Home / ಕವನ / ಕವಿತೆ / ಕವಿತೆಯೆಂದರೇನು?

ಕವಿತೆಯೆಂದರೇನು?

ಕವಿತೆಯಂದರೇನು?
ಕಣ್ಣು, ಕಿವಿ, ಮೂಗು,
ಅಗಲವಾದ ಬಾಯಿ!
ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ!
ಸುಗಂಧ, ಪರಿಮಳ ದ್ರವ್ಯ!
ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ!
ಕಾಮನ ಬಿಲ್ಲಿನ ಸೊಬಗಿನಂತೆ!


ಕವಿತೆಯೆಂದರೇನು?
ಕೈ, ಕಾಲು ಸಣ್ಣ,
ಹೊಟ್ಟೆ ಡುಬ್ಬಾನಲ್ಲ!
ತಗಡು ಡಬ್ಬವಲ್ಲ!
ಕಹಳೆ ಪಾಂಗಿನಂತೆ,
ಶಬ್ದ ದ್ರವ್ಯದಂತೆ,
ಅಭ್ಯಂಜನ ಸ್ನಾನದಂತೆ!
ಮದುವೆ ದಿಬ್ಬಣದಂತೆ!
ವಧು, ವರರ, ಗಂಭೀರ ಹಂಸ ನಡಿಗೆಯಂತೆ.
ಮಂಗಳ ವಾದ್ಯದಂತೆ,
ಗಟ್ಟಿ ಮೇಳದಂತೆ,
ಗುಡಿಯೊಳಗಿನ ಘಂಟೆ ನಾದದಂತೆ,
ಆರತಿ, ಧೂಪದಂತೆ,
ತೀರ್ಥಪ್ರಸಾದ, ಭೋರಿ ಭೋಜನದಂತೆ!
ತಾಂಬೂಲ ಜಗಿದು, ನಾಲಿಗೆ, ತುಟಿ, ಕೆಂಪಾದ ಕಂಪಿನಂತೆ!


ಕವಿತೆಯೆಂದರೇನು?
ಬಡವ ಧನಿಕನ ಅಂತರವಲ್ಲ!
ಊರುಕೇರಿಯ ಅನುಬಂಧದಂತೆ.
ಆಕಾಶ, ಭೂಮಿಯ, ಗುರುತ್ವಾಕರ್ಷಣೆಯಂತೆ.
ಗುಡಿಸಲು ಮಹಡಿಯ ಅಂತರವಲ್ಲ!
ಹೃದಯ ಶ್ರೀಮಂತಿಕೆಯ ಬಾಣ.
ಮಾರಿಗುಡಿಯ ಕೋಣ!
ಜಾಣ ಕವಿಯ ತಾಣ!
ಒಮ್ಮೆ ಬಿಟ್ಟು ಮತ್ತೊಮ್ಮೆ…
ಓದಿ, ಓದಿಸಿ, ಹಾಡಿ, ನಲಿ ನಲಿವ, ಕಾಜಾಣ!
ಸ್ವರ್ಗ ಸುಖದ ತಾಣ!


ಕವಿತೆಯೆಂದರೇನು?
ಹೆಣ್ಣು: ಹೆಣ್ಣಿಗೆ ಎಲ್ಲೆಲ್ಲಿ… ಹೇಗೇಗೆ… ಏನೇನು…
ಎಶ್ಟೆಷ್ಟು… ಇರಬೇಕೋ??…
ಅಶ್ಟೆಷ್ಟಿದ್ದರೆ… ಸಾಲಂಕೃತ ಅಲಂಕಾರ!
ಉಳಿದದ್ದು ಅಹಂಕಾರ!
ಪ್ರತಿಭೆ, ಉತ್ಪತ್ತಿ, ವ್ಯಾಕರಣ, ಛಂದಸ್ಸು, ಲಯ!
ಲಘು, ಗುರು, ಅನುಪ್ರಾಸ, ಅಂತ್ಯಪ್ರಾಸಗಳ ಮೋಡಿ…
ಕೋಡಿ ಬಿದ್ದ ಕೆರೆ, ಕುಂಟೆ, ಜಲಾಶಯಗಳಂತೆ…
ಕೇಶಿರಾಜ, ದಂಡಿ, ವ್ಯಾಸ, ದಾಸ, ಭಾಸರ ಲಾಸ್ಯ ಹಾಸ್ಯದಂತೆ…
ಬ್ರಹ್ಮ ಮೆಚ್ಚಿ, ಜೊಲ್ಲು ಸುರಿಸಿ, ಲಗ್ನವಾದ ಗುಂಗಿನಂತೆ!
ಅಳೆದು, ತೂಗಿ, ಹಾವ, ಭಾವ, ವೈಯಾರ ಹಂಸ ನಡಿಗೆಯಂತೆ!


ಕವಿತೆಯೆಂದರೇನು?
ನವರಸ ಉಕ್ಕಿ, ಮದಗಜ ಸೊಕ್ಕಿ, ಹಕ್ಕಿಯ ಎರಡು ರೆಕ್ಕೆಗಳು!
ನೆರೆ ಹಾವಳಿ ಹೆಚ್ಚಿ, ವೀರ, ಶೂರ, ಧೀರ, ಸೈನಿಕನಂತೆ!!
ನವಗ್ರಹಗಳ ಶಾಂತಿ, ಮಂತ್ರದಂತೆ…
ವ್ಯಾಘ್ರನ ತೀಕ್ಷಣಮತಿ
ಭರದಿ ಪರಿಹಾರ ಕಾರ್‍ಯದಂತೆ…


ಕವಿತೆಯೆಂದರೇನು?
ಮಕ್ಕಳ ಹಾಲು ಹಲ್ಲಿನ ಸಾಲು…
ಪುಟ್ಟ ಕಂದಮ್ಮನ ಕಾಲು!
ಮಗುವಿನ, ಗೋಲಿಯಾಕಾರದ ಕಣ್ಣು!!
ಫಲವತ್ತಾದ ಮಣ್ಣು,
ಮಾಗಿದ ರಸಪುರಿ ಹಣ್ಣು,
ಗಜನಿಂಬೆ ಹೆಣ್ಣು, ಬೆರಗು ಬಿನ್ನಾಣಾಗಿತ್ತಿ!
ಕವಿತೆ, ಕವಿಯ ಕಣ್ಣು! ಕಣ್ಣೀರು! ಪನ್ನೀರು!
ಜಗದ ಹುಣ್ಣು! ವಿಸ್ಮಯದ ಅಭಿವ್ಯಕ್ತಿ…
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...