Home / ಕವನ / ಕವಿತೆ / ಅಪ್ಪುವಿನ ರೈಲು

ಅಪ್ಪುವಿನ ರೈಲು

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು
ಹೈದರಾಬಾದಿನ ಬಯಲು
ಫಲಕ್‌ನುಮಾದಿಂದ ಬೋಲಾರಾಮಿಗೆ
ಯಾಕೆ ಏನೆಂಬ ಗೊಡವೆಯಿಲ್ಲದೆ
ಕರೆಯುವುದು ಮಂದಿಯನು ರಾತ್ರಿಹಗಲು
ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ
ಎಲ್ಲ ಕಡೆಗೂ ಇದೊಂದೇ ಬಂಡಿ
ಬೆಳಿಗ್ಗೆ ಮಧ್ಯಾಹ್ನ ಸಂಜೆ ಇಳಿಸಂಜೆ
ಕೂತಲ್ಲೆ ಕಣ್ಣಿಗೆ ನಿದ್ದೆ ಹತ್ತುವ ತನಕ
ನಿದ್ದೆಯಲ್ಲಿ ಹೊಸ ಹೊಸ ಕನಸು ಬೀಳುವ ತನಕ
ಯಾವಾಗ ಬಂದರು ಮಂದಿ ಅವರವರ ಮನೆಗೆ
ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಮೂಟೆ
ಏನದರ ಒಳಗೆ ಎಲ್ಲ ರಹಸ್ಯ!

ಕೆಲವೊಮ್ಮೆ ಮಾತ್ರ ನಿಂತು ಬಿಡುವುದು
ಅಪ್ಪುವಿನ ರೈಲು ಅರ್ಧದಾರಿಯಲ್ಲಿ
ಅದರ ಕೊಳವೆಯಿಂದ ಹೋಗುವುದು ಹೊಗೆ
ಅಕಾಶಕ್ಕೆ ಹೋಗಿ ಆಗುವುದು ಮೋಡ
ಮಳೆಯಾಗಿ ಸುರಿದು ಕಪ್ಪೆಗಳ ಕರೆಯುವುದು
ಜನ ಮಾತ್ರ ಕಾಯುವುದಿಲ್ಲ. ಅವರು
ಎಲ್ಲೆಂದರಲ್ಲಿ–ಸಂಕದಲ್ಲಿ, ಬಯಲಲ್ಲಿ
ಭ್ರಮೆಗೊಂಡ ಇರುವೆಗಳಂತೆ
ಇಳಿದು ಚದರುವರು; ದಾರಿ ಬದಿಯ
ಎಮ್ಮೆಗಳು ಹಳ್ಳಕೊಳ್ಳಗಳಿಂದ ಎದ್ದು
ಇದು ಹೀಗೇಕೆಂದು ನೋಡುವುವು
ಅರ್ಥವಾಗದೆ ಹೊರಟುಹೋಗುವುವು

ಅಷ್ಟೂ ಹೊತ್ತು ನಿಂತಲ್ಲೆ ನಿಂತ ಅಪ್ಪುವಿನ ರೈಲು
ಇನ್ನೇನು ರಾತ್ರಿ ಇಲ್ಲೇ ತೆಗೆಯುವುದು ನಿದ್ದೆ
ಎಂದುಕೊಂಡರೆ ಥಟ್ಪನೆ ಹಾಹಾ ಎಂದು
ಅದರ ಗಾಲಿಗಳಿಗೆ ಜೀವ ಬಂದು
ಹೊರಟುಬಿಡುವುದು-ಅದೋ ಆಗ ಬರುವರು
ಇದು ತನಕ ಎಲ್ಲೂ ಕಾಣಿಸದ ಜನರು
ಎಲ್ಲಿ ಹೋಗಿದ್ದರು ಅವರು? ಮಸೀದಿಗೆ.
ದೇವರ ಗುಡಿಗೆ-ಇದು ಪ್ರಾರ್ಥನೆಯ ಸಮಯ!
ಅಪ್ಪುವಿಗೊ ಕುಳಿತಲ್ಲೆ ತೂಕಡಿಕೆ
ರೆಪ್ಪೆಗಳೆಡೆಯಿಂದ ಕಾಣಿಸುವುದೇನು?
ಓಹೊ ನೂರು ಮೆಟ್ಟಿಲ ಮಹಡಿ-ಅದರೊಳಗೆ
ಕುಣಿಯುವುದು ಒಂದು ಕರಡಿ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...