Home / ಕವನ / ಕವಿತೆ / ಏನು ಪಾಡಲಿ

ಏನು ಪಾಡಲಿ

ಏನ ಪಾಡಲಿ ನಿನ್ನ ಆಮೋದಕಿಂದು
ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ
ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ
ಘನವರಣ ಹನಿರಸದ ಬಲು ಸಿವುರಿನ
ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ
ಕಣಕಣನೆ ದನಿಗೊಡುವ ಗಜ ಗಬ್ಬುಬೇಕೆ

ಕಿರಿ ಪಿರಿಯ ನವನುಡಿಯ ಹೊಳೆ ಹೊನ್ನ ಸರಿಗೆಯಲಿ
ಸರಿದಿಟ್ಟು ತರತರದೈಸಿರಿರಾಗ ವರಸೆಯಲಿ
ಮರಮಠಳಿ ಶೃತಿನೋಡಿ ಹೊಂಗಳಲ ಪ್ರಾಣಗಳ
ಬೆರಳಲ್ಲಿ ನುಡಿಸುತ್ತ ಮನ ಮರೆಸಲೊ

ಹೊಸಪದವ ಹಳೆಪದವ ಹೊಸದಿಟ್ಟು ಹೊಸಪರಿಯ
ಹೊಸಧಾಟಿ ಹೊಸಭಾವ ಪೊಸೆವೊಂದು ಲಾವಣಿಯ
ನಸುನಗುತ ರಸವರಿದು ನೀ ಮೋದ ಪಡುವಂಥ
ಮಿಸುನಿಯಾ ಸ್ಪರ್ಶದಾ ಕೃತಿಯೊಂದು ಬೇಕೋ

ಚಳವಳಿಯ ಭಾವಕಿವೆ ಕಿಡಿ ಇಡುವ ಪದಗಳಿವು
ತಿಳವನ್ಹಿ ಬಿಳಿಜೋತಿಗಿದೆ ಭಕುತ ಮನಧವಿಸು
ಹೊಳೆಯಾಯ್ತು ಗುಪ್ತಾಗ್ನಿ ಉಕ್ಕುತಿದೆ ಜ್ವಾಲೆಯಿದು
ತಿಳಿಹು ಮನದಿಷ್ಟಾರ್ಥ ಪಾಡಲೇನ

ಗುಡ್ಡ ಕಾಡಿನ ರೂಪು ಅಡ್ಡವಿಸಿ ವರಣಿಸಲೊ
ಗುಡ್ಡದಿಂ ಧಡಧಡನೆ ಹಾರ್ವುದರ ಶೃತಿಗೆ?
ಹೆಡ್ಡರೆಲ್ಲರು ಕೂಡಿ ಧೂಳ ರೌರವದಲ್ಲಿ
ಅಡ್ಡಾಡಿ ಮೈಮರವ ಪರಿಯ ಬಣ್ಣಿಸಲೊ?

ನಗರಗಳು ಬೆಳೆದಳಿದು ಹನುಮ ಭೀಮರು ಎದ್ದು
ಜಗವ ತಲ್ಲಣಗೊಳಿಸೆ! ಕಂತಿ ಪಂಪರ ಕವಿತೆ!
ಚಿಗಿದು ಮೊಳಗಲು! ಇಳೆಯು ನಲಿದೊಲಿಯು ತಿರುವಾಗ!
ಜಗದಲ್ಲಿ ಬೆಳದಿಳಿದ ಕಥೆಗಳವು ಬೇಕೆ?

ಆದಿ ಕವಿಯಿಂದೀಚೆ ಪದಶಿಲ್ಪಿಗಳನೆಲ್ಲ
ಸೋದರರ! ಕೊಳಲ ಭಾಂಧವರನ್ನು ಮಾಯೆಯಲಿ
ಓದದರ ಮುಂದೆತ್ತಿ ಸುಳಿದಾಡಿಸುತಲಿನ್ನು
ಹೋದ ವೈಭವವನ್ನು ಕಾಣಿಸಲೊ ಕನಸಲ್ಲಿ?

ಇದ್ದಾಗ ಕರೆ ಎನದೆ ಕೂಡೆನದೆ ಕೊಳ್ಳೆನದೆ
ಹೊಯ್ದೆಸೆದ ಕಲ್ಲಲ್ಲಿ ಹೂತಿಟ್ಟ ಭಕ್ತನನು
ಮುದ್ದಿಟ್ಟು! ಕಡೆಕಡೆಗೆ ಪಾಡುವರು ರಗಳೆಗಳ!
ಸುಯ್ದೆದ್ದು ಮನವದನು ಕೇಳುತಿದೆ ಕೇಳೈ!

ಗೆಳೆಯರಾಗುಂಪಿನದು ಮಧುಯುಗದ! ಮುಧುಗಾನ
ಮೋಳಗುತಿದೆ ಮಹಿಷೂರ ಹೊಂಗಳಲ! ಸವಿಗಾನ
ಬಲು ರವದ ಹೆದ್ದುಂಬೆ! ಹೊಯ್ಸಳನ ಹೆಗ್ಗಾನ
ನಿಲದಿನ್ನು ಪೇಳೈ ಪಾಲಿಸಪ್ಪಣೆಯ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...