Home / ಕವನ / ಕವಿತೆ / ಕಟ್ಟಕಡೆಯವರ ಕತೆ ಕೇಳಿ…

ಕಟ್ಟಕಡೆಯವರ ಕತೆ ಕೇಳಿ…

ಚಿತ್ರ: ಟೀನಾ
ಚಿತ್ರ: ಟೀನಾ

ಅವರಿವರಂತಲ್ಲಿವ…. ಕಾಲಪುರುಷ!
ಶಕ್ತಿಗೆ, ಯುಕ್ತಿಗೆ, ಮುಕ್ತಿಗೆ ಯುಗಪುರುಷ!
ಈ ಜಗಕೆ, ಈ ಸೃಷ್ಠಿಗೆ, ಮೂಲನಿವ!
ತ್ರಿಶೂಲನಿಗೇ, ತಾಳಿಬೊಟ್ಟು ಮಾಡಿಕೊಟ್ಟ, ಆದಿಬ್ರಹ್ಮ!
ಕಾಮಧೇನುವ ಈ ಭುವಿಗೆ, ಹೊತ್ತು ತಂದ, ಭೂಪನೀವ!
ರುದ್ರ-ಭದ್ರ-ಆರಿದ್ರನೆಂಬಾ ಮೂರು ಜಡೆ…!
ಶಂಕು, ಚಕ್ರ, ನಗಚಕ್ರ, ತ್ರಿನೇತ, ಮುನಿಪುಂಗವ!
‘ಮಾತಂಗವಾಡೆ’ಯ ಅಧಿಪತಿಯೆನಿಸಿ,
ಜಲದಲಿ, ಖಂಡುಗ ತಪಸ್ಸು ಮಾಡಿ,
ಜಲ, ಚರ, ಆಕಾಶ, ಜೀವಿಗಳಿಗೆಲ್ಲ
ಜನ್ಮದಾತ… ಬ್ರಹ್ಮನೀತ!
ಮುಕ್ಕೋಟಿ ದೇವತೆಗಳಿಗೆ ಅಪ್ಪ,
ನಾರಾದ ಮಹಾಮುನಿಗೆ ತಾತ!
ಆದಿಶಕ್ತಿಗೆ ತಾಳಿ ಬಿಗಿದ ತಂದೆ!
ಕ್ರಿಷ್ಣನೊಂದಿಗೆ ಹೋರಾಡಿದ್ದಕ್ಕೆ:
ಮಗಳಿನ್ನಿತ್ತು, ಶಮಂತಕ ಮಣಿಯನ್ನಿತ್ತ, ಜಾಂಬುವಂತ!!
ಜಂಬೂದ್ವೀಪಾಧೀಪತಿ!
ಏಕ ಚಕ್ರಾಧಿಪತಿ!


ಇಂದು: ಅಕಾಶ, ಭೂಮಿ, ಊರು, ಕೇರಿಯನ್ನೊಮ್ಮೆ
ಪರಿವಾರದೆಡೆಗೊಮ್ಮೆ ಮುಖವಿಟ್ಟ…
ಮುಖವೋ… ಉರಿ… ಉರಿ… ಊರುಮಾರಿಯಮ್ಮಾ…
ನಗಚಕ್ರ, ಆಲೆಯ ಮನೆಯಂತೆ, ರಾವು… ರಾವು…
ಅದೇನು ಆವೇಶವೋ?! ಆತೂರವೋ?? ಕೋಪವೋ…
ಅಪ್ಪ, ಅಮ್ಮ, ತಾತ, ಮುತ್ತಾತರನ ಕಂಡಾ ಹಳೇ ಬೇರು!
ನೂರರ ಹರೆಯದ, ರಾಮಯ್ಯ… ಏಳು ಕೊಂಡಲವಾಡಯ್ಯ


ಅವರಿವರಂತಿರುವಾ
ಎಲ್ಲರಂತಿರುವಾ ಮನುಶ್ಯಾ ಕೃತಿ!
ಇಂದಿಗೂ ಕೇರಿ ಹೊರಗೆ!!
ಬೆಳಿಗ್ಗೆ ಸಂಜೆ… ಕೇರಿ ಮುಂದೆ, ಕುಂತಪರಿಯೇ ‘ಸರಗು ಗುನಿಯು’
ನಿಗಿ ನಿಗಿ ಉರಿವಕಣ್ಣು, ಬಿಳಿಗಡ್ಡ, ಕೇಸರಿ ರುಮಾಲು!
ಹಗಲಹಣೆಗೆ-ಉದ್ದ ಮೂರು ನಾಮ! ಬಿಳಿ-ಕೆಂಪು-ಕೇಸರಿ!
ಕೊರಳಲ್ಲಿ-ರುದ್ರಾಕ್ಷಿ ಮಾಲೆ, ಎದೆಯ ಮೇಲೆ-ಬೆಳ್ಳಿ ಲಿಂಗ,
ಏನಾವನ ಲೀಲೆಯೋ? ಮಾಯೆಯೋ… ಖಾಯಾಲಿಯೋ…??
ಹೆಗಲಿಗೊಂದು: ಕರಿ ಕಂಬಳಿ, ಬಲಗೈಗೆ ಬೆಳ್ಳಿ ಕಡುಗ…
ಬಲಗಾಲಿಗೆ ಗಗ್ರಿಯು! ಬೀದರ ಕೋಲ ಎದುರಿಗೇ…
ಮೂರು ಬಾರಿನ, ಗಿರಿಕಿ ಕಾಲ್ಮಾರಿ ಕಾಲಿಗೆ!
ಕ್ವಾರೆ ಮೀಸೆ, ಆರಡಿ ಎತ್ತರದ, ಸರದಾರನ ಭಂಗಿ,
ತೀರಾ ಹಳೇ ಅಂಗಿ…
ಅದರ ಮೇಲೊಂದು: ಕರೀ ಕೋಟು! ಜೋಗೇರಾ ಹಾಗೇ…
ಅಕ್ಕಪಕ್ಕ… ಪಾತ್ರೆ, ಪಡುಗಾ, ಚಂಬು, ಗಂಗಾಳ, ಕ್ವಣೆಗೇ…!
ಕಂಚಿಶಾಸನಧೀಶನಾಗಿ, ಮಾದಿಗರ ‘ಆಳ್ಮಾಗ’ನಾಗಿ…
ಅದೇ ಗತ್ತು, ಗಮ್ಮತ್ತಿನಲ್ಲೇ…
ಕೂಗಿಕೂಗಿ… ಮಾದಿಗರ ಕರೆವ, ದಣಿವು ಈಗಲೂ…!


