Home / ಕವನ / ಕವಿತೆ / ಕಾರ್ಗಿಲ್‌ನಿಂದ ಬಂದವನು…!

ಕಾರ್ಗಿಲ್‌ನಿಂದ ಬಂದವನು…!

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ
ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ
ಇವರೆಲ್ಲ ಅಳುತ್ತಿದ್ದಾರೆ.
ದೇಶಭಕ್ತ ಇವ ನಮ್ಮ ಹುಡುಗ
ಜೈಕಾರ ಹಾಕುತ ಮನೆಯ ಬೆಳಕು ನುಂಗಿದ
ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು.

ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು
ಗುಂಗುರು ಕೂದಲು, ನೇರ ಮೂಗು
ಹೇಳಿ ಕೇಳಿ ಇಪ್ಪತ್ತೆರಡರ ಹರೆಯ ಅಷ್ಟೆ.
ಕಿತ್ತು ತಿನ್ನುವ ಬಡತನ
ಮನೆ ತುಂಬ ಮಕ್ಕಳಲಿ ಬೆಳೆದವ
ಕಿಚ್ಚು ರೊಚ್ಚಿನೊಳಗೆ ಹೊಸ ಬದುಕಿಗೆ ಹುಡುಕಾಟ
ಸಿಕ್ಕದ್ದು ಗಡಿಕಾಯುವ ಕೆಲಸ.

ದೇಶಭಕ್ತಿ-ಅಭಿಮಾನವೆಲ್ಲ
ಗಡಿ ಗುಂಪಿನೊಳಗೇ ಬೆಳೆಸಿಕೊಂಡಿದ್ದ.
ಮನೆ ಮಂದಿಯ ಪ್ರೀತಿ ಕೂಡಾ
ಅಲ್ಲೆ ನೆನೆಪಿಸಿಕೊಂಡು ಮಡವುಗಟ್ಟಿದ್ದ.
ಇಲ್ಲಿ ಇದ್ದಾಗಿನ ಸಿಟ್ಟು ಸೆಡವುಗಳನೆಲ್ಲ
ಅಲ್ಲಿ ಇಳಿಸಿಕೊಂಡು
ಉಳಿದೆಲ್ಲ ಜವಾಬ್ದಾರಿ
ನನಗಿರಲೆಂದು ಪತ್ರಬರೆದಿದ್ದ.

ದುರ್ದಿನದೊಂದು ದಿನ ಸಿಡಿಯಿತು
ವೈರಿಗಳ ಕಿಡಿ
ಧಗಧಗನೆ ಹೊತ್ತಿ ಉರಿಯಿತು
ಯೋಧರ ಎದೆ
ಕತ್ತಲು ಕಗ್ಗತ್ತಲಿಗಂಜದೆ
ಮಂಜು ಚಳಿ ಮಳೆಗೆ ಹೆದರದೆ
ಹಸಿವು ಪ್ರಾಣದ ಹಂಗು ತೊರೆದು
ಗುಂಡು ಮದ್ದುಗಳ ನಡುವೆ
ಹೋರಾಡಿದ್ದೇನು
ಉಸಿರು ಉಸಿರಿಗೆ ಪ್ರೀತಿಸಿದ್ದೇನು ದೇಶ.

ವೈರಿಗಳ ಸದ್ದಡಗಿಸುತ ನೆಲತಟ್ಟಿ
ಮಾತೃವಂದನೆ ಮಾಡಿ
ಮುಖಾಮುಖಿ ಕೊರಳಿಗೆ ಕೊರಳುಕೊಟ್ಟು
ದೇಶಭಕ್ತಿ ರಕ್ತ ಪತಾಕೆಗೆ ಹಾರಿಸಿ
ಹೋದ, ಅವ ದೂರ ಹೊರಟೇ ಹೋದ.
ಅವ ನಮ್ಮವ ನಿಮ್ಮವ ಎಲ್ಲರವ
ವೀರಕುಮಾರ, ಮನೆಯಮಗನವ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...