Home / ಲೇಖನ / ಇತರೆ / ಮತಾಂತರ – ಒಂದು ಪ್ರತಿಕ್ರಿಯೆ

ಮತಾಂತರ – ಒಂದು ಪ್ರತಿಕ್ರಿಯೆ

ನೋಡಿ, ಮತಾಂತರ ಅನ್ನೋದು- ಆದು ವೈಯಕ್ತಿಕವೋ, ಸಾಮೂಹಿಕವೋ- ಆರೋಗಯಕರ ಅಲ್ಲ. ಮತಾನೇ ತೊಲಗಬೇಕು ಅನ್ನೋ ಈ ವೈಜ್ಞಾನಿಕ ಯುಗದಲ್ಲಿ ನನಗೆ ಇದೊಂದು ಹಾಸ್ಯ.

ಹರಿಜನರು ಮುಸ್ಲಿಮರಾದರೆ ಆರ್. ಎಸ್. ಎಸ್, ಪೇಜಾವರ ಸ್ವಾಮಿಗೆ, ವಿಶ್ವ ಹಿಂದೂ ಪರಿಷತ್ತಿನವರಿಗೆ ತಮ್ಮ ಅಸ್ತಿತ್ವಾನೆ ಹೋದಂಗಾಗ್ತದೆ. ಏಕೆ? ನಿತ್ಯ ಜೀವನದಲ್ಲಿ ಹರಿಜನರ ಸ್ಥಾನಮಾನದ ಬಗ್ಗೆ ತಿರಸ್ಕಾರ ಹೊಂದಿರೊ ಇವರಿಗೆ ಮತಾಂತರದಿಂದ ತಮ್ಮ ಕುಳಿತು ತಿನ್ನುವ ಸ್ಥಿತಿಗೆ ಎಲ್ಲಿ ಧಕ್ಕೆ ಬರುತ್ತೋ ಎನ್ನುವ ಭಯ. ಆದ್ದರಿಂದ ಮೊಗವಾಡ ಹಾಕಿಕೊಂಡು ಭಾರತೀಯ ಸಂಸೃತಿ, ಭಾರತರಾಷ್ಟ್ರ, ಹಿಂದೂರಾಷ್ಟ್ರ ಅಂತ ಏನೋ ಕಂಡು ಬೊಳ್ಳು ಹಾಕೋ ನಾಯಿ ಹಂಗೆ ಬೊಳ್ಳು ಹಾಕ್ತಾರೆ.

ಮತಾಂತರ ಆದಾಗ ಹರಿಜನರು ತಮ್ಮ ಸ್ವಜನ ಬಂಧುಗಳೆ ಎನ್ನುವ ಹುನ್ನಾರದ ನಾಟಕ ಹೂಡೋ ಈ ಜನ ಇಡೀ ಸಮಾಜಕ್ಕಷ್ಟೆ ಅಲ್ಲ, ತಮಗೂ ಮೋಸಮಾಡಿಕೊಂಡು ದಿವಾಳಿಯಾಗ್ತಾರೆ. ದೇಶನ ಹರಾಜು ಹಾಕ್ತಾರೆ. ಕಾಲಕ್ಕೆ ತಕ್ಕ ಹಾಗೆ ಬಣ್ಣ ಬದಲಾಯಿಸೋ ಈ ಗೋಸುಂಬೆತನ ಇದೆಯಲ್ಲ ಅದು ಹೇಸಿಗೆ. ಅದಕ್ಕೂ ಹೆಚ್ಚಿನ ಹೇಸಿಗೆ ಅಂದ್ರೆ ಮತಾಂತರವ ಬಗ್ಗೆ ಮೌನವಾಗಿರೋ ಮುಸ್ಲಿಮರು, ಹಾಗೇ ಕ್ರಮೇಣ ಕೊಲ್ಲುವ ಕ್ರಿಶ್ಚಿಯನ್ನರು.

ಮತಾಂತರದ ಪರಿಣಾಮ ಏನು ಗೊತ್ತೆ? ಶೂದ್ರ ಜನಾಂಗ ಬಹು ಸಂಖ್ಯಾತರಾದ್ರು ಶಕ್ತರಾಗ್ದೆ ಬರಿಗೈಯಾಗೇ ಇರ್ತಾರೆ. ಅಲ್ಪಸಂಖ್ಯಾತರಾಗಿರೋ ಮುಸ್ಲಿಮರು ಆಳೋ ಅವಕಾಶ ಬಂದ್ರೆ ಆಗ ಈ ದೇಶದ ಸಂಸ್ಕೃತಿಯ ನೇತಾರರು ಎಂದು ಬೊಗಳೆ ಹೊಡಿಯೊ ಈ ಹಾರುವರು ಅವ್ರನ್ನೆ ಆಲಂಗಿಸಿಕೊಂಡು ಬಸಿರಾಗ್ತಾರೆ. ಇತಿಹಾಸ ಸರಿಯಾಗಿ ಓದ್ಕೊಂಡೋರಿಗೆ ಗೊತ್ತಾಗುತ್ತೆ, ಶೂದ್ರಮುಂಡೇವು ಆಗಲೂ ಅವರ ಕಾಲಡಿಗೆ ಬಿದ್ದು ಮತ್ತೆ ತುಳಿಸ್ಕೋತಾರೆ.

