Home / ಕವನ / ಕವಿತೆ / ಊರಮಂದಿ ದೂರವಾಗೋ ಕಾಲ ಬರುತೈತಿ

ಊರಮಂದಿ ದೂರವಾಗೋ ಕಾಲ ಬರುತೈತಿ

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ
ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ

ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ
ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ

ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ
ಮರದ ತುಂಬಾ ಗಿಲಕಿ ಸದ್ದು ಗಿಲಕುತಿದ್ವಲ್ವೋಽಽಽ

ಅಂಗಳದಾಗ ಅಕ್ಕಿ ಆಯ್ದು ಹಸನು ಮಾಡ್ತಿದ್ವಲ್ಲೇಽಽಽ
ಕಡ್ಡಿ ಕಾಲಿಗೆ ಗೆಜ್ಜೆ ಕಟ್ಟಿ ತಕ ಥೈ ಕುಣಿಯುತಿದ್ವಲ್ಲೋಽಽಽ

ಗುಡಿಸಲಿಗೆ ಗೂಡು ಕಟ್ಟಿ ಜೋಗುಳ ಹಾಡ್ತಿದ್ವಲ್ಲೇಽಽಽ
ಬಾಯಿ ತುಂಬಾ ಬುತ್ತಿ ತಂದು ಉಣ್ಣಾಕಿಡ್ತಿದ್ವಲ್ಲೋಽಽಽ

ಹಠ ಮಾಡಿ ಅಳುವ ಕಂದ ನಿನ್ನ ನೋಡಿ ನಗ್ತಿದ್ದಲ್ಲೇಽಽಽ
ಆಕಾಡೀಕಡೆ ಗೋಣು ತಿರುಗಿಸಿ ನಿನ್ನಂದಾ ನೋಡ್ತಿದ್ವಲ್ಲೋಽಽಽ

ಜ್ವಾಳದೊಲದಾಗ ಬೆಳಸಿ ತಿಂದು ಜೋಕಾಲಿ ಜೀಕತಿದ್ವಲ್ಲೇಽಽಽ
ಮುಚ್ಚಳದಾಗಿನ ನೀರಿನಾಗ ಮುಳುಮುಳುಗಿ ಏಳತಿದ್ವಲ್ಲೋಽಽಽ

ಹಳ್ಳಿ ಮಂದಿಗೂ ಡಿಳ್ಳಿ ರೋಗ ಹೆಂಗ ಬಡದೈತಲ್ಲೇಽಽಽ
ಮಾತಾಡೋ ‘ಮಷಿನು’ ಮಾಯಾ ಮಾಡ್ಯಾವಂತಲ್ಲೋಽಽಽ

ಈ ಹರಕು ಬಾಯಿಗೆ ದೊಡ್ಡರೋಗ ಬಂದು ಸಾಯಬಾರ್ದೇಽಽಽ
ಗುಬ್ಬಿ ಸೆಟೆದಂಗೆ ಸೆಟೆಯೋ ರೋಗ ಅವ್ರುಗು ಬರಬಾರ್ದೆಽಽಽ

ಕಾಗೆ ಗುಬ್ಬಿ ಇಲ್ಲದಾಂಗ ಹೆಂಗೆ ಬದುಕ್ತಾರೋ ಯಮ್ಮಾಽಽಽ
ಎಂಡ್ರು ಮಕ್ಳು ಅಷ್ಟೇ ಅಂದ್ರೆ ಬದುಕು ಯಂಗೋ ಯಪ್ಪಾಽಽಽ

ನೋಡಾನಂದರೆ ಒಂದೂ ಇಲ್ಲಾ ಎಲ್ಲಿ ಹೋಗೀರೇಽಽಽ ಗುಬ್ಬೀಽಽಽ
ಕೇಳಾನಂದರೆ ಸದ್ದೇ ಇಲ್ಲಾ ಎಲ್ಲಿ ಅಡಗೀರೇಽಽಽ ಗುಬ್ಬೀಽಽಽ

ಊರಗುಬ್ಬಿ ಕಾಣದಾದ್ವಲ್ಲೇಽಽಽ ಯಮ್ಮಾಽಽಽ
ಊರಮಂದಿ ದೂರವಾಗೋ ಕಾಲ ಬರ್ತೈತೋಽಽಽ ಯಪ್ಪಾಽಽಽ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...