Home / ಕವನ / ಕವಿತೆ / ಸತ್ಯದ ನೆತ್ತಿಯ ಮೇಲೆ

ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP
ಬೆಳ್ಳಂ ಬೆಳಗಾಗುವುದರಲ್ಲಿ
ಆತ ಯಾರೇ ಇರಲಿ
ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್
ರಾಜಕಾರಣಿ ಸಾಹಿತಿಯೂ ಇರಬಹುದು
ನೀವು ತಿಳಿದುಕೊಂಡಂತೆ.

ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು
ಅದು ಅವನಿಗೆ ಕೆಟ್ಟ ಚಟ ಇತ್ತಂತೆ
ಹೆಂಡತಿ ಒಣ ಕಣ್ಣು ಒತ್ತಿ ಒತ್ತಿ ಹೇಳಿ
ಏನೇನೊ? ತೋಡಿಕೊಳ್ಳುತ್ತಾಳೆ.

ಅವನು ಒಂದು ರಾತ್ರಿ ಕುಡಿಯುವ
ಜಾನಿವಾಕರ್ ವೊಡ್ಕಾದ ಹಣದಲ್ಲಿ
ಅವನ ಹಳ್ಳಿಯ ಹತ್ತು ಜನರ ಮದುವೆಮಾಡಿ
ಪುಣ್ಯಕಟ್ಟಿಕೊಳ್ಳಬಹುದಿತ್ತಂತೆ.

ಅವನು ಮಾಡುವ ಭರ್ಜರಿ ಪಾರ್ಟಿಖರ್ಚಿನಲಿ
ಅವನೂರಿನ ದೇವರ ಜಾತ್ರೆ
ಅದ್ದೂರಿಯಾಗಿ ಮಾಡಿ ಸಾವಿರ ಜನರಿಗೆ
ಉಣಬಡಿಸಬಹುದಿತ್ತಂತೆ.

ಅವನು ಬೆನ್ನುಹತ್ತುವ ಹೆಣ್ಣುಗಳನೆಲ್ಲ
ಸೋದರಿಯಂತೆ ನೋಡಿಕೊಂಡಿದ್ದರೆ
ಅವರವರು ಮರ್ಯಾದೆಯಾಗಿದ್ದು
ಸಂಸಾರಸ್ಥೆಯರಾಗಿರುತ್ತಿದ್ದರಂತೆ.

ಏರಿಳಿಕೆಯ ಧ್ವನಿಯಲ್ಲೂ
ಸರಳವಾಗಿ ಉದುರುವ ಮಾತುಗಳು.
ಮೌನ ಬಂಗಾರ ಎಂದು ಗೊತ್ತಿದ್ದರೂ
ಹಿತ್ತಾಳೆ ಮಾಡಿ ಕಿಲುಬಲು ಬಿಟ್ಟ
ಗೋಳಾಡಿದಳು.
ಕಾಡು ಬೆಕ್ಕು ಎನ್ನಲೇ
ತೊಂಡರಗೂಳಿ ಎನ್ನಲೇ
ಕಿಡಿಕಿಡಿಯಾಗುತ್ತಿದ್ದಳು.

ಮಧ್ಯರಾತ್ರಿಯ ಮದಿರಾಣಿಯರು
ಗುಂಡು ಇಳಿಸುವ ಗಂಡಬೇರುಂಡರ
ತೆಕ್ಕೆಗಳ ಸುಖ ಹರಡುತ್ತಲೇ ಇದ್ದಷ್ಟು
ಹೀಗೆಽ ಅಗಾಗ
ಸತ್ತು ಬೀಳುತ್ತಾರೆ ಬಿಡಿ…
——–
‘ಮನುಷ್ಯನ ಗುಣ ಮನಸ್ಸು ಹಿನ್ನೆಲೆಗಳನ್ನು ಅವನ ನಡೆ ನುಡಿಗಳೇ ವಿಶದವಾಗಿ ತಿಳಿಸುತ್ತವೆ’ – ರಾಮಾಯಣ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...