Home / ಲೇಖನ / ಇತರೆ / ಮೌನದೊಳಗೆ

ಮೌನದೊಳಗೆ

ಪ್ರಿಯ ಸಖಿ,

ಇದು ಮಾತಿನ ಪ್ರಪಂಚ. ಇಡೀ ವಿಶ್ವವೇ ಶಬ್ದಮಯ. ಪದಗಳನ್ನು ಸೃಷ್ಟಿಸಿ, ಭಾಷೆಯನ್ನು ರೂಢಿಸಿ, ಮಾತನಾಡಲು ಕಲಿತ ಕ್ಷಣದಿಂದ ಮನುಷ್ಯನ ಜೀವನ ಶೈಲಿಯೇ ಬದಲಾಗಿ ಹೋಯಿತೆನ್ನುತ್ತದೆ ಇತಿಹಾಸ. ಅವನ ಎಲ್ಲ ಕ್ರಿಯೆಗಳಿಗೂ ಮಾತೇ ಮೂಲಮಂತ್ರವಾಗಿ ಹೋಯಿತು. ಇಂದು ಮಾತಿಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಂಡರೇ ಭಯವಾಗುತ್ತದೆ. ಮಾತು ಸಂವಹನದ ಅತ್ಯುತ್ತಮ ಮಾಧ್ಯಮವೂ ಹೌದು. ಆದರೆ ಮಾತು ಸೃಷ್ಟಿಸಿರುವ ಅನರ್ಥಗಳು ಆದ ಅಪಾರ್ಥಗಳನ್ನು ಲೆಕ್ಕಿಸುತ್ತಾ ಕುಳಿತರೇ ಅದೇ ಒಂದು ದೊಡ್ಡ ಪುರಾಣವಾಗಬಹುದು.