ಈ ಪುರೋಹಿತಶಾಹಿ – ಅದು ಯಾವ ಮತದ್ದೇ ಆಗಿರಲಿ – ಹಾಗೂ ಬ್ರಾಹ್ಮಣ್ಯಕ್ಕೆ ಮೂಗುದಾರ ಹಾಕಬೇಕಾದರೆ ಮತಾಂತರ ಮಾಡಿದ್ರೆ ಆಗೊಲ್ಲ. ಮೆದುಳಿನಲ್ಡಿ ಬುದ್ಧಿ ಬೆಳೆಸ್ಕೋಬೇಕು; ಎದೆಗಟ್ಟಿ ಮಾಡ್ಕೋಬೇಕು. ರಟ್ಟೆಗಟ್ಟಿ ಜೊತೆ ಬುದ್ಧಿ ಬಲಗೊಂಡರೆ ಮಾತ್ರ ಇಲ್ಲಿ ಮನುಷ್ಯರು ಮನುಷ್ಯರಾಗಿ ಬದುಕೋ ಹಾಗೆ ಮಾಡೋಕೆ ಸಾಧ್ಯ ಆಗ್ತದೆ.

ಮನುಷ್ಯ ಮನುಷ್ಯರಲ್ಲಿ ಜೀವ ಜೀವದ ಭೇದ ಹುಟ್ಟಿ ಹಾಕೋ ಈ ಮತಾನ ಒಮ್ಮೆಲೇ ಓಡಿಸಬೇಕು. ನೋಡಿ ಈ ಜಗತ್ತಿಗೆ ಬಂದ ಜೀವ ತನಗೆ ತಾನೆ ಬೆಳೆದು ಗಟ್ಟಿಯಾಗ್ದೆ ಹೋದ್ರೆ ಅದನ್ನ ಮತ ಮೌಢ್ಯ ಮೆಟ್ಟಿನಿಲ್ತಾವೆ. ಶಕ್ತಿ ಇಲ್ದಿದ್ರೆ ಕಾನೂನು ಕಾಪಾಡೊಲ್ಲ. ಸಾಮಾಜಿಕವಾಗಿ ಮನುಷ್ಯ ಎದುರಿಸುತ್ತಿರುವ ಸಮಸ್ಯೆಗೆ ಮತಾಂತರ ಎಂದೂ ಮದ್ದಾಗಲ್ಲ. ಅದು ತತ್ಕಾಲದ ಬೆದರಿಕೆ ಆಗಬಹುದು. ಮತಾಂತರ ಅನ್ನೋದು, ಹೇಸಿಗೆ ಅಂತ ಒಂದರಿಂದ ಬಿಡಿಸಿಕೊಂಡು ಮತ್ತೊಂದು ಹೇಸಿಗೆಯನ್ನ ಆಲಂಗಿಸಿಕೊಳ್ಳುವುದಷ್ಟೆ. ಅಲ್ಲಿ ಬುದ್ಧಿ ಬೆಳವಣಿಗೆಯ, ವ್ಯಕ್ತಿಯ ಗಟ್ಟಿತನ ವ್ಯಕ್ತವಾಗಲ್ಲ. ಆದ್ದರಿಂದ ಇರುವ ಸ್ಥಿತಿಗೆ ಮೂಲ ಕಂಡುಕೊಂಡು ಅದನ್ನು ತೊಡೆದು ಹಾಕುವ ಮನಸ್ಸಿನ ಬೆಳವಣಿಗೆಯಲ್ಲಿ ನಿಜವಾದ ಪರಿಹಾರ ಕಾಣಬಹುದು. ಸ್ವಶಕ್ತಿ, ಸ್ವಸಾಮರ್ಥ್ಯ ಇರದ ಜನರನ್ನ ಎಲ್ಲಿ ಹೋದರೂ ಗುಲಾಮರನ್ನಾಗಿಯೆ ಉಳಿಸಿಕೊಳ್ಳುವುದು ದುಷ್ಟ ವ್ಯವಸ್ಥೆಯ ಅಂತರಂಗ. ಆದ್ದರಿಂದ ಮತಾಂತರ ಸಮಸ್ಯೆಯ ಪರಿಹಾರವಾಗುವುದಿಲ್ಲ.

*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...