Home / ಕವನ / ಕವಿತೆ / ಸಾಕರಿ ಕಟ್ಟು ಮತ್ತು ಹೆಂಗಸು

ಸಾಕರಿ ಕಟ್ಟು ಮತ್ತು ಹೆಂಗಸು

ಮಬ್ಬಗತ್ತಲೆವರೆಗೂ ತದ್ವತ್
ಕೆಲಸ
ಸಾಕರಿ ಕೋಲಿಗೂ
ಸಾಕರಿ ಹುಲ್ಲಿಗೂ ಹಗೆ
ತೀರಿಸುವ ಅವಳ ಕೈ ಕುಣಿತ

ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ
ಸಾಕರಿ ಕಟ್ಟಿನ ಲೆಕ್ಕ
ಇಡುತ್ತಾಳೆ
ಒಡೆಯ ಕೊಡುವ ಕೂಲಿಗಾಗಿ

ಬೊಕ್ಕೆಯೆದ್ದ ಕೈಗಳು
ಬಿರುಸಾಗುತ್ತಿವೆ ಕಟ್ಟು ಬಡಿದು
ಕ್ರಮೇಣ

ಆಗಾಗ ಒಡತಿಯಿಂದ ಎಣ್ಣೆ ಬೇಡಿ ಪಡೆವ ಆಕೆ
ತಿಕ್ಕಿಕೊಳ್ಳುತ್ತಾಳೆ ಕೈಗಳಿಗೆ
“ಹಾಯ್” ಎನ್ನುವಂತೆ
“ನನಗೆ ನಾನೇ, ಗೋಡೆಗೆ ಮಣ್ಣೆ”
ಉಸುರುತ್ತಾಳೆ ಆಗಾಗ

ಕೇಯ್ಯಿಂದ ಬೇರ್ಪಟ್ಟ ಭತ್ತಕ್ಕೆ
ಕಣಜಕ್ಕೆ ಹಾರುವ ಆಸೆ
ಜೊಳ್ಳು ಸೇರದಂತೆ ಹೊಟ್ಟು
ಹಾರಿಸುವಾಕೆಯ ಮಂತ್ರ ಮುಗ್ದ ಶೈಲಿ
ಒರೆ ಸೊಂಟದ ಹೆಣ್ಣ
ಕೈಬಳೆಯ ಲಯಬದ್ಧ ಉಲಿತ
ಗಾನ ಲೋಕದ ಪರ್ಯಾಯ
ಮತ್ತೀಗ ಕಳವನ್ನೆಲ್ಲಾ ಗುಡಿಸಿ
ಇಡುತ್ತಾಳೆ ಅರೆಬೆರೆ ಜೊಳ್ಳು
ಬೆರೆತ ಭತ್ತವನ್ನೆಲ್ಲಾ ಒಟ್ಟು
ಮಾಡಿ ಸೇರಿಸುತ್ತಾಳೆ ಕೈ ಚೀಲಕ್ಕೆ
ನಡಿಗೆ ಮನೆ ಕಡೆಗೆ

ದಣಪೆಯಲ್ಲಿ ದಡಿಯ
ಯರ್‍ರಾಬಿರ್‍ರಿ ಕುಡಿದು
ತಡಕ್ಕಾಡುತ್ತಿದ್ದಾನೆ ಮನೆ ಬಾಗಿಲು

ಭಾಗ್ಯ ಜ್ಯೋತಿಯ ಬೆಳಕಿನಲ್ಲಿ
ತಂದ ಭತ್ತವ ಕುಟ್ಟಿ
ಅನ್ನಕ್ಕಿಟ್ಟಿದ್ದಾಳೆ ಆಕೆ
ಇರುಳುಗತ್ತಲೆಯಲ್ಲಿ ಸಂಚಿಯ
ಕವಳ ತೆಗೆದು ಬಾಯಿಗಿಡುತ್ತಾಳೆ
ಪುರಸೊತ್ತು ಮಾಡಿ

ಅನ್ನದ ನಿಗಿ ನಿಗಿ ಬೆಂಕಿಯ
ಪಕ್ಕ ಬೆಚ್ಚಗೆ ಕುಳಿತು ಮಗ್ಗಿ
ಓದುತ್ತಿವೆ ಪುಟಾಣಿಗಳೆರಡು


Tagged:

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...