Home / ಕವನ / ಕವಿತೆ / ಮುಖಗಳು

ಮುಖಗಳು

ಬೆಳಕಿನ ಮುಖಗಳಿವೆ
ಮಣ್ಣಿನ ಮುಖಗಳಿವೆ
ಇವೆರಡರ ನಡುವೆಯೊಂದು
ದಾರಿ ಹುಡುಕುತ್ತೇನೆ:
ಮನುಷ್ಯರ ಮುಖಗಳತ್ತ
ಕೊಂಡೊಯ್ಯುವ ದಾರಿ

ಮುಖವಿಲ್ಲದವನು ನಾನು.

ನಿನ್ನ ಮುಖ ನನ್ನದು
ಅವನದೂ ನನ್ನದೇ
ಅವಳದೂ ಹೌದು.
ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ
ನನ್ನ ಸ್ವರೂಪವೇ ಬಿಂಬಿಸಿದಂತೆ
ಅನಿಸುತ್ತದೆ.
ಮತ್ತು ಈ ಬೃಹತ್ ಕೋಣೆಯಲಿ ನನ್ನ ಸ್ವಗತವೇ
ಧ್ವನಿಯಾಗಿ ಪ್ರತಿಧ್ವನಿಯಾಗಿ
ತಮ್ಮಟೆ ಬಾರಿಸುತ್ತದೆ ನಿರಂತರ.
ಇಷ್ಟೆ ಅಲ್ಲ.
ಈಡಿಪಸ್, ನೀರೊ, ಶಾಜಹಾನ್
ಹೀಗೆ ಸೀರೆನಿರಿಯಂತೆ
ಅಕ್ಷಯ ಅವತಾರಿಯಾಗಿ
ಕೊರೆದಿದ್ದೇನೆ ಚರಿತ್ರೆಯಲಿ
ನನ್ನ ಮುಖಗಳ ಏರುತಗ್ಗು.
ಆಕಾರಕ್ಕೆ ಬಾರದೆ
ನೆರಳಾಗಿ, ನೆರಳೂ ಅಲ್ಲದಾಗಿ
ಅಗೋಚರವಾಗಿ
ಯಾರಿಗೂ ಏನೂ ಅಲ್ಲದೆ
ತೊಟ್ಟು ಕಳಚಿ
ಆಕಾಶದಲ್ಲಿ ತ್ರಿಶಂಕುವಾಗಿ
ತೊನೆಯುತ್ತಿರುವ,
ಇರವಿನರಿವಿಲ್ಲದೆ, ಇರವೂ ಇಲ್ಲದೆ,
ಬದುಕಿ ಸತ್ತಿರುವ
ಸತ್ತು ಬದುಕಿರುವ
ಸಾವು ಬದುಕಿನ ಮಧ್ಯೆ ಪ್ರೇತಾತ್ಮವಾಗಿರುವ
ಆತ್ಮವೇ ಇಲ್ಲದ ಹಲವು ಸಾವಿರ
ಮುಖಗಳೂ ಇವೆ ನನಗೆ.
ಇವೆಲ್ಲವನು ಹೊತ್ತು
ಈಜಿಪ್ತದ ಸ್ಫಿಂಕ್ಸೆನ ಹಾಗೆ
ಭೂತದಿಂದ ಭವಿಷ್ಯತ್ತಿನ ಕಡೆಗೆ
ನಾನು ಮುಂದೊತ್ತಿ ಬರುತ್ತಿದ್ದೇನೆ ಮೆಲ್ಲಗೆ
ಆದರೂ ನನಗೆ ಇವೆಲ್ಲವೂ ಮಸಕು
ಎಲ್ಲ ಮುಖಗಳಿಗೂ ಅಪರಿಚಿತ ಮುಸುಕು
ನಿನ್ನದೂ
ನನ್ನದೂ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...