Home / ಕವನ / ಕವಿತೆ / ಶಾಂಡಿಲೀಯರ್

ಶಾಂಡಿಲೀಯರ್

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ –
ಮೇಜುವಾನಿಯ ಸಿಹಿ ಕಹಿಯಾಗಿ
ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು
ಯಾರಿಗೂ ಗೊತ್ತಿರಲಿಲ್ಲ.

ಮುಗುಳು ನಗುತ ನಿಸರ್ಗದಲಿ
ಅದ್ದಿ ಬಿಡುವ ನೇಪಾಳ
ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ
ದೊರೆ ಬೀರೇಂದ್ರ ರಾಣಿ ಐಶ್ವರ್ಯ
ಯುವರಾಜ ದೀಪೇಂದ್ರ
ಎಂತೆಂತಹ ರತ್ನಗಳು
ಕಾಠ್ಮಂಡು ಒಡ್ಡೋಲಗಕೆ

ರಾಜಗಾಂಭೀರ್ಯದ ಹುಡುಗಿ ತರುವ ಆಸೆ
ರಾಜಮಾತೆಗೆ,
ಪ್ರೀತಿಸಿದ ಹುಡುಗಿ ಬೇಕೇ ಬೇಕು
ಮೀಸೆ ಮೂಡಿದೆ ಮದೋನ್ಮತ್ತ
ಯುವರಾಜನಿಗೆ.
ಮಾತಿಗೆ ಮಾತು ವರಸೆ ಬೆಂಕಿ.

ವಿಧಿಯೋ ವಿಚಿತ್ರ,
ಪ್ರೇಮದೈಸಿರಿಗೆ ಕಳಚಿಕೊಳ್ಳದ ಸಂಕೋಲೆ,
ಮಾತು ಚರ್ಚೆಗಳಿಗೆಲ್ಲ ಆವೇಶ
ಗುಂಡಿಗೆಯ ರಕ್ತದ ದುಡುಕುತನಕೆ
ಕಿಚ್ಚುಹೊತ್ತಿ ಸುಡುವ ಕೆನ್ನಾಲಿಗೆ.

ಕಾಲನ ಅವೇಶದ ಮುಂದೆ
ಮತಿಹೀನ ಯುವಕ
ರಾಜಗಾಂಭೀರ್ಯ ಧಿಕ್ಕರಿಸಿದ್ದು
ಯಮನ ಅಟ್ಟಹಾಸಕೆ ಕುಮ್ಮಕ್ಕು
ಕಗ್ಗತ್ತಲೆಯ ಕೆಸರಲಿ ಸಿಕ್ಕ ಕಾಲಕ್ಕೆ
ಚಲಿಸದ ಜಡತ್ವ.

ದವಡೆಮೀರಿದ ಕೋಪಾಗ್ನಿಯಲಿ
ಯುವರಾಜ ಕೈಗೆತ್ತಿದ ಬಂದೂಕು
ನುಗ್ಗಿ ನುಗ್ಗಿ ಬಂದ ಗುಂಡಿನಮಳೆಗೆ
ಒಂದೊಂದೇ ಕಳಚಿದವು
ಕಿರೀಟ ರತ್ನಗಳು,
ನೆತ್ತರ ಮಡುವಿನಲಿ ಮುಳುಗಿ
ಕಗ್ಗತ್ತಲ ಕಣಿವೆಯಲಿ ಹೆಣವಾದವು

ನೇಪಾಳದ ಅಂಗಳದ ತುಂಬೆಲ್ಲ
ರಕ್ತದೋಕುಳಿ ಕಿರುಚಾಟ ಹಾಲಾಹಲ
ಅರಮನೆಯ ದೀಪಗಳೆಲ್ಲ ಒಡೆದು ನುಚ್ಚುನೂರು
ಸುತ್ತೆಲ್ಲ ಕಪ್ಪು ಕತ್ತಲೆ!

(ದೇವಯಾನಿ ರಾಣಾಳ ಪ್ರೇಮಪಾಶಕ್ಕೆ ಸಿಲುಕಿದ ನೇಪಾಳದ ಯುವರಾಜ ಅವಿವೇಕಿಯಾಗಿ ಗುಂಡು ಹಾರಿಸಿ ಎಲ್ಲರನ್ನೂ ಕೊಂದು ತಾನೂ ಸತ್ತುಹೋದ)
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...