Home / ಕವನ / ಕವಿತೆ / ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಅಲೆ ಅಲೆಗಳು ಎಳೆದು
ಮುದ್ದಿಸುತ ಮುನ್ನುಗ್ಗುವ
ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ.
ತುಂತುರ ಮಳೆಗೆ
ಹೊಯ್ದಾಟದ ಹಡಗಿನ ಗಮ್ಮತ್ತಿಗೆ
ಮೈಯೆಲ್ಲಾ ಕಚಗುಳಿಯಾಗುತ್ತಿತ್ತು
ದೂರದ ದೀಪಸ್ತಂಭ
ಸರಹದ್ದಿನ ಭವ್ಯ ಮಹಲುಗಳು
ಸರಕು ಹಡಗುಗಳ ಓಡಾಟ
ಮಂಜು ಮೋಡಗಳೊಳಗೆ
ತೂಗಾಡುವ Sea gullಗಳ
ಸಿನೀಕ್ ದೃಶ್ಯದಲ್ಲಿ
ಕಾಲುವೆಯ ತಣ್ಣನೆಯ ನೀರಿನ
ಕೊರೆಯುವ ಚಳಿಯಲ್ಲಿ ತೇಲಾಡುತ್ತಿದ್ದೆ.
ದ್ವೀಪಗಳಗುಂಟ ಹೊರಳುವಾಗ
ಬಾಲ್ಯದ ಚಂದಮಾಮ ಕಥೆಗಳು
ಏಳು ಸಮುದ್ರದಾಟಿ
ರಾಜಕುಮಾರಿ ಕರೆತರುವ
ರಾಜಕುಮಾರನ ಸಾಹಸಗಳಿಗೆ,
ಮೈ ನವಿರೆಬ್ಬಸಿದ ಆ ಬಾಲೀಶಕ್ಕೆ
ಆ ಆನಂದಕ್ಕೆ, ಮೈ ಮನ
ಹಗುರಾಗಿಸಿಕೊಂಡು
ನಗುತ್ತಲೇ ಈಚೆ ಹೊರಳುವಾಗ
ಪಕ್ಕದ ಸ್ಪ್ಯಾನಿಷ್‌ ಗುಂಪು
ಪ್ಲ್ಯಾಶ್ ಮಾಡಿಕೊಳ್ಳುತ್ತದೆ
ಪುಂಖಾನು ಪುಂಖವಾಗಿ ಮೋಡಗಳು
ಆಕಾಶದಲ್ಲಿ ತೇಲುತ್ತಲೇ ಇವೆ.
ಕೊರೆವ ಮಂಜು
ಎದೆ ನಡಗುವ ಕಡಲುಬ್ಬರಗಳಲ್ಲೂ
ಜಲ ಕನ್ಯೆಯಾಗಿ (mermaid)
ದ್ವೀಪಗಳು ಹೊಕ್ಕು
ಸಂಶಯದ- ಕಟ್ಟುಕಥೆಗಳ
ಬಲೆಗಳೆಳೆದು ಎಳೆಯ ಬಾಲೀಷ
ವಿಜ್ಞಾನಗಳಿಗೆ ವಸ್ತುವಾಗಿಸಿ
ಅನಂತಕ್ಕೇರಿಸುವ; ಸಮುದ್ರದಾಳದ
ಕೊಳವೆ ಮಾರ್ಗದಲ್ಲಿ
(ಇಂಗ್ಲೆಂಡು ಪ್ರಾನ್ಸ್‌ಗಳ ನಡುವೆ)
ಓದಾಡುವ ರೈಲು ಕಾರುಗಳಲ್ಲೆಲ್ಲ
ಓಡಾಡಿಸುವ ಯೋಜನೆ.
ಓರಿಯೆಂಟ್ ಫೆರ್ರಿ ಮುನ್ನುಗ್ಗುತ್ತಿದೆ.
ಕಡಲಂಚು ಅಂಚುಗಳಿಗೆ
ಪೂರ್ವ ಸಿದ್ಧತೆಗಳಿಲ್ಲದೆಯೂ
ಮನಸ್ಸು ಅಂಟಿಕೊಳ್ಳುತ್ತದೆ.
ತುಂತುರ ಮಳೆಗೆ
ಸೂರ್ಯನ ಕಿರಣಗಳು ಸ್ಫಟಿಕಗಳಾಗಿ
ತಲೆ ತುಂಬ ಮೆತ್ತಿ
ವಜ್ರ ಮುಕುಟಗಳಾಗುತ್ತವೆ
ಬ್ರಿಟೀಷ್ ಕಡಲ್ಗಾಲುವೆಯ
ರಾಣಿಯಾಗಿ ನನ್ನ
ಕಾಲರ್ ಸರಿಪಡಿಸಿಕೊಳ್ಳುತ್ತ
ಫೆರ್ರಿ ಮೇಲೆ ಗಂಭೀರ ಹೆಜ್ಜಿಯಿಂದ
ಓಡಾಡಿ ವಜ್ರಮುಕುಟಗಳನ್ನು
ಮುಟ್ಟುತ್ತ ಮುದ್ದಿಸುತ್ತ
ಪ್ಯಾರಿ ನಗರ ಪ್ಯಾರಿಸ್ಸಿಗೆ ಹೆಜ್ಜೆ ಊರಿದೆ.
(ಇಂಗ್ಲೆಂಡಿನಿಂದ ಪ್ರಾನ್ಸ್‌ಗೆ ಹೋಗುವಾಗ ಓರಿಯಂಟ್ ಫೆರ್ರಿಯಿಂದ(ಹಡಗು) ನೋಡಿದ ಅನಿಸಿದ ಆನಂದಿಸಿದ ದೃಶ್ಯ)
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...