Home / ಕವನ / ಕವಿತೆ / ಮಳೆ ಎಂದರೆ ಪ್ರೀತಿ ನನಗೆ

ಮಳೆ ಎಂದರೆ ಪ್ರೀತಿ ನನಗೆ

ಮೋಡ ಬಸಿರಿನೊಳಗೆ
ಹೂತಿಟ್ಟ ಬಯಕೆಗಳು ಒಂದೊಂದಾಗಿ
ಸುಡುತ್ತ ಬೂದಿಯಾಗುವಾಗ
ಫಳಾರನೆ ಹೊಡೆಯುವ
ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು
ಹನಿ ಹನಿಗುಡುತ್ತ
ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ
ಹಕ್ಕೆ ಗಟ್ಟಿದ ಮನಸನ್ನು
ಮಳೆ ಎಂದರೆ ಪ್ರೀತಿ ನನಗೆ –

ಸತ್ತ ಹಿರಿಯರು ಕಿತ್ತುಕೊಂಡು ಹೋದ
ಉಸಿರು ಕಣ್ಣೀರು
ಈಗ ಬಿಸಿಧಗೆಯಾಗಿ
ಎಲ್ಲವೂ ಒಂದೊಂದಾಗಿ
ಹನಿ ಹನಿಯಾಗಿ ಒಪ್ಪಿಸುತ್ತಿದ್ದಾರೆ
ಅವರೂ ನಮ್ಮನ್ನು ಕಳೆದುಕೊಂಡಂತೆ
ಮಳೆ ಎಂದರೆ ಪ್ರೀತಿ ನನಗೆ –

ಸುಡುವ ಹೀರುವ ಹಿಂಡುವ
ಎಲ್ಲರ ರಕ್ತದ ಮೇಲೆ
ಕಣ್ಣಿಡುವ ಸೂರ್ಯನ ಸಾಮ್ರಾಜ್ಯಕ್ಕೆ
ಆಗಾಗ ಬುರ್ಕಾ ಹಾಕುತ್ತ ಕಣ್ಣುಮುಚ್ಚಾಲೆ
ಆಡಿಸುತ್ತ ಕುತೂಹಲಿಸುವ
ಮಳೆ ಎಂದರೆ ಪ್ರೀತಿ ನನಗೆ

ಕಲ್ಲು ಬಂಡೆಗಳಲಿ
ಕಾಂಕ್ರೀಟು ಬಿರುಕುಗಳಲಿ
ಗುಡಿ ಗುಂಡಾರಗಳ ಮೇಲೆಲ್ಲ
ಚಿಗಿರೊಡೆದು ಹುಲ್ಲಾಗಿಸುವ
ಎಲ್ಲೆಲ್ಲೂ ‘ಹಸಿರು’ ಬಸುರಿಯರ
ಗುಂಪಾಗಿಸುವ. ‘ಹೂ’ ಮಕ್ಕಳ ಚಲ್ಲಾಡಿಸುವ
ಓಟದ ಸರದಾರನಾಗುವ
ಮಳೆ ಎಂದರೆ ಪ್ರೀತಿ ನನಗೆ –

ಅರಳುವ ಹೂಗಳಲಿ ಇನ್ನೂ ಹರೆತುಂಬಿ
ವಯಸ್ಕರ  B.P. ಇಳಿಸಿ
ರಾಡಿ ಮಡಗಳು ಕಿಚಿಪಿಚಿಸಲು
ಗಿಡ ಮರ ಮನೆ ಮಠಗಳ ಧೂಳ ತೊಳೆದು
ಮಧ್ಯಾಹ್ನ ಕಾವು ಹೊತ್ತ ತಲೆ
ಸಂಜೆ ಚಡಪಡಿಸುವ ಬಿರುಗಾಳಿ
ಗೂಡು ತಲುಪುವ ಪಕ್ಷಿಗಳ
ವೇಗದ ಆಟೋ ಸೈಕಲ್ ಪಾದಚಾರಿಗಳಿಗೆ
ತಂಪಡರಲು ಕುಣಿಯುವ ಕುಪ್ಪಳಿಸುವ
ಮಳೆ ಎಂದರೆ ಪ್ರೀತಿ ನನಗೆ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...