Home / ಕವನ / ಕವಿತೆ / ಬದುಕೆಂದರೆ ಇಲ್ಲಿ…

ಬದುಕೆಂದರೆ ಇಲ್ಲಿ…

ಅನಿಧಿಕೃತ ಸಮರದಲಿ
ಜೀವ ವಿಶೇಷಗಳ ತಾಣ
ಕ್ಷಣದಲ್ಲಾಯ್ತು ಮಸಣ

ಕುಡಿಯೊಡೆದು ಚಿಗುರಿದ
ನಂದನವನವೆಲ್ಲಾ
ನಿಮಿಷದಲಿ
ಮರುಭೂಮಿಯಾಯ್ತಲ್ಲಾ!

ಗಡಿಮೀರಿ
ಒಳನುಗ್ಗಿದ್ದು ಅವರ ತಪ್ಪೊ?
ಬಿಟ್ಟಿದ್ದು ಇವರ ತಪ್ಪೊ?
ಬೇಕಿಲ್ಲ ತಪ್ಪುಸರಿಗಳ ಅಳತೆ
ರಾಜಕೀಯ ಕುತಂತ್ರದಲಿ
ತಕ್ಕಡಿ ಸರಿದೂಗೀತೇ?

ಕಪಟದೂತ್ಯವ ಆಡುವವರಾರೋ?
ದಾಳ ಒಗೆದವರಾರೋ?
ಗೆದ್ದವರಾರೋ? ಸೋತವರಾರೋ?
ಮುನ್ನುಗ್ಗಿದವರಾರೋ? ಹಿಮ್ಮೆಟ್ಟಿದವರಾರೋ?

ಏನಿಲ್ಲಾ, ಎಂತಿಲ್ಲ
ಸುಮ್ಮಸುಮ್ಮನೆ ಮಣ್ಣೊಳಗೆ
ರಕ್ತದ ನದಿಯಾದವರ
ಲೆಕ್ಕವಿಟ್ಟವರಾರು?
ಅವರಿವರ ತಪ್ಪಿಗೆ.
ತಪ್ಪಿಲ್ಲದೆಯೂ
ಬಲಿಪಶುವಾದರು ಹಲರು.

ನಮ್ಮವನದೋ, ಪರಕೀಯನದೋ
ಜೀವ ಜೀವವೇ ತಾನೇ?
ದೇಶಕ್ಕೆ ಗಡಿಯಷ್ಟೆ
ಸೃಷ್ಟಿಗೆ ಗಡಿಗಳಿವೆಯೆ?
ನಾಳೆಗೇ ಬೆಂಕಿಯೆಲ್ಲವೂ ಆರಿ
ಬೂದಿಯುಳಿದೀತು ಬರಿ.

ಆದರೆ… ಆದರೆ ಹೇಗಳಿಸುವುದು?
ಹೇಗಳಿಸುವುದು ಬಿಸಿ ನೆತ್ತರಿನ ಗುರುತುಗಳನ್ನು?
ಹೇಗೆ ಒರೆಸುವುದು ಸಂಬಂಧಿಗಳ
ಕಣ್ಣೀರಿನ ಶರಧಿಗಳನು?
ಬೇಕೆಂದರೂ ಈಗ
ತರಲಾದೀತೆ ಮತ್ತೆ ಜೀವಗಳನ್ನು?

ಬದುಕೆಂದರೆ ಇಲ್ಲಿ ಹೇ ತಂದೆ
ಮಾರಕಾಸ್ತ್ರಗಳಾಟವೇ?
ರುಂಡ ಚೆಂಡಾಡುವ ಹೂಟವೇ?
ರಾಶಿಹೆಣಗಳ ಕೂಟವೇ?
ಕಣ್ಣಾಮುಚ್ಚೆ ಮಕ್ಕಾಳಾಟವೇ?

ಬದುಕಿಸುವ ಮಂತ್ರ ಅರಿಯದ
ಹುಲುಮನುಜ
ಬದುಕು ಅಳಿಸುವ ತಂತ್ರ ಅರಿತದ್ದು
ಸರಿಯೇ ಪ್ರಭುವೇ?
ಇಲ್ಲಿ ಜೀವಕ್ಕೆ
ಬೆಲೆ ಇದೆಯೇ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...