Home / ಕವನ / ಕವಿತೆ / ಕವಿಗಳು

ಕವಿಗಳು

ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ
ನೇರಮಾಡಲು ಇವರು ಸೆಣಸುತ್ತಾರೆ
ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ
ಇವರ ಎದೆ ಏನೇನೋ ಹಾಡುತ್ತದೆ
ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ
ಮೊಗೆಯುತ್ತಾರೆ
ಅಸಂಖ್ಯ ಅಭಿನಯ ದೃಶ್ಯ ತರಂಗ

ಏನು ರಸತುಂಬಿ ಕಳಿಸಿರುವನೋ ಅವನು ಇವರೆದೆಯಲ್ಲಿ
ಅದು ಗಾಳಿಯಲೆಗೂ ಕಲಕಲಗೊಳ್ಳುತ್ತದೆ
ತುಮುಲಗೊಳ್ಳುತ್ತದೆ ಕೊನೆಗೆ ಕುದಿಯತೊಡಗುತ್ತದೆ
ಇವರು ಆ ಕುದಿಯನುಕ್ಕಿಸುತ್ತಾರೆ ಕಕ್ಕುತ್ತಾರೆ
ನೂರೆನೂರೆ ಬಿಸಿಬಿಸಿ ಸಿಡಿಲಂತೆ ಕೆಂಡದ ಮಳೆಯಂತೆ

ಇವರ ವೀಣೆಯ ತಂತಿ ಬಲು ಕೋಮಲ
ಇತರೆಲ್ಲ ತಂತಿಗಳು ಮಿಡಿಯದ ತಾನಗಳಲ್ಲಿ
ಇವು ಮಿಡಿಯುತ್ತವೆ ನುಡಿಯುತ್ತವೆ
ಇತರರು ಅಂದುಕೊಳ್ಳಲೂ ಆಗದುದನು
ಇವರು ಅನುಭವಿಸಿ ದನಿದೋರುತ್ತಾರೆ
ನಿಮ್ಮ ಕಟ್ಟೆಯೇರಿಗಳಿವರಿಗೆ ಸೆರೆಮನೆ

ನಿಂತ ಹೊಂಡು ನೀರೆಂದೂ ಇವರಾಗಲಾರರು
ಹನಿಹನಿ ಜಿನುಗುವ ಒರತೆಯಾದರೂ ಸರಿ
ಕ್ಷಣ ಕ್ಷಣಕೂ ಸೃಷ್ಟಿಯು ಇವರನ್ನು
ಕುಂತಲ್ಲಿ ಕುಳ್ಳಿರಿಸದೆ, ನಿಂತಲ್ಲಿ ನಿಲ್ಲಿಸದೆ, ಮಲಗಗೊಡದೆ
ಹರಿದಾಡಿಸುತ್ತದೆ ಸ್ವಚ್ಛಂಧ ನಿರ್ಝರಿಯಂತೆ
ಧಾರೆ ಧಾರೆ ಜಲಪಾತದಂತೆ, ನೆಲಮುದ್ದಿಸುವ ಮಳೆಯಂತೆ
ಇವರ ನೀರಾಳ ನಿಮ್ಮಳತೆಗೆ ಸಿಗುವುದಂತೂ ಅಲ್ಲ
ನಿಮಗಂತೂ ಇವರ ನಡೆ ಸೊಟ್ಟು, ಹೆಜ್ಜೆ ಹುಚ್ಚುಚ್ಚಾರ
ನುಡಿ ಒಗಟು, ಚರಿತ್ರೆ ವಿಚಿತ್ರ, ನೀತಿ ಅತೀತ
ಇವರ ಬಟ್ಟೆ ಕಂಡಾಬಟ್ಟೆ, ಇವರ ವರ್ತನೆ
ಅದ್ವೈತ-ಅಯೋಮಯ….
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...