Home / ಲೇಖನ / ವಿಜ್ಞಾನ / ಜೇನು: ಆಹಾರ-ಔಷಧಿ

ಜೇನು: ಆಹಾರ-ಔಷಧಿ

“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿಂದ ಹಳದಿ ಮತ್ತು ಕಡು ಹಳದಿ ಬಣ್ಣಗಳವರೆಗೆ ಜೇನಿನಲ್ಲಿ ವರ್‍ಣವೈವಿಧ್ಯವುಂಟು. ಜೇನು ಆಹಾರವೂ ಹೌದು, ಔಷಧವೂ ಹೌದು.

ಜೇನು ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ಆಯುರ್‍ವೇದ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜೇನು ಹಾಲಿಗಿಂತಲೂ ಆರು ಪಟ್ಟು ಪೌಷ್ಟಿಕತೆ ಹೊಂದಿದೆ. ಬಿಳಿ ಬಣ್ಣದ ಜೇನು ತುಪ್ಪಕ್ಕಿಂದ ಕಂದು ಬಣ್ಣದ ಜೇನಿನಲ್ಲಿ ಪೌಷ್ಟಿಕ ಪ್ರಮಾಣ ಹೆಚ್ಚಾಗಿರುತ್ತದೆ. ಶಕ್ತಿಯನ್ನು ಒದಗಿಸುವಲ್ಲಿ ಜೇನಿಗೇ ಮೊದಲನೆ ಸ್ಥಾನ. ೧೦ ಟೇಬಲ್ ಚಮಚ (೨೦೦ ಗ್ರಾಂ)ದಷ್ಟು ಜೇನು, ೩೩೦ ಗ್ರಾಂ ಮಾಂಸ ಅಥವಾ ೧೦ ಕೋಳಿಮೊಟ್ಟೆ ಅಥವಾ ೮ ಕಿತ್ತಳೆಹಣ್ಣು ಅಥವಾ ೧ ಲೀಟರ್‍ ಹಾಲು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆಯೆಂದಾಗ ಅದರ ಶಕ್ತಿಯ ಅರಿವಾಗದಿರದು. ಸುಮಾರು ೨೧ ಗ್ರಾಂ ಜೇನುತುಪ್ಪ ಸುಮಾರು ೬೭ ಕ್ಯಾಲೋರಿಗಳಷ್ಟು ಶಕ್ತಿಯನ್ನು ಒದಗಿಸಬಲ್ಲದು.

ಮುಖ್ಯವಾಗಿ ಜೇನಿನಲ್ಲಿ ಲೆವ್ಯೂಲೋಸ್ ಮತ್ತು ಡೆಕ್ಸ್‌ಟ್ರೋಸ್ ಎಂಬ ಸಕ್ಕರೆಗಳು ಇರುತ್ತವಾದರೂ, ಅದರಲ್ಲಿ ದೇಹಾರೋಗ್ಯಕ್ಕೆ ಅಗತ್ಯವಿರುವ ಹೆಚ್ಚು ಕಡಿಮೆ ಎಲ್ಲಾ ಖನಿಜ-ಲವಣಾಂಶಗಳು ಮತ್ತು ವಿಟಾಮಿನ್‌ಗಳು ಸಾಕಷ್ಟಿವೆ. ಜೇನುತುಪ್ಪದಲ್ಲಿರುವ ಕಬ್ಬಿಣ ಮತ್ತು ತಾಮ್ರದ ಅಂಶಗಳು ನೇರವಾಗಿ ಸಂಪೂರ್‍ಣವಾಗಿ ದೇಹದಲ್ಲಿ ಅರಗಿಕೊಂಡು ಬರುತ್ತವೆ. ಇದರ ಜೊತೆಗೆ ಇತರ ಪದಾರ್‍ಥಗಳು ಕೂಡ ಇದರ ಸಾನಿಧ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕರಗಿ ಹೆಚ್ಚು ಗುಣಗಳನ್ನು ಶೀಘ್ರವಾಗಿ ಕೊಡುತ್ತವೆ.

ಜೇನಿನಲ್ಲಿ ಬಹು ಸರಳ ರೂಪದ ಸಕ್ಕರೆಯಿರುವುದೇ ಅದರ ಹಿರಿಮೆಗೆ ಕಾರಣ. ಸುಲಭವಾಗಿ ಜೀರ್‍ಣವಾಗುವ ಶಕ್ತಿದಾಯಕವಾದ ಸರಳ ಸಕ್ಕರೆಯಿಂದಾಗಿ ಅಸ್ವಸ್ಥತೆಯಲ್ಲಾಗಲೀ, ಆರೋಗ್ಯದಲ್ಲಾಗಲೀ ಜೇನನ್ನು ನಿರಾತಂಕವಾಗಿ ಎಲ್ಲರೂ ಸೇವಿಸಬಹುದು.

ರೋಗ ನಿವಾರಕ

ಜೇನುತುಪ್ಪ ಪ್ರಬಲ ರೋಗ ನಿರೋಧಕ. ಕೆಂಪು ರಕ್ತಕಣಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದು ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ತಡೆಯಾಗಿಯೂ ಕೆಲಸ ಮಾಡುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿಯೂ, ಕಣ್ಣಿನ ವ್ರಣ, ನಾಲಿಗೆ ವ್ರಣ, ಗಂಟಲು ಹುಣ್ಣು ಮತ್ತು ಸುಟ್ಟ ಗಾಯಗಳಿಗೆ ಬಹಳಷ್ಟು ಗುಣಕಾರಿಯಾಗಿದೆ.

ಮುಖದ ಮೇಲೆ ಮೊಡವೆಗಳುಳ್ಳವರು ಸ್ವಲ್ಪ ನಿಂಬೆರಸದೊಡನೆ ಜೇನನ್ನು ಬೆರಸಿ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುವುದಲ್ಲದೆ ಚರ್‍ಮವೂ ಶುದ್ಧಿಯಾಗುತ್ತದೆ.

ದುಡಿತದಿಂದ ತುಂಬಾ ಬಳಲಿದವರು ಒಂದುವರೆ ಟೇಬಲ್ ಚಮಚ ಜೇನನ್ನು, ಚಳಿಗಾಲದಲ್ಲಾದರೆ ೧ ಗ್ಲಾಸ್ ಬಿಸಿ ನೀರಿನಲ್ಲಿ, ಬೇಸಿಗೆಯಲ್ಲಾದರೆ ತಣ್ಣಿರಿನಲ್ಲಿ ಸೇವಿಸಿದರೆ ತನ್ನ ಕಳೆದುಹೋದ ಶಕ್ತಿಯನ್ನು ಪುನಃ ಪಡೆಯುತ್ತಾರೆ.

ಕಂದುಬಣ್ಣದ ಜೇನುತುಪ್ಪದಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯಿಂದ ಅನಿಮಿಯಾ ರೋಗವು ಕ್ರಮೇಣ ಗುಣ ಹೊಂದುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...