Home / ಲೇಖನ / ವಿಜ್ಞಾನ / ಗುರುಭ್ಯೋನಮಃ

ಗುರುಭ್ಯೋನಮಃ

ಚಿತ್ರ: ಡೇವಿಡ್ ಮಾರ್ಕ್
ಚಿತ್ರ: ಡೇವಿಡ್ ಮಾರ್ಕ್

ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ ಪೂಜ್ಯ ಭಾವನೆಯನ್ನು ಕೊಡುತ್ತಾ ಬಂದಿದಾನೆ. ‘ಗುರು’ ಎಂಬುವುದು ಸೂರ್ಯನ ಸುತ್ತಲೂ ಸುತ್ತುತ್ತಿರುವ ಅತ್ಯಂತ ದೊಡ್ಡ ಗ್ರಹ. ನಾವು ವಾಸಿಸುವ ಅಥವಾ ಇತರ ಗ್ರಹಗಳಿಗಿಂತಲೂ ಅತ್ಯಂತ ದೊಡ್ಡದಾಗಿದ್ದರಿಂದ ಭೌತಿಕ ಜಗತ್ತಿನಲ್ಲಿಯೂ ಈ ‘ಗುರು’ ಪದವು ಮೇಲ್ಮಟ್ಟದ್ದಾಗಿ ಬೆಳೆಯಿತು.

ಸೂರ್ಯಮಂಡಲದಲ್ಲಿ ಇದೊಂದು ವಿಶಿಷ್ಟವಾದ ಗ್ರ್‍ಅಹ. ಇದು ದೊಡ್ಡ ಗ್ರಹವೂ ಹೌದು ಚಿಕ್ಕ ಸೂರ್ಯಮಂಡಲವೂ ಹೌದು. ಇದಕ್ಕೆ ೧೧ಕ್ಕೂ ಕಡಿಮೆ ಇಲ್ಲದಷ್ಟು ಉಪಗ್ರಹಗಳಿವೆ. ಚಂದ್ರನಂತಹ ಅನೇಕ ಉಪಗ್ರಹಗಳು ಗುರುಗ್ರಹದ ಸುತ್ತಲೂ ಸುತ್ತುತ್ತಲಿವೆ. ೪ ಗ್ರಹಗಳು ಚಂದ್ರನಷ್ಟೇ ದೊಡ್ಡವಾಗಿವೆ. ಎರಡು ಉಪಗ್ರಹಗಳು ಕೇವಲ ೩೦ ಮೈಲಿಗಳ ವ್ಯಾಸವನ್ನು ಹೊಂದಿದ್ದರೆ, ಮೂರು ಗ್ರಹಗಳು ಕೇವಲ ೧೫ ಮೈಲಿಗಳ ವ್ಯಾಸವನ್ನು ಹೊಂದಿವೆ. ಗುರುಗ್ರಹದ ವ್ಯಾಸವು ಭೂಮಿಯ ವ್ಯಾಸಕ್ಕಿಂತಲೂ ೧,೩೦೦ ಪಟ್ಟು ದೊಡ್ಡದು. ಅಂದರೆ ಭೂಮಿಗಿಂತ ೩೬೭,೦೦೦,೦೦೦ ಮೈಲುಗಳ ಅಂತರದಲ್ಲಿದ್ದರೂ ಬರಿಗಣ್ಣಿಗೆ ಕಾಣುತ್ತದೆ. (ಕೆಲವೆಡೆ ಮಾತ್ರ) ಖಗೋಳ ಶಾಸ್ತ್ರಜ್ಞರು ಟೆಲಿಸ್ಕೋಪಿನಿಂದ ನೋಡಿದಾಗ ಗುರುಗ್ರಹಕ್ಕೆ ಕಪ್ಪುಪಟ್ಟಿಗಳು ಇರುವುದನ್ನು ಮತ್ತು ಅವು ವಲಯಗಳಿಂದ ಬೇರ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಈ ಪಟ್ಟಿಗಳು, ವಲಯಗಳು ಬದಲಾಗುತ್ತ ಇರುತ್ತವೆ. ಆಸಕ್ತಿಯ ವಿಷಯವೆಂದರೆ ಗುರುಗ್ರಹದ ಮೇಲೊಂದು ‘ಕೆಂಪುತಲೆ’ ಇದ್ದು ಅದು ಸು. ೩೦,೦೦೦ ಮೈಲುಗಳ ಉದ್ದ ಮತ್ತು ೮,೦೦೦ ಮೈಲುಗಳ ಅಗಲವನ್ನು ಹೊಂದಿದೆ. ಕಲೆ ಕೆಲವೊಮ್ಮೆ ಕಾಣಿಸುವುದೇ ಇಲ್ಲ, ಕೆಲವೊಮ್ಮೆ ಚಲಿಸುತ್ತಿರುವಂತೆ ಕಾಣಿಸುತ್ತದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...