Home / ಕವನ / ಕವಿತೆ / ಅಡ್ಡಗೋಡೆ ದೀಪಗಳು

ಅಡ್ಡಗೋಡೆ ದೀಪಗಳು

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ,
ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ
ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು
ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ)
ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು
ನೋವು ರಕ್ತದೊತ್ತಡದ ಅವರೆದೆಗೆ
ಮತ್ತೆ ಮತ್ತೆ ಶೂಲ ತ್ರಿಶೂಲ!

ಗ್ರಹಣ ವೇದೋಪನಿಷತ್ ಪಠಣದೊಳಗೆ
ಜನಿವಾರ ಬದಲಾಯಿಸಿ ಮಡಿಯಾಗುತ್ತಿದ್ದರೆ
ಕ್ಲಬ್ಬಿನ ತುಂಬೆಲ್ಲ ಹುಳಿವಾಸನೆಗೆ
ಕರಿದ ಮಾಂಸಕ್ಕೆ ಡಿಸ್ಕೋ ತಾಳ
ಮಕ್ಕಳು ಮೊಮ್ಮಕ್ಕಳು ಅವರ ಹೆಂಡತಿಯರು
ಸರ ಬಳೆ ಮೂಗುತಿ ಸೀರೆಗಳ ಮಾತು
ಆಚೆ ಕುಡುಕರಿಗೆ ಬಾಯ್ತುಂಬ ನಗು.

ತುಕ್ಕು ಹಿಡಿದ ಲಾಂದ್ರ ಫಿಲಿಪ್ಸ ಬಲ್ಬುಗಳ
ವಿಚಾರಧಾರೆಗಳ ತಿಕ್ಕಾಟ ಹೊಕ್ಕಾಟಕೆ
ಒಳಗೊಳಗೆ ಅಳು ನಗುವುಗಳ ಬಿಸಿಲುಮಳೆ
ವಿದೇಶಿ ಐಶಾರಾಮಿ ಸವಲತ್ತು
ಬೇಕಾದಾಗೆಲ್ಲ ಸಾಧಿಸಿಕೊಳ್ಳುವ ಡೊಳ್ಳುಗಳು
ಸಂಜೆ ಭಾಷಣ ಬಹಿರಂಗ ಸಭೆಗಳಲಿ
ತೋರಿಕೆಗೆ ಟೆಬಲ್‌ಕುಟ್ಟಿ
ನೀತಿಗಳ ಬಗೆಗೆ ಮಾತನಾಡುವ ಅಡ್ಡಗೋಡೆಗಳು.

ಹಸಿವು ನೀರು ಬರಗಾಲಕೆ ಹಣಮಾಡುವ
ಯೋಜನಾ ಶಿಬಿರಗಳ ಉದ್ದನೆಯಪಟ್ಟಿ-
ಇವುಗಳಿಗೆ ಮನೆಗೆ ಬಣ್ಣ ಸುಣ್ಣ
ಸೋಫಾ ಬದಲಿಸಿಕೊಳ್ಳುವ ಸಂಭ್ರಮದ ಸಮಯ
ಇಪ್ಪತ್ತೆಂಟು ಇಂಚಿನ ಟಿ. ವಿ. ಹಾಕಿ
ಜಗತ್ತನ್ನೇ ನೋಡುವ ಇವುಗಳೆಲ್ಲಿ
ಗುಡಿಸಲಲ್ಲೇ ಕೊಳೆತು
ಸಾಯುತ್ತೇವೆನ್ನುವ ಅವುಗಳೆಲ್ಲ
ಜಾಗತೀಕರಣ ಉದಾರೀಕರಣದ ಬಗೆಗೆ
ಉದ್ದುದ್ದ ಅಡ್ಡಡ್ಡ ಮಾತನಾಡುವ
ಅಡ್ಡಗೋಡೆ ದೀಪಗಳು.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...