Home / ಲೇಖನ / ವಿಜ್ಞಾನ / ಗುರುಭ್ಯೋನಮಃ

ಗುರುಭ್ಯೋನಮಃ

ಚಿತ್ರ: ಡೇವಿಡ್ ಮಾರ್ಕ್
ಚಿತ್ರ: ಡೇವಿಡ್ ಮಾರ್ಕ್

ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ ಪೂಜ್ಯ ಭಾವನೆಯನ್ನು ಕೊಡುತ್ತಾ ಬಂದಿದಾನೆ. ‘ಗುರು’ ಎಂಬುವುದು ಸೂರ್ಯನ ಸುತ್ತಲೂ ಸುತ್ತುತ್ತಿರುವ ಅತ್ಯಂತ ದೊಡ್ಡ ಗ್ರಹ. ನಾವು ವಾಸಿಸುವ ಅಥವಾ ಇತರ ಗ್ರಹಗಳಿಗಿಂತಲೂ ಅತ್ಯಂತ ದೊಡ್ಡದಾಗಿದ್ದರಿಂದ ಭೌತಿಕ ಜಗತ್ತಿನಲ್ಲಿಯೂ ಈ ‘ಗುರು’ ಪದವು ಮೇಲ್ಮಟ್ಟದ್ದಾಗಿ ಬೆಳೆಯಿತು.

ಸೂರ್ಯಮಂಡಲದಲ್ಲಿ ಇದೊಂದು ವಿಶಿಷ್ಟವಾದ ಗ್ರ್‍ಅಹ. ಇದು ದೊಡ್ಡ ಗ್ರಹವೂ ಹೌದು ಚಿಕ್ಕ ಸೂರ್ಯಮಂಡಲವೂ ಹೌದು. ಇದಕ್ಕೆ ೧೧ಕ್ಕೂ ಕಡಿಮೆ ಇಲ್ಲದಷ್ಟು ಉಪಗ್ರಹಗಳಿವೆ. ಚಂದ್ರನಂತಹ ಅನೇಕ ಉಪಗ್ರಹಗಳು ಗುರುಗ್ರಹದ ಸುತ್ತಲೂ ಸುತ್ತುತ್ತಲಿವೆ. ೪ ಗ್ರಹಗಳು ಚಂದ್ರನಷ್ಟೇ ದೊಡ್ಡವಾಗಿವೆ. ಎರಡು ಉಪಗ್ರಹಗಳು ಕೇವಲ ೩೦ ಮೈಲಿಗಳ ವ್ಯಾಸವನ್ನು ಹೊಂದಿದ್ದರೆ, ಮೂರು ಗ್ರಹಗಳು ಕೇವಲ ೧೫ ಮೈಲಿಗಳ ವ್ಯಾಸವನ್ನು ಹೊಂದಿವೆ. ಗುರುಗ್ರಹದ ವ್ಯಾಸವು ಭೂಮಿಯ ವ್ಯಾಸಕ್ಕಿಂತಲೂ ೧,೩೦೦ ಪಟ್ಟು ದೊಡ್ಡದು. ಅಂದರೆ ಭೂಮಿಗಿಂತ ೩೬೭,೦೦೦,೦೦೦ ಮೈಲುಗಳ ಅಂತರದಲ್ಲಿದ್ದರೂ ಬರಿಗಣ್ಣಿಗೆ ಕಾಣುತ್ತದೆ. (ಕೆಲವೆಡೆ ಮಾತ್ರ) ಖಗೋಳ ಶಾಸ್ತ್ರಜ್ಞರು ಟೆಲಿಸ್ಕೋಪಿನಿಂದ ನೋಡಿದಾಗ ಗುರುಗ್ರಹಕ್ಕೆ ಕಪ್ಪುಪಟ್ಟಿಗಳು ಇರುವುದನ್ನು ಮತ್ತು ಅವು ವಲಯಗಳಿಂದ ಬೇರ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಈ ಪಟ್ಟಿಗಳು, ವಲಯಗಳು ಬದಲಾಗುತ್ತ ಇರುತ್ತವೆ. ಆಸಕ್ತಿಯ ವಿಷಯವೆಂದರೆ ಗುರುಗ್ರಹದ ಮೇಲೊಂದು ‘ಕೆಂಪುತಲೆ’ ಇದ್ದು ಅದು ಸು. ೩೦,೦೦೦ ಮೈಲುಗಳ ಉದ್ದ ಮತ್ತು ೮,೦೦೦ ಮೈಲುಗಳ ಅಗಲವನ್ನು ಹೊಂದಿದೆ. ಕಲೆ ಕೆಲವೊಮ್ಮೆ ಕಾಣಿಸುವುದೇ ಇಲ್ಲ, ಕೆಲವೊಮ್ಮೆ ಚಲಿಸುತ್ತಿರುವಂತೆ ಕಾಣಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...