Home / ಲೇಖನ / ವಿಜ್ಞಾನ / ಜೇನು: ಆಹಾರ-ಔಷಧಿ

ಜೇನು: ಆಹಾರ-ಔಷಧಿ

“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿಂದ ಹಳದಿ ಮತ್ತು ಕಡು ಹಳದಿ ಬಣ್ಣಗಳವರೆಗೆ ಜೇನಿನಲ್ಲಿ ವರ್‍ಣವೈವಿಧ್ಯವುಂಟು. ಜೇನು ಆಹಾರವೂ ಹೌದು, ಔಷಧವೂ ಹೌದು.

ಜೇನು ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ಆಯುರ್‍ವೇದ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜೇನು ಹಾಲಿಗಿಂತಲೂ ಆರು ಪಟ್ಟು ಪೌಷ್ಟಿಕತೆ ಹೊಂದಿದೆ. ಬಿಳಿ ಬಣ್ಣದ ಜೇನು ತುಪ್ಪಕ್ಕಿಂದ ಕಂದು ಬಣ್ಣದ ಜೇನಿನಲ್ಲಿ ಪೌಷ್ಟಿಕ ಪ್ರಮಾಣ ಹೆಚ್ಚಾಗಿರುತ್ತದೆ. ಶಕ್ತಿಯನ್ನು ಒದಗಿಸುವಲ್ಲಿ ಜೇನಿಗೇ ಮೊದಲನೆ ಸ್ಥಾನ. ೧೦ ಟೇಬಲ್ ಚಮಚ (೨೦೦ ಗ್ರಾಂ)ದಷ್ಟು ಜೇನು, ೩೩೦ ಗ್ರಾಂ ಮಾಂಸ ಅಥವಾ ೧೦ ಕೋಳಿಮೊಟ್ಟೆ ಅಥವಾ ೮ ಕಿತ್ತಳೆಹಣ್ಣು ಅಥವಾ ೧ ಲೀಟರ್‍ ಹಾಲು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆಯೆಂದಾಗ ಅದರ ಶಕ್ತಿಯ ಅರಿವಾಗದಿರದು. ಸುಮಾರು ೨೧ ಗ್ರಾಂ ಜೇನುತುಪ್ಪ ಸುಮಾರು ೬೭ ಕ್ಯಾಲೋರಿಗಳಷ್ಟು ಶಕ್ತಿಯನ್ನು ಒದಗಿಸಬಲ್ಲದು.

ಮುಖ್ಯವಾಗಿ ಜೇನಿನಲ್ಲಿ ಲೆವ್ಯೂಲೋಸ್ ಮತ್ತು ಡೆಕ್ಸ್‌ಟ್ರೋಸ್ ಎಂಬ ಸಕ್ಕರೆಗಳು ಇರುತ್ತವಾದರೂ, ಅದರಲ್ಲಿ ದೇಹಾರೋಗ್ಯಕ್ಕೆ ಅಗತ್ಯವಿರುವ ಹೆಚ್ಚು ಕಡಿಮೆ ಎಲ್ಲಾ ಖನಿಜ-ಲವಣಾಂಶಗಳು ಮತ್ತು ವಿಟಾಮಿನ್‌ಗಳು ಸಾಕಷ್ಟಿವೆ. ಜೇನುತುಪ್ಪದಲ್ಲಿರುವ ಕಬ್ಬಿಣ ಮತ್ತು ತಾಮ್ರದ ಅಂಶಗಳು ನೇರವಾಗಿ ಸಂಪೂರ್‍ಣವಾಗಿ ದೇಹದಲ್ಲಿ ಅರಗಿಕೊಂಡು ಬರುತ್ತವೆ. ಇದರ ಜೊತೆಗೆ ಇತರ ಪದಾರ್‍ಥಗಳು ಕೂಡ ಇದರ ಸಾನಿಧ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕರಗಿ ಹೆಚ್ಚು ಗುಣಗಳನ್ನು ಶೀಘ್ರವಾಗಿ ಕೊಡುತ್ತವೆ.

ಜೇನಿನಲ್ಲಿ ಬಹು ಸರಳ ರೂಪದ ಸಕ್ಕರೆಯಿರುವುದೇ ಅದರ ಹಿರಿಮೆಗೆ ಕಾರಣ. ಸುಲಭವಾಗಿ ಜೀರ್‍ಣವಾಗುವ ಶಕ್ತಿದಾಯಕವಾದ ಸರಳ ಸಕ್ಕರೆಯಿಂದಾಗಿ ಅಸ್ವಸ್ಥತೆಯಲ್ಲಾಗಲೀ, ಆರೋಗ್ಯದಲ್ಲಾಗಲೀ ಜೇನನ್ನು ನಿರಾತಂಕವಾಗಿ ಎಲ್ಲರೂ ಸೇವಿಸಬಹುದು.

ರೋಗ ನಿವಾರಕ

ಜೇನುತುಪ್ಪ ಪ್ರಬಲ ರೋಗ ನಿರೋಧಕ. ಕೆಂಪು ರಕ್ತಕಣಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದು ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ತಡೆಯಾಗಿಯೂ ಕೆಲಸ ಮಾಡುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿಯೂ, ಕಣ್ಣಿನ ವ್ರಣ, ನಾಲಿಗೆ ವ್ರಣ, ಗಂಟಲು ಹುಣ್ಣು ಮತ್ತು ಸುಟ್ಟ ಗಾಯಗಳಿಗೆ ಬಹಳಷ್ಟು ಗುಣಕಾರಿಯಾಗಿದೆ.

ಮುಖದ ಮೇಲೆ ಮೊಡವೆಗಳುಳ್ಳವರು ಸ್ವಲ್ಪ ನಿಂಬೆರಸದೊಡನೆ ಜೇನನ್ನು ಬೆರಸಿ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುವುದಲ್ಲದೆ ಚರ್‍ಮವೂ ಶುದ್ಧಿಯಾಗುತ್ತದೆ.

ದುಡಿತದಿಂದ ತುಂಬಾ ಬಳಲಿದವರು ಒಂದುವರೆ ಟೇಬಲ್ ಚಮಚ ಜೇನನ್ನು, ಚಳಿಗಾಲದಲ್ಲಾದರೆ ೧ ಗ್ಲಾಸ್ ಬಿಸಿ ನೀರಿನಲ್ಲಿ, ಬೇಸಿಗೆಯಲ್ಲಾದರೆ ತಣ್ಣಿರಿನಲ್ಲಿ ಸೇವಿಸಿದರೆ ತನ್ನ ಕಳೆದುಹೋದ ಶಕ್ತಿಯನ್ನು ಪುನಃ ಪಡೆಯುತ್ತಾರೆ.

ಕಂದುಬಣ್ಣದ ಜೇನುತುಪ್ಪದಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯಿಂದ ಅನಿಮಿಯಾ ರೋಗವು ಕ್ರಮೇಣ ಗುಣ ಹೊಂದುತ್ತದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...