Home / ಕವನ / ಕವಿತೆ / ಅಡ್ಡಗೋಡೆ ದೀಪಗಳು

ಅಡ್ಡಗೋಡೆ ದೀಪಗಳು

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ,
ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ
ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು
ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ)
ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು
ನೋವು ರಕ್ತದೊತ್ತಡದ ಅವರೆದೆಗೆ
ಮತ್ತೆ ಮತ್ತೆ ಶೂಲ ತ್ರಿಶೂಲ!

ಗ್ರಹಣ ವೇದೋಪನಿಷತ್ ಪಠಣದೊಳಗೆ
ಜನಿವಾರ ಬದಲಾಯಿಸಿ ಮಡಿಯಾಗುತ್ತಿದ್ದರೆ
ಕ್ಲಬ್ಬಿನ ತುಂಬೆಲ್ಲ ಹುಳಿವಾಸನೆಗೆ
ಕರಿದ ಮಾಂಸಕ್ಕೆ ಡಿಸ್ಕೋ ತಾಳ
ಮಕ್ಕಳು ಮೊಮ್ಮಕ್ಕಳು ಅವರ ಹೆಂಡತಿಯರು
ಸರ ಬಳೆ ಮೂಗುತಿ ಸೀರೆಗಳ ಮಾತು
ಆಚೆ ಕುಡುಕರಿಗೆ ಬಾಯ್ತುಂಬ ನಗು.

ತುಕ್ಕು ಹಿಡಿದ ಲಾಂದ್ರ ಫಿಲಿಪ್ಸ ಬಲ್ಬುಗಳ
ವಿಚಾರಧಾರೆಗಳ ತಿಕ್ಕಾಟ ಹೊಕ್ಕಾಟಕೆ
ಒಳಗೊಳಗೆ ಅಳು ನಗುವುಗಳ ಬಿಸಿಲುಮಳೆ
ವಿದೇಶಿ ಐಶಾರಾಮಿ ಸವಲತ್ತು
ಬೇಕಾದಾಗೆಲ್ಲ ಸಾಧಿಸಿಕೊಳ್ಳುವ ಡೊಳ್ಳುಗಳು
ಸಂಜೆ ಭಾಷಣ ಬಹಿರಂಗ ಸಭೆಗಳಲಿ
ತೋರಿಕೆಗೆ ಟೆಬಲ್‌ಕುಟ್ಟಿ
ನೀತಿಗಳ ಬಗೆಗೆ ಮಾತನಾಡುವ ಅಡ್ಡಗೋಡೆಗಳು.

ಹಸಿವು ನೀರು ಬರಗಾಲಕೆ ಹಣಮಾಡುವ
ಯೋಜನಾ ಶಿಬಿರಗಳ ಉದ್ದನೆಯಪಟ್ಟಿ-
ಇವುಗಳಿಗೆ ಮನೆಗೆ ಬಣ್ಣ ಸುಣ್ಣ
ಸೋಫಾ ಬದಲಿಸಿಕೊಳ್ಳುವ ಸಂಭ್ರಮದ ಸಮಯ
ಇಪ್ಪತ್ತೆಂಟು ಇಂಚಿನ ಟಿ. ವಿ. ಹಾಕಿ
ಜಗತ್ತನ್ನೇ ನೋಡುವ ಇವುಗಳೆಲ್ಲಿ
ಗುಡಿಸಲಲ್ಲೇ ಕೊಳೆತು
ಸಾಯುತ್ತೇವೆನ್ನುವ ಅವುಗಳೆಲ್ಲ
ಜಾಗತೀಕರಣ ಉದಾರೀಕರಣದ ಬಗೆಗೆ
ಉದ್ದುದ್ದ ಅಡ್ಡಡ್ಡ ಮಾತನಾಡುವ
ಅಡ್ಡಗೋಡೆ ದೀಪಗಳು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...