Home / ಲೇಖನ / ವಿಜ್ಞಾನ / ಗುರುಭ್ಯೋನಮಃ

ಗುರುಭ್ಯೋನಮಃ

ಚಿತ್ರ: ಡೇವಿಡ್ ಮಾರ್ಕ್
ಚಿತ್ರ: ಡೇವಿಡ್ ಮಾರ್ಕ್

ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ ಪೂಜ್ಯ ಭಾವನೆಯನ್ನು ಕೊಡುತ್ತಾ ಬಂದಿದಾನೆ. ‘ಗುರು’ ಎಂಬುವುದು ಸೂರ್ಯನ ಸುತ್ತಲೂ ಸುತ್ತುತ್ತಿರುವ ಅತ್ಯಂತ ದೊಡ್ಡ ಗ್ರಹ. ನಾವು ವಾಸಿಸುವ ಅಥವಾ ಇತರ ಗ್ರಹಗಳಿಗಿಂತಲೂ ಅತ್ಯಂತ ದೊಡ್ಡದಾಗಿದ್ದರಿಂದ ಭೌತಿಕ ಜಗತ್ತಿನಲ್ಲಿಯೂ ಈ ‘ಗುರು’ ಪದವು ಮೇಲ್ಮಟ್ಟದ್ದಾಗಿ ಬೆಳೆಯಿತು.

ಸೂರ್ಯಮಂಡಲದಲ್ಲಿ ಇದೊಂದು ವಿಶಿಷ್ಟವಾದ ಗ್ರ್‍ಅಹ. ಇದು ದೊಡ್ಡ ಗ್ರಹವೂ ಹೌದು ಚಿಕ್ಕ ಸೂರ್ಯಮಂಡಲವೂ ಹೌದು. ಇದಕ್ಕೆ ೧೧ಕ್ಕೂ ಕಡಿಮೆ ಇಲ್ಲದಷ್ಟು ಉಪಗ್ರಹಗಳಿವೆ. ಚಂದ್ರನಂತಹ ಅನೇಕ ಉಪಗ್ರಹಗಳು ಗುರುಗ್ರಹದ ಸುತ್ತಲೂ ಸುತ್ತುತ್ತಲಿವೆ. ೪ ಗ್ರಹಗಳು ಚಂದ್ರನಷ್ಟೇ ದೊಡ್ಡವಾಗಿವೆ. ಎರಡು ಉಪಗ್ರಹಗಳು ಕೇವಲ ೩೦ ಮೈಲಿಗಳ ವ್ಯಾಸವನ್ನು ಹೊಂದಿದ್ದರೆ, ಮೂರು ಗ್ರಹಗಳು ಕೇವಲ ೧೫ ಮೈಲಿಗಳ ವ್ಯಾಸವನ್ನು ಹೊಂದಿವೆ. ಗುರುಗ್ರಹದ ವ್ಯಾಸವು ಭೂಮಿಯ ವ್ಯಾಸಕ್ಕಿಂತಲೂ ೧,೩೦೦ ಪಟ್ಟು ದೊಡ್ಡದು. ಅಂದರೆ ಭೂಮಿಗಿಂತ ೩೬೭,೦೦೦,೦೦೦ ಮೈಲುಗಳ ಅಂತರದಲ್ಲಿದ್ದರೂ ಬರಿಗಣ್ಣಿಗೆ ಕಾಣುತ್ತದೆ. (ಕೆಲವೆಡೆ ಮಾತ್ರ) ಖಗೋಳ ಶಾಸ್ತ್ರಜ್ಞರು ಟೆಲಿಸ್ಕೋಪಿನಿಂದ ನೋಡಿದಾಗ ಗುರುಗ್ರಹಕ್ಕೆ ಕಪ್ಪುಪಟ್ಟಿಗಳು ಇರುವುದನ್ನು ಮತ್ತು ಅವು ವಲಯಗಳಿಂದ ಬೇರ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಈ ಪಟ್ಟಿಗಳು, ವಲಯಗಳು ಬದಲಾಗುತ್ತ ಇರುತ್ತವೆ. ಆಸಕ್ತಿಯ ವಿಷಯವೆಂದರೆ ಗುರುಗ್ರಹದ ಮೇಲೊಂದು ‘ಕೆಂಪುತಲೆ’ ಇದ್ದು ಅದು ಸು. ೩೦,೦೦೦ ಮೈಲುಗಳ ಉದ್ದ ಮತ್ತು ೮,೦೦೦ ಮೈಲುಗಳ ಅಗಲವನ್ನು ಹೊಂದಿದೆ. ಕಲೆ ಕೆಲವೊಮ್ಮೆ ಕಾಣಿಸುವುದೇ ಇಲ್ಲ, ಕೆಲವೊಮ್ಮೆ ಚಲಿಸುತ್ತಿರುವಂತೆ ಕಾಣಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...