Home / ಕವನ / ಕವಿತೆ / ಸತ್ಯದ ನೆತ್ತಿಯ ಮೇಲೆ

ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP
ಬೆಳ್ಳಂ ಬೆಳಗಾಗುವುದರಲ್ಲಿ
ಆತ ಯಾರೇ ಇರಲಿ
ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್
ರಾಜಕಾರಣಿ ಸಾಹಿತಿಯೂ ಇರಬಹುದು
ನೀವು ತಿಳಿದುಕೊಂಡಂತೆ.

ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು
ಅದು ಅವನಿಗೆ ಕೆಟ್ಟ ಚಟ ಇತ್ತಂತೆ
ಹೆಂಡತಿ ಒಣ ಕಣ್ಣು ಒತ್ತಿ ಒತ್ತಿ ಹೇಳಿ
ಏನೇನೊ? ತೋಡಿಕೊಳ್ಳುತ್ತಾಳೆ.

ಅವನು ಒಂದು ರಾತ್ರಿ ಕುಡಿಯುವ
ಜಾನಿವಾಕರ್ ವೊಡ್ಕಾದ ಹಣದಲ್ಲಿ
ಅವನ ಹಳ್ಳಿಯ ಹತ್ತು ಜನರ ಮದುವೆಮಾಡಿ
ಪುಣ್ಯಕಟ್ಟಿಕೊಳ್ಳಬಹುದಿತ್ತಂತೆ.

ಅವನು ಮಾಡುವ ಭರ್ಜರಿ ಪಾರ್ಟಿಖರ್ಚಿನಲಿ
ಅವನೂರಿನ ದೇವರ ಜಾತ್ರೆ
ಅದ್ದೂರಿಯಾಗಿ ಮಾಡಿ ಸಾವಿರ ಜನರಿಗೆ
ಉಣಬಡಿಸಬಹುದಿತ್ತಂತೆ.

ಅವನು ಬೆನ್ನುಹತ್ತುವ ಹೆಣ್ಣುಗಳನೆಲ್ಲ
ಸೋದರಿಯಂತೆ ನೋಡಿಕೊಂಡಿದ್ದರೆ
ಅವರವರು ಮರ್ಯಾದೆಯಾಗಿದ್ದು
ಸಂಸಾರಸ್ಥೆಯರಾಗಿರುತ್ತಿದ್ದರಂತೆ.

ಏರಿಳಿಕೆಯ ಧ್ವನಿಯಲ್ಲೂ
ಸರಳವಾಗಿ ಉದುರುವ ಮಾತುಗಳು.
ಮೌನ ಬಂಗಾರ ಎಂದು ಗೊತ್ತಿದ್ದರೂ
ಹಿತ್ತಾಳೆ ಮಾಡಿ ಕಿಲುಬಲು ಬಿಟ್ಟ
ಗೋಳಾಡಿದಳು.
ಕಾಡು ಬೆಕ್ಕು ಎನ್ನಲೇ
ತೊಂಡರಗೂಳಿ ಎನ್ನಲೇ
ಕಿಡಿಕಿಡಿಯಾಗುತ್ತಿದ್ದಳು.

ಮಧ್ಯರಾತ್ರಿಯ ಮದಿರಾಣಿಯರು
ಗುಂಡು ಇಳಿಸುವ ಗಂಡಬೇರುಂಡರ
ತೆಕ್ಕೆಗಳ ಸುಖ ಹರಡುತ್ತಲೇ ಇದ್ದಷ್ಟು
ಹೀಗೆಽ ಅಗಾಗ
ಸತ್ತು ಬೀಳುತ್ತಾರೆ ಬಿಡಿ…
——–
‘ಮನುಷ್ಯನ ಗುಣ ಮನಸ್ಸು ಹಿನ್ನೆಲೆಗಳನ್ನು ಅವನ ನಡೆ ನುಡಿಗಳೇ ವಿಶದವಾಗಿ ತಿಳಿಸುತ್ತವೆ’ – ರಾಮಾಯಣ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...