ಮಹಾಮಾತಿನ ಮನೆಯಾಗಿರುವ ಈ ಪ್ರಪಂಚದಲ್ಲಿ ಮೌನಕ್ಕೆ ಎಲ್ಲಿ ಬೆಲೆ ? ಎಲ್ಲಿ ನೆಲೆ ? ಎಂದು ಕ್ಷಣ ಹೊತ್ತು ಯೋಚಿಸಿದರೆ, ಮಾತಿಗಿಂತ ಮೌನದಿಂದಲೇ ಈ ಜಗತ್ತಿಗೆ ಆಗಿರುವ ಅನುಕೂಲಗಳು ಅಪರಿಮಿತ ಎಂದು ಗೋಚರಿಸುತ್ತಾ ಹೋಗುತ್ತದೆ. ಯೋಚಿಸಲು ಸಾಧ್ಯವಿರುವುದು, ವಿವೇಚಿಸಲು ಸಾಧ್ಯವಿರುವುದು, ಹೊಸತನ್ನ ಸೃಷ್ಟಿಸಲು ಸಾಧ್ಯವಿರುವುದು, ಉಪಕರಣಗಳು ಸೃಷ್ಟಿಯಾಗಿರುವುದು, ಕಥೆ, ಕಾವ್ಯ ಹುಟ್ಟುವುದು, ನಮನ್ನು ನಾವು ಅರಿತುಕೊಳ್ಳುವುದು, ಸಂಬಂಧಗಳನ್ನು ವಿಶ್ಲೇಷಿಸುವುದು ತನ್ನ ಹಾಗೂ ಇತರರ ಮುಖವಾಡಗಳನ್ನು ಅರ್ಥೈಸಲು ಸಾಧ್ಯವಿರುವುದು, ತಪ್ಪುಗಳಿಗೆ ಪಶ್ಚಾತ್ತಾಪ ಪಡುವುದು, ಆಂತರಿಕವಾಗಿ ಬೆಳೆಯುವುದು, ಭಾವನೆಗಳು ಮಥಿಸಿ ಮಥಿಸಿ ಗಟ್ಟಿ ಮಾತಾಗಲು ಸಿದ್ಧತೆ ನಡೆವುದು… ಇನ್ನೂ ಎಷ್ಟೆಷ್ಟೋ ಪಟ್ಟಿ ಮುಗಿಯುವುದೇ ಇಲ್ಲ. ಎಲ್ಲಾ ಸಾಧ್ಯವಾಗಿರುವುದು ಮೌನದಿಂದಲೇ ಮನುಷ್ಯನಿಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಮಾತಿನಿಂದ ಸಾಧಿಸಲಾಗದ ಎಷ್ಟೊಂದನ್ನು ಮೌನದಿಂದ ಸಾಧಿಸಲು ಸಾಧ್ಯವಿರುವುದೇ ಮೌನದ ಮಹತ್ತಿಗೆ ಕಾರಣವಾಗಿದೆ. ಮೌನವೆಂಬುದು ಒಂದು ರೀತಿಯ ತಪಸ್ಸು. ಸದಾ ಚಂಚಲವಾಗಿರುವ ಮನಸ್ಸನ್ನು ಹಿಡಿದಿರಿಸಿ ನಮಗೆ ಬೇಕೆನಿಸುವ ಒಂದು ವಿಷಯದ ಕುರಿತು ಕೇಂದ್ರೀಕರಿಸಿ, ಹೊರಗೆ ಮೌನವಾಗಿದ್ದರೂ ಒಳಗೇ ಚಿಂತನ ಮಂಥನ ನಡೆಸುವ ಕ್ರಿಯೆಯಿಂದ ಅನೇಕ ಸೃಜನಶೀಲ ಸೃಷ್ಟಿಗಳು ಮೂಡಬಹುದು. ಆದರೆ ಇದಕ್ಕೂ ಮಿಗಿಲಾದುದು ಒಳಗಣ ಮೌನ ಆ ಹೊರಗೂ ಮೌನವಾಗುಳಿದು, ತನ್ನ ಮನಸ್ಸಿನೊಂದಿಗೂ ಮೌನವಾಗುಳಿದ ಮೌನದ ಆ ಅಲೌಕಿಕ ಹಂತವನ್ನು ಕೆಲ ಕ್ಷಣಗಳಾದರೂ ಕಂಡುಕೊಂಡವ ನಿಜವಾದ ಋಷಿ ಎನ್ನುತ್ತಾರೆ ನಮ್ಮ ದಾರ್ಶನಿಕರು. ಈ ಹಂತವನ್ನು ತಲುಪುವುದು ಎಲ್ಲರಿಗೂ ಸುಲಭ ಸಾಧ್ಯವಲ್ಲ. ಮೌನದ ಬೆಲೆಯನ್ನು ಅರಿತವನು ಮಾತಿಗಿಂತ ಹೆಚ್ಚು ಮೌನವನ್ನು ಪ್ರೀತಿಸಲಾರಂಭಿಸುತ್ತಾನೆ. ಮೌನದಲ್ಲಿಯೇ ಹೊಸತನ್ನು ಹುಡುಕಲಾರಂಭಿಸುತ್ತಾನೆ. ಮೌನದಲ್ಲಿಯೇ ಇತರರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಾನೆ. ಮಾತಿಗಿರುವ ಶಕ್ತಿಗಿಂತ ನೂರು ಪಟ್ಟು ಶಕ್ತಿ ಮೌನಕ್ಕಿರುವುದನ್ನು ಕಂಡುಕೊಳ್ಳುವವನೇ ನಿಜವಾದ ಸುಖಿ ಎಂದು ನಮ್ಮ ಹಿರಿಯರು ಹೇಳಿದ ಮಾತು ಅರ್ಥಹೀನವಾದುದೆಂದು ನಂಬುವವರಿಗೆ ತಿಳುವಳಿಕೆ ನೀಡಲು ಹೋಗುವುದಕ್ಕಿಂತ ಮೌನವಾಗಿರುವುದೇ ಜಾಣತನವಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...