Home / ಕವನ / ಹಾಯ್ಕು / ಹಾಯ್ಕಗಳು

ಹಾಯ್ಕಗಳು

ಬೇಸಿಗೆಯ ಸಂಜೆ
ತಂಗಾಳಿ ಬೀಸಿತು
ತಂಪಿನಲಿ ಅವನ ಉಸಿರಿತ್ತು.

ರಾತ್ರಿಯಲಿ ಆಕಾಶದ
ತುಂಬ ಬೆಳದಿಂಗಳು ಹರಡಿದೆ
ಅಂಗಳದಲಿ ಮಕ್ಕಳು ತುಂಬಿಕೊಂಡಿವೆ.

ಮುಂಜಾವಿನಲಿ
ಹನಿಹನಿ ಇಬ್ಬನಿ ಹಾಸಿವೆ
ನನ್ನಲ್ಲಿ ಕವಿತೆಯ ಜೀವ ಒಸರುತಿದೆ.

ಮಧ್ಯಾಹ್ನದಲಿ
ಒಂದು ಚಮಚ ನೀರು
ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ.

ಓಣಿಯಲಿ ನಡುರಾತ್ರಿ
ಹೆಜ್ಜೆ ಸಪ್ಪಳಗಳು
ನಾಯಿಗಳು ತುಂಬ ಊಳಿಡುತ್ತವೆ.

ಮಗು ಗಲಗಲ ತೊದಲಿತು
ಎದೆಯಲಿ
ದೇವಸ್ಥಾನದ ಗಂಟೆಗಳು ಮೊಳಗಿದವು.

ಅಮವಾಸ್ಯೆಯ ನಂತರ
ಚಂದ್ರ ಹುಟ್ಟುತ್ತಾನೆ
ಕಲ್ಲು ಸಂದಿಯಿಂದ ಕಪ್ಪೆಗಳು ವಟಗುಟ್ಟುತ್ತವೆ.

ಚಿಟ್ಟೆ ಕೆಂಪು ದಾಸವಾಳದ
ಮೇಲೆ ಹಾರಾಡುತ್ತವೆ
ಸೂರ್ಯ ಕೆಂಪಾಗಿ ಉದಯಿಸುತ್ತಾನೆ.

ಮಾಗಿಯ ಚಳಿಯಲಿ
ಹೊದ್ದ ಕಂಬಳಿಯಿಂದ
ನೆನಪಿನ ಕಂಬಳಿ ಹುಳಗಳಿದ್ದವು.

ಚಳಿಗಾಲದ ಸಂಜೆ
ಗಾಳಿ ಸವರುತ್ತವೆ ಜೀವವ
ದೂರದಿಂದ ಉದುರುತ್ತದೆ ನೆರಳು

ಬೇಸಿಗೆಯಲಿ ಅಕಾಲಿಕ ಮಳೆ
ಮಣ್ಣವಾಸನೆಗೆ
ಎದೆಯ ಕನಸುಗಳು ಬಿರಿದವು.

ಸಮುದ್ರದ ದಂಡೆಯಲಿ
ಅಲೆಗಳು ಅಪ್ಪಳಿಸಿವೆ
ನಾನಿನ್ನು ಜೀವಂತವಾಗಿರುವೆ.

ಸಂಜೆ ಹೂವು ಗಿಡ
ಮುಲುಕಾಡಿ ಕಂಪಿಸಿವೆ
ಚಿಟ್ಟೆಭಾರ ಹೆಗಲಿಗೇರಿಸಿಕೊಂಡಿವೆ.

ಅವಳು ಬದುಕು ಬೇಡ ಅಂದಳು.
ಸಾಯಂಕಾಲ ದೇವರ ಮನೆ ನೀಲಾಂಜನದಲಿ
ಮಕ್ಕಳ ಕಣ್ಣುಗಳು ಮಿನುಗಿದವು.

ಈದ್ ಚಾಂದ ಹರಡಿವೆ ತಿಳಿ ಬೆಳದಿಂಗಳು
ಓಣಿಯಲಿ ಹಲಗೆಗಳು ಭಾರಿಸುತ್ತಲಿದೆ
ಬಣ್ಣದ ಹೋಳಿ ಮೃದುವಾಗಿ ಸಿಂಗರಿಸಿದೆ ಊರನು.

ಸಾವಿನ ಕರಿನೆರಳು ತಬ್ಬಿ
ತಲೆಯ ಕೂದಲೆಲ್ಲಾ ಬೋಳು
ವಸಂತನ ಆಗಮವಾಗಿದೆ ಹಸಿರು ಚಿಗುರುತ್ತದೆ.

ಬದುಕಿನ ಕೊನೆಯ ಕ್ಷಣಗಳು
ಸಾವು ತಬ್ಬಿದೆ ಎಷ್ಟೊಂದು
ಶಾಂತಿ ಹಿತಗಳು ಅರಳಿವೆ ಎದೆಯೊಳಗೆ.

ಆ ಪಕ್ಷಿಯ ಏಕಾಂತರ ಹಾಡು
ನೇವರಿಸುತ್ತದೆ ಅವಳ ಕೂದಲು
ಎಲ್ಲಾ ಕಣಿವೆಗಳು ಬೆಳಕು ಹರಡುತ್ತಿದೆ.

ವಸಂತ ಮತ್ತೆ ಬಂದಿದ್ದಾನೆ.
ಪುಟ್ಟ ಹುಲ್ಲುಗರಿಯ ಬೆನ್ನ ಮೇಲೆ
ಹನಿ ಇಬ್ಬನಿ ಕುಳಿತಿದೆ ಒಂದೇ.

ಮಳೆ ಬಿದ್ದು ಒದ್ದೆಯಾದ ಮಣ್ಣು
ಅರಳಿದವು ಕವಿತೆಯ ಕಣ್ಣು
ನಿಶ್ಶಬ್ದದಲಿ ಕವಿ ಕುಳಿತಿದ್ದಾನೆ ಒಬ್ಬನೇ.

ಈ ಮಧ್ಯಾಹ್ನದ ಬಿಸಿಲಿಗೆ
ಬೋಧಿ ಮರದ
ನೆರಳಿನ ಕನವರಿಕೆ.

ಉದಯಿಸುತ್ತಿರುವ ಮಂಕಾದ
ಸೂರ್ಯ ಕಂಬದ ಮೇಲೆ
ಒಂಟಿ ಹಕ್ಕಿ ನೆನಪು.

ಅಂಗಳದ ಸರಿಗೆ ತುಂಬ
ಬಟ್ಟೆಗಳು
ಹಾರಾಡಿವೆ ಬಣ್ಣದ ಚಿಟ್ಟೆಗಳು.

ನೀಲಿ ಬಾನ ತುಂಬ ನಕ್ಷತ್ರಗಳು
ಅರಳಿವೆ ಸುಗಂಧಿ ಅಂಗಳದಲಿ
ಮಿನುಗಿವೆ ಅವಳ ಕಣ್ಣುಗಳು.

ನಿರಂತರ ಚಲನೆಯ ದಾರಿ
ಮೂಡಿದ ಹೆಜ್ಜೆ ಗುರುತುಗಳು
ಅಳಿಸಿವೆ ಅವನ ನೆನಪು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...