Home / ಲೇಖನ / ಇತರೆ / ಪುಸ್ತಕ ಪ್ರೀತಿ

ಪುಸ್ತಕ ಪ್ರೀತಿ

ಚಿತ್ರ: ಅಲೆಕ್ಸಾಂಡರ್‍ ಸ್ಟಾಕ್ಮಾರ್‍

ಪ್ರಿಯ ಸಖಿ,

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದು. ನಿಜವೇ ಆದರೆ ಚಿಂತನಶೀಲತೆ ಬೆಳೆಯುವುದು ಪುಸ್ತಕಗಳ ಸಂಪರ್ಕದಿಂದ. ಆದ್ದರಿಂದ ಪುಸ್ತಕಗಳ ಪ್ರಯೋಜನವು ಅಂತರಂಗ ಚೈತನ್ಯದ ಸಾಧನೆಗೆ ಮೊದಲ ಮೆಟ್ಟಿಲು ಎನ್ನಬಹುದು.

ಪುಸ್ತಕಗಳು ಹಲವಾರು ಮಹಾತ್ಮರ ಜೀವನವನ್ನು ರೂಪಿಸಿವೆ. ಹಲವರ ಬದುಕಿನಲ್ಲಿ ಪ್ರಭಾವ ಬೀರಿವೆ. ಕ್ರಾಂತಿಯುಂಟು ಮಾಡಿವೆ. ಬದಲಾವಣೆ ತಂದಿವೆ. ಹೊಸ ವಿಚಾರಗಳನ್ನು ಮೊಳೆಸಿವೆ, ಬೆಳೆಸಿವೆ. ಉತ್ತಮ ಪುಸ್ತಕವನ್ನು ಓದುವವರು ಇರುವವರೆಗೂ
ಈ ಪ್ರಕ್ರಿಯೆಗಳು ಸಾಗುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುತ್ತಿರುವವರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ಬದಲಾದ ನಮ್ಮ ಜೀವನ ಶೈಲಿಯಿಂದ ಅವಸರದ ಈ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗೇ ದೃಶ್ಯ ಮಾಧ್ಯಮಗಳ ಹಾವಳಿಯೂ ಈ ಹವ್ಯಾಸಕ್ಕೆ ನೇರ ಪೆಟ್ಟು ಕೊಟ್ಟಿದೆ. ಹಣವನ್ನು ಮಾಡುವುದೇ ಜೀವನದ ಪ್ರಮುಖ ಗುರಿಯೆಂಬ ಭೂತ ಮಿದುಳನ್ನು ಹೊಕ್ಕಂದಿನಿಂದ ಯಾವ ಹವ್ಯಾಸಗಳಿಗೂ ಈಗ ಜನರಿಗೆ ಬಿಡುವಿಲ್ಲ. ಫ್ಯಾಷನ್, ಐಷಾರಾಮದ ಬದುಕು, ಪಂಚತಾರಾ ಸಂಸ್ಕೃತಿಯೆಡೆಗೆ ಹೆಚ್ಚು ವಾಲುತ್ತಿರುವ ನಮಗೆ ಓದುವುದು, ಗಂಭೀರವಾಗಿ ಯೋಚಿಸುವುದು, ಚಿಂತಿಸುವುದು, ಓದಿದ್ದನ್ನು ಮನನ ಮಾಡುವುದು ಎಲ್ಲವೂ ಬೋರ್ ಎನ್ನಿಸುತ್ತದೆ.

ಪ್ರಿಯ ಸಖಿ, ಆದರೆ ಬೇರೆ ಯಾವ ಮಾಧ್ಯಮವೂ ನೀಡಲಾಗದಂತಹ ಸಂತೋಷವನ್ನು, ಆತ್ಮ ತೃಪ್ತಿಯನ್ನು ಪುಸ್ತಕದ ಓದು ನೀಡುತ್ತದೆ. ಉತ್ತಮ ಪುಸ್ತಕದ ಓದಿನಿಂದ ಮನಸ್ಸು ಅರಳುತ್ತದೆ. ಇದೇ ಓದಿನಿಂದ ನಮಗೆ ದೊರೆಯುವ ಪ್ರತಿಫಲ. ಹಾಗೇ ಎಲ್ಲ ಮಾಧ್ಯಮಗಳಿಗೂ ಮೂಲ ಪುಸ್ತಕಗಳೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅಧ್ಯಾತ್ಮ, ಧಾರ್ಮಿಕ, ತಾತ್ವಿಕ, ಸಾಮಾಜಿಕ, ನೈತಿಕ, ಕೌಟುಂಬಿಕ,
ರಾಜಕೀಯ ಹೀಗೆ ಯಾವುದೇ ವಿಭಾಗದ ಪುಸ್ತಕವಿರಲಿ ಆ ಅಭಿರುಚಿಯಿರುವ ಓದುಗನಿಗೆ ನೆಮ್ಮದಿಯನ್ನು ನೀಡುತ್ತದೆ. ಹೊಸ ಬೆಳಕನ್ನು ಮೂಡಿಸುತ್ತದೆ.

ಸಖಿ, ಪುಸ್ತಕಕ್ಕೆ ಒಂದು ಜನಾಂಗದ ಕಣ್ಣು ತೆರೆಸುವ ಶಕ್ತಿಯಿದೆ. ಆದ್ದರಿಂದಲೇ ನಮ್ಮಲ್ಲಿ ಪುಸ್ತಕ ಪ್ರೀತಿ ಎಷ್ಟು ಬೇಗ ಮೊಳೆಯುತ್ತದೋ ಅಷ್ಟೂ ಒಳ್ಳೆಯದು. ಆ ಪ್ರೀತಿಯಿಂದ ನಾವು ಹೆಚ್ಚು ಹೆಚ್ಚು ಓದುವಂತಾಗಲಿ, ತಿಳಿಯುವಂತಾಗಲಿ, ಆರಳುವಂತಾಗಲಿ, ನೆಮ್ಮದಿ ಕಾಣುವಂತಾಗಲಿ.


Tagged:

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....