ಈ ನೆಲಮುಗಿಲಿಗೆ ಕರ್ತಾರನಿವ!
ಅಂದು… ಸಲ್ಲಿದವ! ಪೊರೆದವ! ಒಡೆಯ!
ಇಂದೂ.. ಸಲ್ಲುವ ಪರಿಯೇ, ಬೆಕ್ಕಸ ಬರಗು!
ಶತಶತಮಾನದ ಈ ಮುದೀತೇರೂ…
ಹರಿದು ಬಂದಾ ಜೋರಿಗೆ, ಲೆಕ್ಕವಿಟ್ಟವರ್‍ಯಾರು?!
‘ಇವ ನಮ್ಮವ… ಇವನಮ್ಮವ…’
ಎಂದು… ಅಭಿಮಾನಪಡುವ, ಮಾದಿಗರೂ…
ಹೊರಗೆ… ಹೊರಗೆ… ಈಗಲೂ ಕೇರಿ ಹೊರಗಿಟ್ಟಿರುವಾ…
ಪರಿಪರಿಯೇ ನಿಬ್ಬೆರಗು! ಒಗಟು! ಕಗ್ಗಂಟು!


ನಗುನಗುತ್ತಾ… ನಿತ್ಯ ಸತ್ಯ ಕತೆಯ, ಹಗಲಿರುಳು ಸಾರುತ್ತಾ…
ಮುದ್ದೆ, ಸಾರು, ಬಾನ, ನೀರೂ ಕೇಳುತ್ತಾ… ಕೇರಿ, ಕೇರಿ ಅಲೆವಾಽ…
ಬಟ್ಟೆ, ಬರೆ, ಕಾಳು ಕಡಿ, ರಕ್ಕ, ಕುರಿ, ಮೇಕೆ, ಪಡೆಯುತ್ತಾ… ನಲಿವಾಽಽ…
ಹರನ ಮೆಟ್ಟಿದವ, ನರನ ಮೆಟ್ಟಿಗೂ, ಕಡೆಯಾದ ಜೀವನವೀಗ!!
ತನ್ನದೇ ನೆರಳಿಗೆ ಬೆಚ್ಚಿಬಿದ್ದು… ಅಲೆ ಅಲೆವಾ…
‘ಗುದುಮುರಿಗೆ’ ಬಿಳುವಾ…
ಬೆರಗುಗಣ್ಣಿನ ಮುದುಕ… ದಕ್ಕಲು ರಾಮಯ್ಯ, ಒಂಟಿ… ಒಬ್ಬಂಟಿ!
ಹಸಿದ ಕರುಳಿಗೆ, ಬಸವಳಿದ ದೇಹಕ್ಕೆ, ಬರೀಗೈಗಳ ವೇದಾಂತ!!
ತಿರಿದುಣ್ಣುವ ಮಂದಿ… ಈ ಮಾದಿಗರಿಗೆ, ಕೂಗಿಣ್ಣುವ ಈ ದಕ್ಕಲ!
ಆಶ್ಚರ್ಯವಿದು… ಎಂಟನೇ ಅದ್ಭುತ!! ಸೋಜಿಗದ ಕಥೆಯಿದು…
ಬುದ್ಧ, ಬಸವ, ಗಾಂಧಿ, ನೆಹರು, ಅಂಬೇಡ್ಕರ್‍ ನಾಡಿನಲಿ…
ಹಸಿದವರ… ಹಸುಗೂಸಾದ, ಈ ದಕ್ಕಲ
ಇಂದಿಗೂ… ಯಾರಿಗೂ ದಕ್ಕದವಾಽಽ…
ಹರ್ಷದಲಿ, ವರ್ಷ ವರ್ಷ, ತನ್ನ ಕಟ್ಟಕಡೆಯ ಕತೆಯ ಸಾರುವ…
ಕಿವಿಯಿದ್ದರೆ ‘ಕೇಳಿ…’
ಕಣ್ಣಿದ್ದರೆ ‘ಕಾಣಿ…’ ಎನ್ನುವ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...