದೇಶದ ಕಡಲ ನೀರಿನ ಮೇಲ್ಮಟ್ಟದಲಿ ವಿಷಕೀಟನಾಶಕದಂತಹ ಅಂಶಗಳಿರುವುದನ್ನು ಕಂಡು ದಂಗಾಗಿದ್ದಾರೆ. ಈ ಸರೋವರ ಮತ್ತು ಧೃವ ದ ಸುತ್ತ ಮನುಷ್ಯನನ್ನೊಳಗೊಂಡು ೨೦೦ ರಷ್ಟು ಬೇರೆಬೇರೆ ಜೀವರಾಶಿಗಳಿವೆ. ಇಲ್ಲಿಯ ಜೀವರಾಶಿಗಳ ಆಹಾರ ಮೀನು ನೀರು ಮತ್ತು ಮೀನು ಆಹಾರದ ಮೂಲಕ ಈ ಕೀಟನಾಶಕದ ನಂಜು ಸುತ್ತಲ ಪ್ರದೇಶ ಮತ್ತು ಗಾಳಿಬೀಸಿದ ಪ್ರದೇಶಗಳೆಲ್ಲೆಡೆಯಲ್ಲಿ ವಿಷ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವುದಂತೂ ನಿಜ. ಕೀಟನಾಶಕಗಳಿಂದ ಸಸ್ಯಗಳಿಗೆ ಉಪಕಾರವಾಗಬಹುದೆಂದರೂ ಕೊನೆಗೊಂದು ದಿನ ಆ ಸಸ್ಯವು ಸೇರಿ ಜನ ಸಮುದಾಯಕ್ಕೆ ವಿಷ ಹರಡುತ್ತದೆಂಬುದಂತೂ ಸತ್ಯ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...