Home / ಕವನ / ಕವಿತೆ / ಪಾರ್ಟಿ ಕಳೆದ ಮೇಲೆ

ಪಾರ್ಟಿ ಕಳೆದ ಮೇಲೆ

ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ
ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು
ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ
ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು
ಟೇಬಲಿನ ಸುತ್ತ ಸೋಫಾದ ಸುತ್ತ ಪಿಯಾನೋದ ಸುತ್ತ
ವಿವಿಧ ಲಯಗಳಲ್ಲಿ ತಾಳಗಳಲ್ಲಿ ಮೇಳಗಳಲ್ಲಿ ಸುತ್ತಿದವರು
ಸುತ್ತಿ ಸುಳಿಸುಳಿಯಾಗಿ ಈ ಕೋಣೆಯೊಳಗೆ ಸುತ್ತ ಮುತ್ತ
ಸುತ್ತಿ ರಾತ್ರಿ ಬೆಳೆದಂತೆ ಆಕಳಿಕೆಯಿಂದ ತೂಕಡಿಸಿದವರು
ಎಲ್ಲರೂ ಎದ್ದು ಹೋದರೂ ಬೆಳಕು ಮಂಕಾದರೂ ಇಲ್ಲಿ
ನಾಲ್ಕು ಗೋಡೆಯೊಳಗೆ ಕೋಣೆ ಏಕಾಕಿಯಾದರೂ ಕೂಡ
ಇವರ ಈ ಹೋದವರ ಮಾತುಕತೆ ಮತ್ತೆ ಉದ್ಗಾರಗಳು
ಉದ್ದುದ್ದ ಚರ್ಚೆಯ ಟೊಳ್ಳುಗಳು ಇವರ ಹೆಂಡಂದಿರ ಒಜ್ಜೆಯ
ಒಯ್ಯಾರದ ಶಬ್ದಗಳು ಅವರ ಆಭರಣದ ಥಳಕುಗಳು
ಮೈ ಎಡೆಯ ಗಂಧಗಳು ಬೆಳೆದ ಕೊಬ್ಬಿನ ಬೇಸರಗಳು
ಇಲ್ಲಿ ಲಯವಾದ ಸ್ವರಗಳು ಕಪ್ಪು ಸಾಸರುಗಳು ತಲೆಕೂದಲುಗಳು
ಸಿಕ್ಕಿಕೊಂಡ ಹೂವಿನ ಚೂರುಗಳು ಮತ್ತು ಉಗಿದ ಮೂಳೆಯ ತುಂಡುಗಳು
ಹೋಮಿಸಿ ಉಳಿದ ಮಂತ್ರಗಳಂತೆ ಸಮಿತ್ತುಗಳಂತೆ ಹವಿಸ್ಸುಗಳಂತೆ
ಏನನ್ನೊ ಬಿಟ್ಟು ಹೋಗಿವೆ ಮಾತು ಕಳೆದ ಧ್ವನಿಗಳಿರಬಹುದು
ಸ್ವರೂಪ ಕಳೆದ ಆಕಾರಗಳಿರಬಹುದು ಅಸ್ತಿತ್ವ ಕಳೆದ ಭೂತಗಳಿರಬಹುದು
ಅಸ್ವಸ್ಥತೆಯಿಂದ ಹೊರಳುತ್ತಿವೆ ಖಾಲಿತನದಲ್ಲಿ ನರಳುತ್ತಿವೆ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...