Home / ಕವನ / ಕವಿತೆ / ಏನು ಪಾಡಲಿ

ಏನು ಪಾಡಲಿ

ಏನ ಪಾಡಲಿ ನಿನ್ನ ಆಮೋದಕಿಂದು
ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ
ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ
ಘನವರಣ ಹನಿರಸದ ಬಲು ಸಿವುರಿನ
ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ
ಕಣಕಣನೆ ದನಿಗೊಡುವ ಗಜ ಗಬ್ಬುಬೇಕೆ

ಕಿರಿ ಪಿರಿಯ ನವನುಡಿಯ ಹೊಳೆ ಹೊನ್ನ ಸರಿಗೆಯಲಿ
ಸರಿದಿಟ್ಟು ತರತರದೈಸಿರಿರಾಗ ವರಸೆಯಲಿ
ಮರಮಠಳಿ ಶೃತಿನೋಡಿ ಹೊಂಗಳಲ ಪ್ರಾಣಗಳ
ಬೆರಳಲ್ಲಿ ನುಡಿಸುತ್ತ ಮನ ಮರೆಸಲೊ

ಹೊಸಪದವ ಹಳೆಪದವ ಹೊಸದಿಟ್ಟು ಹೊಸಪರಿಯ
ಹೊಸಧಾಟಿ ಹೊಸಭಾವ ಪೊಸೆವೊಂದು ಲಾವಣಿಯ
ನಸುನಗುತ ರಸವರಿದು ನೀ ಮೋದ ಪಡುವಂಥ
ಮಿಸುನಿಯಾ ಸ್ಪರ್ಶದಾ ಕೃತಿಯೊಂದು ಬೇಕೋ

ಚಳವಳಿಯ ಭಾವಕಿವೆ ಕಿಡಿ ಇಡುವ ಪದಗಳಿವು
ತಿಳವನ್ಹಿ ಬಿಳಿಜೋತಿಗಿದೆ ಭಕುತ ಮನಧವಿಸು
ಹೊಳೆಯಾಯ್ತು ಗುಪ್ತಾಗ್ನಿ ಉಕ್ಕುತಿದೆ ಜ್ವಾಲೆಯಿದು
ತಿಳಿಹು ಮನದಿಷ್ಟಾರ್ಥ ಪಾಡಲೇನ

ಗುಡ್ಡ ಕಾಡಿನ ರೂಪು ಅಡ್ಡವಿಸಿ ವರಣಿಸಲೊ
ಗುಡ್ಡದಿಂ ಧಡಧಡನೆ ಹಾರ್ವುದರ ಶೃತಿಗೆ?
ಹೆಡ್ಡರೆಲ್ಲರು ಕೂಡಿ ಧೂಳ ರೌರವದಲ್ಲಿ
ಅಡ್ಡಾಡಿ ಮೈಮರವ ಪರಿಯ ಬಣ್ಣಿಸಲೊ?

ನಗರಗಳು ಬೆಳೆದಳಿದು ಹನುಮ ಭೀಮರು ಎದ್ದು
ಜಗವ ತಲ್ಲಣಗೊಳಿಸೆ! ಕಂತಿ ಪಂಪರ ಕವಿತೆ!
ಚಿಗಿದು ಮೊಳಗಲು! ಇಳೆಯು ನಲಿದೊಲಿಯು ತಿರುವಾಗ!
ಜಗದಲ್ಲಿ ಬೆಳದಿಳಿದ ಕಥೆಗಳವು ಬೇಕೆ?

ಆದಿ ಕವಿಯಿಂದೀಚೆ ಪದಶಿಲ್ಪಿಗಳನೆಲ್ಲ
ಸೋದರರ! ಕೊಳಲ ಭಾಂಧವರನ್ನು ಮಾಯೆಯಲಿ
ಓದದರ ಮುಂದೆತ್ತಿ ಸುಳಿದಾಡಿಸುತಲಿನ್ನು
ಹೋದ ವೈಭವವನ್ನು ಕಾಣಿಸಲೊ ಕನಸಲ್ಲಿ?

ಇದ್ದಾಗ ಕರೆ ಎನದೆ ಕೂಡೆನದೆ ಕೊಳ್ಳೆನದೆ
ಹೊಯ್ದೆಸೆದ ಕಲ್ಲಲ್ಲಿ ಹೂತಿಟ್ಟ ಭಕ್ತನನು
ಮುದ್ದಿಟ್ಟು! ಕಡೆಕಡೆಗೆ ಪಾಡುವರು ರಗಳೆಗಳ!
ಸುಯ್ದೆದ್ದು ಮನವದನು ಕೇಳುತಿದೆ ಕೇಳೈ!

ಗೆಳೆಯರಾಗುಂಪಿನದು ಮಧುಯುಗದ! ಮುಧುಗಾನ
ಮೋಳಗುತಿದೆ ಮಹಿಷೂರ ಹೊಂಗಳಲ! ಸವಿಗಾನ
ಬಲು ರವದ ಹೆದ್ದುಂಬೆ! ಹೊಯ್ಸಳನ ಹೆಗ್ಗಾನ
ನಿಲದಿನ್ನು ಪೇಳೈ ಪಾಲಿಸಪ್ಪಣೆಯ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...