Home / ಕವನ / ಕವಿತೆ / ಊರಮಂದಿ ದೂರವಾಗೋ ಕಾಲ ಬರುತೈತಿ

ಊರಮಂದಿ ದೂರವಾಗೋ ಕಾಲ ಬರುತೈತಿ

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ
ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ

ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ
ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ

ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ
ಮರದ ತುಂಬಾ ಗಿಲಕಿ ಸದ್ದು ಗಿಲಕುತಿದ್ವಲ್ವೋಽಽಽ

ಅಂಗಳದಾಗ ಅಕ್ಕಿ ಆಯ್ದು ಹಸನು ಮಾಡ್ತಿದ್ವಲ್ಲೇಽಽಽ
ಕಡ್ಡಿ ಕಾಲಿಗೆ ಗೆಜ್ಜೆ ಕಟ್ಟಿ ತಕ ಥೈ ಕುಣಿಯುತಿದ್ವಲ್ಲೋಽಽಽ

ಗುಡಿಸಲಿಗೆ ಗೂಡು ಕಟ್ಟಿ ಜೋಗುಳ ಹಾಡ್ತಿದ್ವಲ್ಲೇಽಽಽ
ಬಾಯಿ ತುಂಬಾ ಬುತ್ತಿ ತಂದು ಉಣ್ಣಾಕಿಡ್ತಿದ್ವಲ್ಲೋಽಽಽ

ಹಠ ಮಾಡಿ ಅಳುವ ಕಂದ ನಿನ್ನ ನೋಡಿ ನಗ್ತಿದ್ದಲ್ಲೇಽಽಽ
ಆಕಾಡೀಕಡೆ ಗೋಣು ತಿರುಗಿಸಿ ನಿನ್ನಂದಾ ನೋಡ್ತಿದ್ವಲ್ಲೋಽಽಽ

ಜ್ವಾಳದೊಲದಾಗ ಬೆಳಸಿ ತಿಂದು ಜೋಕಾಲಿ ಜೀಕತಿದ್ವಲ್ಲೇಽಽಽ
ಮುಚ್ಚಳದಾಗಿನ ನೀರಿನಾಗ ಮುಳುಮುಳುಗಿ ಏಳತಿದ್ವಲ್ಲೋಽಽಽ

ಹಳ್ಳಿ ಮಂದಿಗೂ ಡಿಳ್ಳಿ ರೋಗ ಹೆಂಗ ಬಡದೈತಲ್ಲೇಽಽಽ
ಮಾತಾಡೋ ‘ಮಷಿನು’ ಮಾಯಾ ಮಾಡ್ಯಾವಂತಲ್ಲೋಽಽಽ

ಈ ಹರಕು ಬಾಯಿಗೆ ದೊಡ್ಡರೋಗ ಬಂದು ಸಾಯಬಾರ್ದೇಽಽಽ
ಗುಬ್ಬಿ ಸೆಟೆದಂಗೆ ಸೆಟೆಯೋ ರೋಗ ಅವ್ರುಗು ಬರಬಾರ್ದೆಽಽಽ

ಕಾಗೆ ಗುಬ್ಬಿ ಇಲ್ಲದಾಂಗ ಹೆಂಗೆ ಬದುಕ್ತಾರೋ ಯಮ್ಮಾಽಽಽ
ಎಂಡ್ರು ಮಕ್ಳು ಅಷ್ಟೇ ಅಂದ್ರೆ ಬದುಕು ಯಂಗೋ ಯಪ್ಪಾಽಽಽ

ನೋಡಾನಂದರೆ ಒಂದೂ ಇಲ್ಲಾ ಎಲ್ಲಿ ಹೋಗೀರೇಽಽಽ ಗುಬ್ಬೀಽಽಽ
ಕೇಳಾನಂದರೆ ಸದ್ದೇ ಇಲ್ಲಾ ಎಲ್ಲಿ ಅಡಗೀರೇಽಽಽ ಗುಬ್ಬೀಽಽಽ

ಊರಗುಬ್ಬಿ ಕಾಣದಾದ್ವಲ್ಲೇಽಽಽ ಯಮ್ಮಾಽಽಽ
ಊರಮಂದಿ ದೂರವಾಗೋ ಕಾಲ ಬರ್ತೈತೋಽಽಽ ಯಪ್ಪಾಽಽಽ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...