ಒಂದು ವಿನಂತಿ

ಒಳಬನ್ನಿ ಗೆಳೆಯರೆ
ಇದು ಒಬ್ಬ ಕವೀಂದ್ರನ ಗೋರಿ
ಹುಸಿದಿದ್ದರೆ
ಕಸಿದಿದ್ದರೆ
ಮಾತಿಗೆ ತಪ್ಪಿ ತಪಿಸಿದ್ದರೆ
ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು
ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ
ರಾತ್ರಿ ರಾಮಾಯಣ
ಹಗಲು ಭಾರತ
ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ್ಕಥಾ
ರಸಕೃತಿ ಎನಿಸಿದ್ದರೆ
ಅಳುಕಿಲ್ಲದೆ ಬಂದು
ಸಮಾಧಿ ಮುಂದೆ ಮೊಳಕಾಲೂರಿ.
ಹುಟ್ಟಿ ಅಂತಃಕರಣ
ಕಟ್ಟಿ ಬಂದರೆ ಗಂಟಲು
ಇಕ್ಕಟ್ಟಿನಲ್ಲಿ ನಿಮ್ಮನ್ನೇ ಮೀರಿ
ಕವಿಗೆ ನಿಜಗೌರವ ತೋರಿ.

ಮಹನೀಯರೆ, ನೀವು ಅಲ್ಲೆ
ಹೊರಗೇಟಿನಲ್ಲೇ ನಿಲ್ಲಿ
ಮುರುಕಿಲ್ಲದೆ
ಬಿರುಕಿಲ್ಲದೆ
‘ಬಾಳಬಟ್ಟೆ’ ಎಳ್ಳಷ್ಟೂ
ಹರುಕಿಲ್ಲದೆ ‘ಪರಮಾಗಮ’
ಪಟ್ಟೆಯಾಗಿ ತೆರೆದಿದ್ದರೆ,
ಕಂಡಷ್ಟಕ್ಕೇ ಕಾಂಡ ಕೊಂಬೆ ನಿಜವಾಗಿ
ಕಾಣದಷ್ಟಕ್ಕೇ ಕತ್ತಲಬೇರು ಸುಳ್ಳಾಗಿದ್ದರೆ
ಬಾಡದೆ
ಕೋಡದೆ
ಬಾಳಿನ ಉದಯಾಸ್ತಕ್ಕೆ ಎದೆ
ಹಾಡದೆ ಇದ್ದರೆ, ನಿಲ್ಲಿ,
ನಿಮಗೆ ಮೈಲಿಗೆ ಇಲ್ಲಿ.
ಇಟ್ಟು ಹೋಗಿ ತಂದ ಹೂವು ಹಣ್ಣನ್ನು
ಗೇಟು ತಳ್ಳಿ ಅಲ್ಲೇ ಬದಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಬು ನಂಬೆಲೆ ಮನವೆ
Next post ಹಸಿರು ಎಲೆಯಲಿ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…